ಹೀಗೂ ಉಂಟು.! 'ಕರ್ವ' ಟ್ರೈಲರ್ ನೋಡಿ, ಬೆಚ್ಚಿಬೀಳುವುದು ಖಾತ್ರಿ.!
ಒಂದು ಟಿಫನ್ ಬಾಕ್ಸ್, ಅದರಿಂದ ಬರುವ 'ಢಮ್' ಎಂಬ ಶಬ್ಧ. ಇಷ್ಟು ಮಾತ್ರದಿಂದಲೇ '6-5=2' ಸಿನಿಮಾ ಕನ್ನಡ ಪ್ರೇಕ್ಷಕರನ್ನು ಥಿಯೇಟರ್ ಬಳಿ ಆಕರ್ಷಿಸಿತ್ತು. ನೋಡನೋಡುತ್ತಲೇ ಕೋಟಿ ಕೋಟಿ ಕಲೆಕ್ಷನ್ ಮಾಡಿ 'ಸೂಪರ್ ಹಿಟ್' ಆಯ್ತು.
ಈಗ ಅದೇ '6-5=2' ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ ಬಂಡವಾಳ ಹಾಕಿರುವ ಹೊಸ ಚಿತ್ರವೇ 'ಕರ್ವ'. '6-5=2'ದಂತೆ, 'ಕರ್ವ' ಚಿತ್ರವೂ ನಿಮ್ಮನ್ನ ಬೆಚ್ಚಿಬೀಳಿಸಲಿದೆ. ಬೇಕಾದ್ರೆ, ಈಗಷ್ಟೇ ರಿಲೀಸ್ ಆಗಿರುವ 'ಕರ್ವ' ಚಿತ್ರದ ಟ್ರೈಲರ್ ನೋಡ್ಕೊಂಡ್ ಬನ್ನಿ....
'ಕರ್ವ' ಟ್ರೈಲರ್ ನೋಡ್ತಿದ್ರೆ, ಮೇಲ್ನೋಟಕ್ಕೆ ಚಿತ್ರಕಥೆಯಲ್ಲಿ ಎರಡು ಟ್ರ್ಯಾಕ್ ಇರುವುದು ಕನ್ಫರ್ಮ್. ಶ್ರೀಮಂತ ಉದ್ಯಮಿ ರಘುವರ್ಧನ್ ಪುತ್ರಿ ಕಿಡ್ನ್ಯಾಪ್ ಒಂದ್ಕಡೆ ಆದರೆ, ರಾಜ ಬಂಗಲೆಗೆ ಕಾಡುವ ಪ್ರೇತದ ಕಾಟ ಇನ್ನೊಂದೆಡೆ. [ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!']
ಟಿವಿ 9 ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಹೀಗೂ ಉಂಟೇ.!' ಕಾರ್ಯಕ್ರಮದಂತೆ 'ರಾಜ ಬಂಗಲೆ'ಯಲ್ಲಿರುವ ಅಗೋಚರ ಶಕ್ತಿ ಅನಾವರಣ ಮಾಡಲು ವೈ.ಎ.ನಾರಾಯಣಸ್ವಾಮಿ ಕೂಡ 'ಕರ್ವ' ಚಿತ್ರದ ಪಾತ್ರಧಾರಿ ಆಗಿದ್ದಾರೆ. [ಮೀಟರ್ ಇರುವವರಿಗೆ ಮತ್ತೊಂದು ಕೊಡುಗೆ 'ಕರ್ವ'.!]
ಇನ್ನೂ ಉದ್ಯಮಿ ಪಾತ್ರದಲ್ಲಿ ದೇವರಾಜ್ ನಟಿಸಿದ್ದರೆ, ಆರ್.ಜೆ ರೋಹಿತ್, ತಿಲಕ್, ನೆ.ಲ.ನರೇಂದ್ರ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್, ಹಾರರ್...ಮೂರು ಅಂಶಗಳು ಬೆರೆತಿರುವ 'ಕರ್ವ' ಪ್ರೇಕ್ಷಕರನ್ನು ಎದೆ ನಡುಗಿಸುವುದರಲ್ಲಿ ಡೌಟ್ ಬೇಡ. [ರಾಕ್ ಸ್ಟಾರ್ ರೋಹಿತ್ 'ಕರ್ವ' ಹೀರೋ ಗುರು]
ಅಂದ್ಹಾಗೆ, 'ಕರ್ವ' ಚಿತ್ರಕ್ಕೆ ನವನೀತ್ ನಿರ್ದೇಶಕ. ಇದೇ ತಿಂಗಳ ಅಂತ್ಯಕ್ಕೆ 'ಕರ್ವ' ಬಿಡುಗಡೆ ಆಗಲಿದೆ.


Click it and Unblock the Notifications












