Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೂಕಂಪ-ಸುನಾಮಿಯನ್ನ ಒಂದು ಮಾಡಿದ 'ಸಿಂಹ' ಸುದೀಪ್
ಇಲ್ಲಿಯವರೆಗೂ ಸುದೀಪ್ ರನ್ನ 'ಕಿಚ್ಚ' ಸುದೀಪ್ ಅಂತ ಪ್ರೀತಿಯಿಂದ ಅಭಿಮಾನಿಗಳು ಕರೆಯುತ್ತಿದ್ರು. ಇನ್ಮುಂದೆ ಇದೇ ಅಭಿಮಾನಿಗಳು ಸುದೀಪ್ ರನ್ನ 'ಸಿಂಹ' ಸುದೀಪ್ ಅಂತ ಕರೆದರೆ ಅಚ್ಚರಿ ಇಲ್ಲ. ಹಾಗಿವೆ, ಸುದೀಪ್ ಅಭಿನಯಿಸಿರುವ 'ರನ್ನ' ಚಿತ್ರದ ಡೈಲಾಗ್ಸ್.
'ಆರಡಿ ಕಟೌಟ್' ಅಂತ ಸುದೀಪ್ ಗೆ ಹೊಸ ಬಿರುದು ಕೊಟ್ಟಿರುವ 'ರನ್ನ' ಚಿತ್ರತಂಡ, ಚಿತ್ರದಲ್ಲಿ ''ಕೆಲವು ಸಿಂಹಗಳ ವಿಚಾರಕ್ಕೆ ಹೋಗದೇ ಇದ್ದರೇನೆ ಬೆಟರ್'' ಅಂತ ಸುದೀಪ್ ಬಾಯಿಂದ ಬೆಂಕಿ ಉಂಡೆಗಳನ್ನ ಉದುರಿಸಿದೆ. ಸಾಲದಕ್ಕೆ ವಿಲನ್ ಗಳಿಂದ ''ಭೂಕಂಪ-ಸುನಾಮಿ ಎರಡನ್ನೂ ಒಂದು ಮಾಡ್ತಾನೆ'' ಅನ್ನುವ ಬಿಲ್ಡಪ್ ನೀಡಿದೆ. [ವಜ್ರಕಾಯ ಬಿಡುಗಡೆ ಮುನ್ನ ರನ್ನ ರಿಲೀಸ್ ಯಾಕೆ ಚಿನ್ನ?]
ಈಗಷ್ಟೇ ರಿಲೀಸ್ ಆಗಿರುವ 'ರನ್ನ' ಚಿತ್ರದ ಲೇಟೆಸ್ಟ್ ಟ್ರೇಲರ್ ನಲ್ಲಿ ಸುದೀಪ್ 'ಸಿಂಹ' ಘರ್ಜನೆ ಹೇಗಿದೆ ಅಂತ ಒಮ್ಮೆ ನೀವೇ ನೋಡಿಬಿಡಿ....
ಥೇಟ್ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ರೇಂಜಿಗೆ 'ರನ್ನ' ರಿಚ್ಚಾಗಿ ರೆಡಿಯಾಗಿದೆ. ಕಾಮಿಡಿ- ಆಕ್ಷನ್-ಸೆಂಟಿಮೆಂಟ್ ನಲ್ಲಿ ಸುದೀಪ್ ಸಿಕ್ಸರ್ ಬಾರಿಸಿರುವ ಲಕ್ಷಣ ಟ್ರೇಲರ್ ನಲ್ಲಿ ಎದ್ದು ಕಾಣುತ್ತೆ. ಕಿಚ್ಚನ ಜೊತೆ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿಸುವುದಕ್ಕೆ ರಚಿತಾ ರಾಮ್ ಮತ್ತು ಹರಿಪ್ರಿಯಾ ಇದ್ದಾರೆ. [ಹೊಸ ಟ್ರೆಂಡಿಗೆ ನಾಂದಿ ಹಾಡಿದ ಕಿಚ್ಚ ಅಭಿನಯದ 'ರನ್ನ']
'ವಿಕ್ಟರಿ' ಮತ್ತು 'ಅಧ್ಯಕ್ಷ' ಚಿತ್ರಗಳ ನಂತರ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ 'ರನ್ನ'. ವರ್ಷಗಳ ನಂತರ 'ಅಣ್ಣಯ್ಯ' ಮಧೂ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಚಿತ್ರ ಇದು. ಹಲವು ವಿಶೇಷತೆಗಳಿಂದ ಕೂಡಿರುವ 'ರನ್ನ' 04/06/2015 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. 'ರನ್ನ' ಬರೋದು ಯಾವಾಗ ಚಿನ್ನಾ..? ಅಂತ ಕೇಳುತ್ತಿದ್ದ ಅಭಿಮಾನಿಗಳು 'ರನ್ನ'ನ ಅವತಾರ ನೋಡುವುದಕ್ಕೆ ರೆಡಿಯಾಗಿ. (ಫಿಲ್ಮಿಬೀಟ್ ಕನ್ನಡ)