Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಓ ಮೈ ಡಿಯರ್' -ಪರಿಸರ ಮತ್ತು ಮನುಷ್ಯರ ಬೇಟೆ ತೀಟೆ
ಬೇಟೆಯಾಡೋದು ಮಾನವನಿಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿಗಳಲ್ಲಿ ಒಂದು, ಆದರೆ ನಾಗರೀಕತೆಯ ತೊಟ್ಟಿಲಿಗೆ ಬಿದ್ದ ಮನುಷ್ಯ ತನ್ನ ಸುತ್ತಲಿನ ಪ್ರದೇಶವನ್ನು ತಾನು ಹಿಡಿತಕ್ಕೆ ಪಡೆದು ಅದನ್ನು ನಿಯಂತ್ರಿಸುವುದನ್ನು ಕಲಿತ.
ಆದರೆ ತದನಂತರದ ಬೆಳವಣಿಗೆಯಲ್ಲಿ ಈ ಕಲಿಕೆ ವ್ಯತಿರಿಕ್ತ ವಿಚಾರಗಳಿಗೆ ನಾಂದಿ ಹಾಡಿತು. ಮುಂದೆ ಪರಿಸರವನ್ನೇ ನಾಶಗೊಳಿಸಿ ತಾನು ಬದುಕಬಲ್ಲೆ ಎಂಬ ಗೊಡ್ಡು ಪ್ರತಿಷ್ಠೆಯೊಂದಿಗೆ ತನ್ನನ್ನು ತಾನು ಹೊಗಳಿಕೊಳ್ಳುತ್ತಿದ್ದಾನೆ.
ಅಂದಹಾಗೆ ನಾವು ಈ ಥರ ಪೀಠಿಕೆ ಹಾಕಲು ಮುಖ್ಯ ಕಾರಣ ಏನಪ್ಪಾ ಅಂದ್ರೆ 'ಬೇಟೆ'ಗೆ ಸಂಬಂಧಿಸಿದಂತೆ ಇದೀಗ ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ 'ಓ ಮೈ ಡಿಯರ್' 'ಡೊಂಟ್' ಎನ್ನುವ ಅಡಿಬರಹದಲ್ಲಿ ಮೂಡಿ ಬಂದಿರುವ ಕಿರು ಚಿತ್ರವೊಂದು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು, ಸಖತ್ ರೆಸ್ಪಾನ್ಸ್ ಗಳಿಸುತ್ತಿದೆ.
ಆದರೆ 'ಬೇಟೆ' ಅನ್ನೋ ಮೋಜಿನ ಸೆಳೆತಕ್ಕೆ ಸಿಲುಕುವ ಮೂವರು ಸ್ನೇಹಿತರು ಹೇಗೆ ತಮ್ಮ ಬಾಳಿನಲ್ಲಿ ಸಹಿಸಲಸಾಧ್ಯವಾದ ದುರಂತ ಕಾಣುತ್ತಾರೆಂಬುದನ್ನು ಈ ಕಿರು ಚಿತ್ರ ಹೇಳಲು ಹೊರಟಿದೆ.
ಕಿರು ಚಿತ್ರದಲ್ಲಿ ಯುವ ಪತ್ರಕರ್ತ ಮಾಲತೇಶ್ ರಚಿಸಿರುವ ಕವನದ ಸಾಲುಗಳು ಪ್ರಸ್ತುತ ನಿಸರ್ಗದ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯದ ಪರಿಸ್ಥಿತಿಯನ್ನು ಭಾವನಾತ್ಮಕವಾಗಿ ತೆರೆದಿಡುವ ಪ್ರಯತ್ನ ಮಾಡಿದೆ, ಜೊತೆಗೆ ಚಿತ್ರಕ್ಕೆ ಕಥೆಗಾರರು ಇವರೇ.
ಯುವಕರೆ ಒಗ್ಗೂಡಿ ರಚಿಸಿರುವ 'ಮೈಕ್ರೋ ಬಜೆಟ್ ಮೂವಿ ಮೇಕರ್ಸ್'ನ ಈ ಕಿರುಚಿತ್ರದ ನಿರ್ದೇಶಕ ಗುರುರಾಜ್ ಎಸ್.ಎಂ.ಜಿ. ನಟರಾಗಿ ಸುನೀಲ್, ಪುನೀತ್ ಶೆಟ್ಟಿ, ಕಾರ್ತಿಕ್, ಸಿದ್ದರಾಜು ಅಭಿನಯಿಸಿದ್ದಾರೆ.
ಚಿತ್ರದ ಕ್ಯಾಮರಾ ವರ್ಕ್ ಸೇರಿದಂತೆ ಎಡಿಟಿಂಗ್ ಸಖತ್ ಆಗಿದ್ದು, ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬಹುದು. ಈ ಕಿರು ಚಿತ್ರದಲ್ಲಿ 'ಡಿಯರ್' ಎನ್ನುವ ಪದಕ್ಕೆ 2 ಅರ್ಥಗಳು ಬರುತ್ತಿದ್ದು, ಅದೇನೆಂಬುದನ್ನು ನೋಡಲು ಈ ಚಿತ್ರ ವೀಕ್ಷಿಸಿ
"ಹೇ
ಹುಂಬನೆ
ನೀನ್ಯಾರೋ
ನಿಸರ್ಗದೊರತು,
ಅನ್ಯತೆಗೆ
ಬೆಲೆಯಿಟ್ಟ
ನಿನ್ನ
ಮೌಲ್ಯಗಳದೆಲ್ಲಿ
ಬಿಕರಿಯಾದವೋ,
ನೀನಿನ್ನು
ಜಡದ
ಕೂಸು,
ನಿರ್ಜೀವ
ತತ್ವಗಳಾಧಾರದಿ...
ಸತ್ಯವನು
ಮರೆಮಾಚಿ
ಸೂರೆಗೈದೆ
ಎಲ್ಲವ,
ನಿನ್ನ
ಸೂರಿಗಾಗಿ
ಬಲಿಯಾದ
ಮರಕದೇಕೆ
ಕೊಡಲಿ,
ಇನ್ನೆಲ್ಲೋ
ಬದುಕು,
ಪರಾವಲಂಬಿಯೇ
ವಿಮರ್ಶಿಸು
ನಿನ್ನಾತ್ಮವ"...