Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳು ಕಂದನಿಗೆ ಹೃದಯವನ್ನೇ ಎತ್ತಿ ಕೊಟ್ಟ ನಮ್ಮ ರಾಕಿಂಗ್ ಯಶ್
ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ ಅವರು 'ಸ್ಪಿರಿಟ್ ಆಫ್ ಚೆನ್ನೈ' ಎಂಬ ಆಲ್ಬಂ ಸಾಂಗ್ ಒಂದನ್ನು ಹೊರತಂದಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರವಾಹದ ಬಗ್ಗೆ 'ಐ' ಖ್ಯಾತಿಯ ನಟ ಕಮ್ ನಿರ್ದೇಶಕ ಚಿಯಾನ್ ವಿಕ್ರಂ ಅವರು ತಾವೇ ನಿರ್ದೇಶನ ಮಾಡಿ ಸುಂದರವಾದ ವಿಡಿಯೋ ಒಂದನ್ನು ಹೊರತಂದಿದ್ದಾರೆ.[ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಂತೆ ತಮಿಳಿನ ವಿಕ್ರಂ]
ಅಂದಹಾಗೆ ಈ ವಿಡಿಯೋ ಆಲ್ಬಂನ ವಿಶೇಷ ಏನಪ್ಪಾ ಅಂದ್ರೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಮಾಲಿವುಡ್ ನಿಂದ ಒಬ್ಬೊಬ್ಬ ಸ್ಟಾರ್ ನಟರನ್ನು ಚೆನ್ನೈಗೆ ಕರೆಸಿಕೊಂಡು ಈ ಹಾಡಿನಲ್ಲಿ ಸೇರಿಸಿಕೊಳ್ಳಲಾಗಿದೆ.
ಇಡೀ ಚಿತ್ರರಂಗದ ಸ್ಟಾರ್ ನಟ-ನಟಿಯರನ್ನು ಒಂದೇ ಫ್ರೇಮ್ ನಲ್ಲಿ ಸೇರಿಸಿಕೊಂಡು ಮಾಡಿರುವ 'ಸ್ಪಿರಿಟ್ ಆಫ್ ಚೆನ್ನೈ' ವಿಡಿಯೋ ಆಲ್ಬಂ ನೋಡುಗರ ಮನಕಲಕುವಂತಿದೆ. ಮಾತ್ರವಲ್ಲದೇ 'ಏನಾದರೂ ಅವಘಡ ಸಂಭವಿಸಿದರೆ ಮಾತ್ರ ನಾವೆಲ್ಲಾ ಒಂದಾಗಬೇಕಾ? ಇಲ್ಲದಿದ್ದಲ್ಲಿ ಒಂದಾಗಬಾರದೇ?, ಎಂಬ ಸಂದೇಶ ಇರುವ ಈ ವಿಡಿಯೋ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ಈ ಸುಂದರ ವಿಡಿಯೋ ನೀವು ನೋಡಿ..
ಈ ಜಾಗೃತಿ ಮೂಡಿಸುವ ವಿಡಿಯೋ ಸಾಂಗ್ ನಲ್ಲಿ ನಮ್ಮ ಕನ್ನಡ ಚಿತ್ರರಂಗ ಕ್ಷೇತ್ರದ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಪಾಲ್ಗೊಂಡಿದ್ದಾರೆ. ಅಲ್ಲದೇ ಮಲಯಾಳಂ ನಟರಾದ ನಿವಿನ್ ಪೌಲ್, ಪೃಥ್ವಿ ರಾಜ್, ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ತಮಿಳು ಚಿತ್ರರಂಗದ ಸ್ಟಾರ್ ಗಳು ಭಾಗವಹಿಸಿದ್ದಾರೆ.
ಎಸ್.ಪಿ ಬಾಲಸುಬ್ರಮಣ್ಯಂ, ಶಂಕರ್ ಮಹದೇವನ್, ವಿಜಯ್ ಯೇಸುದಾಸ್ ಮುಂತಾದವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಆಲ್ಬಂ ವಿಡಿಯೋ ಸಾಂಗ್ ನ ಶೂಟಿಂಗ್ ಸ್ಟಿಲ್ಸ್ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...