Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಾಲಿನ ಅಭಿಷೇಕ ಮಾಡುವಾಗ ಅವಘಡ: ಕುಸಿದ ಅಜಿತ್ ಕಟೌಟ್, ಐವರಿಗೆ ಗಂಭೀರ ಗಾಯ.!
Recommended Video
ಇದಕ್ಕೆ ಅತಿರೇಕದ ಅಭಿಮಾನ ಎನ್ನಬೇಕೋ.. ಹುಚ್ಚುತನ ಅಂತ ತಲೆ ಚಚ್ಚಿಕೊಳ್ಳಬೇಕೋ.. ಗೊತ್ತಿಲ್ಲ. ಒಟ್ನಲ್ಲಿ, ಅಭಿಮಾನ ಪ್ರದರ್ಶಿಸಲು ಹೋಗಿ ಐವರು ಅಭಿಮಾನಿಗಳು ಆಸ್ಪತ್ರೆ ಸೇರಿದ್ದಾರೆ.
ನೆಚ್ಚಿನ ನಟನ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ಹೋಗಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ತಮಿಳುನಾಡಿನಲ್ಲಿ ನಡೆದಿದೆ.
ನಿಮಗೆಲ್ಲಾ ಗೊತ್ತಿರುವ ಹಾಗೆ, ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಚಿತ್ರ ತೆರೆಗೆ ಬಂದಿದೆ. ರಜನಿ ಚಿತ್ರಕ್ಕೆ ಪೈಪೋಟಿ ನೀಡಲು ಅಜಿತ್ ಅಭಿನಯದ 'ವಿಶ್ವಾಸಂ' ಕೂಡ ಇಂದೇ ತೆರೆಗೆ ಅಪ್ಪಳಿಸಿದೆ. ಸಂಕ್ರಾಂತಿ ಹಬ್ಬದ ಸುಸಂದರ್ಭದಲ್ಲಿ ಈ ಎರಡೂ ಚಿತ್ರಗಳು ರಿಲೀಸ್ ಆಗಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ.
ರಜನಿ ಪೋಸ್ಟರ್ ಗಳಿಗೆ ಬೆಂಕಿಯಿಟ್ಟ ಅಜಿತ್ ಅಭಿಮಾನಿಗಳು.! ಥಿಯೇಟರ್ ಮುಂದೆ ಉದ್ವಿಗ್ನ ವಾತಾವರಣ.!
'ವಿಶ್ವಾಸಂ' ಚಿತ್ರವನ್ನ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಥಿಯೇಟರ್ ಗಳ ಮುಂದೆ ಅಜಿತ್ ರವರ ಬೃಹತ್ ಕಟೌಟ್ ಗಳನ್ನು ನಿಲ್ಲಿಸಲಾಗಿತ್ತು. ಈ ಪೈಕಿ ಒಂದು ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ಅಭಿಮಾನಿಗಳ ದಂಡು ಮೇಲೆ ಹತ್ತಿದ್ದಾರೆ. ಅತಿಯಾದ ಭಾರವನ್ನು ತಡೆಯಲಾರದೆ, ಕಟೌಟ್ ದಿಢೀರನೆ ಕುಸಿದು ಬಿತ್ತು. ಹಾಲಿನ ಅಭಿಷೇಕ ಮಾಡಲು ನಿಂತಿದ್ದ ಅಭಿಮಾನಿಗಳು ಕೂಡ ದೊಪ್ಪನೆ ಕೆಳಗೆ ಬಿದ್ದರು. ಪರಿಣಾಮ ಐವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Ajith Cut out accident Visvasam: https://t.co/WvXiPHWZKE via @YouTube
— suresh balaji 2.0 (@surbalu) January 10, 2019
'ಪೇಟಾ' ಟ್ವಿಟ್ಟರ್ ವಿಮರ್ಶೆ: ರಜನಿ ಸಾರ್ ಈಸ್ ಬ್ಯಾಕ್, ಅಭಿಮಾನಿಗಳು ಫುಲ್ ಖುಷ್.!
ಒಂದ್ಕಡೆ, ಉಭಯ ಸ್ಟಾರ್ ಗಳ ಅಭಿಮಾನಿಗಳ ಮಧ್ಯೆ ಕಿತ್ತಾಟ ನಡೆದಿದ್ದು, ರಜನಿ ಪೋಸ್ಟರ್ ಗಳನ್ನು ಅಜಿತ್ ಫ್ಯಾನ್ಸ್ ಹರಿದು ಹಾಕಿ ಬೆಂಕಿ ಹಚ್ಚಿದ್ದಾರೆ. ಇನ್ನೊಂದ್ಕಡೆ, ಹಾಲಿನ ಅಭಿಷೇಕ ಮಾಡಲು ಹೋಗಿ ಅಜಿತ್ ಅಭಿಮಾನಿಗಳು ಆಸ್ಪತ್ರೆ ಸೇರಿದ್ದಾರೆ.
ಸಿನಿಮಾ ನೋಡಿ ಸಂಭ್ರಮ ಪಡಬೇಕಿದ್ದ ಅಭಿಮಾನಿಗಳು, ಅಭಿಮಾನ ಮೆರೆಯಲು ಹೋಗಿ ಅವಘಡಕ್ಕೀಡಾಗಿರುವುದು ವಿಷಾದನೀಯವೇ ಸರಿ.