Don't Miss!
- News ನೇಹಾ ಹಿರೇಮಠ್ ಹತ್ಯೆ; ಕಾಣದ ಕೈಗಳಿಂದ ಕೊಲೆ ಆರೋಪಿ ರಕ್ಷಣೆ ಎಂದ ಜೆಡಿಎಸ್
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್
ಲಹರಿ ಆಡಿಯೋ ಸಂಸ್ಥೆ ದಾಖಲಿಸಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಕಿರಿಕ್ ಪಾರ್ಟಿ' ಸಿನಿಮಾ ತಂಡದ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿತ್ತು ಹಾಗಾಗಿ ಇಂದು (ಏಪ್ರಿಲ್ 12) ನಟ ರಕ್ಷಿತ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನ್ಯಾಯಾಲಯದಲ್ಲಿ ಪ್ರಕರಣ ಮುಗಿಸಿ ಬಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಕ್ಷಿತ್ ಶೆಟ್ಟಿ, 'ಇದೊಂದು ಸುಲಿಗೆ ತಂತ್ರ ಅಷ್ಟೆ. ಹಿಂದೆಯೂ ಕೆಲವು ಸಿನಿಮಾಗಳಿಗೆ ಹೀಗೆ ಮಾಡಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಸರಿಯಾಗಿ ಬಂದು ಪ್ರಕರಣ ದಾಖಲಿಸುವುದು, ಬಿಡುಗಡೆಗೆ ತೊಂದರೆ ಮಾಡುವುದು ಮಾಡುತ್ತಾರೆ' ಎಂದು ಲಹರಿ ಸಂಸ್ಥೆಯ ಹೆಸರು ಹೇಳದೆ ವಾಗ್ದಾಳಿ ನಡೆಸಿದರು ರಕ್ಷಿತ್ ಶೆಟ್ಟಿ.
'ನಮ್ಮ ಮೇಲೆ ಪ್ರಕರಣ ದಾಖಲಾದಾಗ ನಾವು ಚೆನ್ನೈಗೆ ಹೋಗಿ ಹಾಡನ್ನು ಕತ್ತರಿಸಿದೆವು, ನ್ಯಾಯಾಲಯದ ಆದೇಶ ಬಂದ ಬಳಿಕ ಹಾಡು ಬಿಡುಗಡೆ ಮಾಡಿದೆವು. ಆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಗೆದ್ದೆವು ಸಹ. ಮತ್ತೆ ಮೂರು ವರ್ಷಗಳ ನಂತರ ನನ್ನ ಮೇಲೆ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಪರಮ್ವಹ ಸ್ಟುಡಿಯೋ ಮೇಲೆ ಪ್ರಕರಣ ದಾಖಲಿಸಿದರು. ನಾನು ಮನೆ ಬದಲಿಸಿದ್ದೆ ಹಾಗಾಗಿ ನನಗೆ ಮಾಹಿತಿ ಇರಲಿಲ್ಲ. ಆದರೆ ಅಜನೀಶ್ ನೋಟಿಸ್ ಅನ್ನೂ ಸಹ ನನ್ನ ಹಳೆಯ ಮನೆಗೆ ಕಳಿಸಿದ್ದರು, ನಮಗೆ ನೋಟಿಸ್ ತಲುಪಬಾರದೆಂದೇ ಅವರು ಹೀಗೆ ಮಾಡಿದ್ದರು ಎಂಬುದು ಇದರಿಂದಲೇ ಗೊತ್ತಾಗುತ್ತದೆ' ಎಂದರು ರಕ್ಷಿತ್ ಶೆಟ್ಟಿ.
'ನೋಟಿಸ್ ಬಗ್ಗೆ ನಮಗೆ ಗೊತ್ತಿಲ್ಲದಿರುವ ಕಾರಣ ನಾವು ಉತ್ತರಿಸಿರಲಿಲ್ಲ ಹಾಗಾಗಿ ವಾರೆಂಟ್ ಹೊರಡಿಸಲಾಗಿತ್ತು. ಹಾಗಾಗಿ ಈಗ ಬಂದು ಉತ್ತರ ನೀಡಿದ್ದೀವಿ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಾವು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿಲ್ಲ. ನಾವು ಹಂಸಲೇಖ ಅವರ ಹಾಡಿನ ರಿಧಮ್ ಅನ್ನು ಮಾತ್ರ ಫಾಲೋ ಮಾಡಿದ್ದೀವಿ. ನೋಟ್ಸ್ ಕಾಪಿ ಮಾಡಿಲ್ಲ. ಮೆಲೋಡಿ ಅಥವಾ ಸಾಹಿತ್ಯ ನಕಲು ಮಾಡಿದ್ದರೆ ಮಾತ್ರ ಹಕ್ಕುಸ್ವಾಮ್ಯ ಉಲ್ಲಂಘನೆ ಆಗುತ್ತದೆ. ಆದರೆ ನಾವು ಹಾಡನ್ನು ನಕಲು ಮಾಡಿಲ್ಲ' ಎಂದರು ರಕ್ಷಿತ್ ಶೆಟ್ಟಿ.
Recommended Video
'ಸಂಗೀತ ಹಕ್ಕುಸ್ವಾಮ್ಯ ನಿಯಮದಂತೆ ಯಾವುದೇ ಸಂಗೀತವನ್ನು 11 ಸೆಕೆಂಡ್ ಬಳಸಬಹುದಾಗಿದೆ ಆದರೆ ನಾವು ಅದನ್ನೂ ಸಹ ಮಾಡಿಲ್ಲ. ನಾವು ನಕಲು ಮಾಡಿದ್ದೇವೆ ಎಂದು ತೋರಿಸಿದರೆ ನಾನು ಒಪ್ಪಿಕೊಳ್ಳುತ್ತೇನೆ. ಅಹಂಗೆ ಬಿದ್ದು ಹೀಗೆ ನೋಟಿಸ್ ಕಳಿಸಿದ್ದಾರೆ ಅಷ್ಟೆ. ಆದರೆ ನನಗೆ ಇದು ಹೊಸ ಅನುಭವ, ನಾನು ಯಾವತ್ತೂ ನ್ಯಾಯಾಲಯಕ್ಕೆ ಹೋಗಿರಲಿಲ್ಲ. ಸಿನಿಮಾಗಳಲ್ಲಿ ನೋಡಿದ್ದೆ ಅಷ್ಟೆ. ಇನ್ನು ಮುಂದೆ ಯಾವಾಗಲಾದರೂ ಸಿನಿಮಾಕ್ಕಾಗಿ ಕೋರ್ಟ್ ದೃಶ್ಯಗಳನ್ನು ಬರೆಯಬೇಕಾದರೆ ಈ ಅನುಭವ ಬಳಸಿಕೊಳ್ಳುತ್ತೇನೆ' ಎಂದಿದ್ದಾರೆ ರಕ್ಷಿತ್ ಶೆಟ್ಟಿ.