ಪುನೀತ್ ಆತ್ಮದ ಜೊತೆ ಡಾ. ಶ್ರೀ ರಾಮಚಂದ್ರ ಗುರೂಜಿ ಸಂಭಾಷಣೆ; ಕೇಳಿದ ಮೂರು ಪ್ರಶ್ನೆಗೆ ಸಿಕ್ಕ ಉತ್ತರವೇನು?

By ಫಿಲ್ಮಿಬೀಟ್ ಡೆಸ್ಕ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಮೂರು ವರ್ಷಗಳಾಗುತ್ತಾ ಬಂದಿದೆ. ಆದರೂ, ಅಪ್ಪು ನೆನಪುಗಳನ್ನು ಅವರ ಅಭಿಮಾನಿಗಳು ಇನ್ನು ಮರೆತಿಲ್ಲ. ಪುನೀತ್ ರಾಜ್‌ಕುಮಾರ್ ದಿಢೀರ್ ಅಗಲಿಕೆ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಅಷ್ಟೊಂದು ಫಿಟ್ ಆಗಿದ್ದ ಪುನೀತ್ ರಾಜ್‌ಕುಮಾರ್ ಅಗಲುವುದಕ್ಕೆ ಹೇಗೆ ಸಾಧ್ಯ ಅನ್ನುವ ಗೊಂದಲದಲ್ಲಿ ಇದ್ದರು.

ಆಧ್ಯಾತ್ಮೀಕ ಗುರುಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಡಾ. ಶ್ರೀ ರಾಮಚಂದ್ರ ಗುರೂಜಿ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಆತ್ಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಸಂಭಾಷಣೆ ನಡೆದಿದ್ದಾಗಿ ಹೇಳಿಕೊಂಡಿದ್ದಾರೆ.

What are the three questions Dr Ramachandra Guruji asked with Puneeth Rajkumar Soul

ಆರ್‌ಜೆ ರಾಜೇಶ್ ನಡೆಸಿಕೊಡುವ ಈ ಸಂದರ್ಶನದಲ್ಲಿ ಡಾ. ಶ್ರೀ ರಾಮಚಂದ್ರ ಗುರೂಜಿ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಪ್ಪು ಆತ್ಮಕ್ಕೆ ಕೇಳಿದ ಮೂರು ಪ್ರಶ್ನೆಗಳ ಬಗ್ಗೆ ರಿವೀಲ್ ಮಾಡಿದ್ದಾರೆ. ಅದಕ್ಕೆ ಅಪ್ಪು ಆತ್ಮದಿಂದ ಉತ್ತರ ಕೂಡ ಸಿಕ್ಕಿದೆ ಎಂದೂ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ಕೆಲವು ತುಣುಕುಗಳು ಹೀಗಿವೆ.

ವೈಯಕ್ತಿಕವಾಗಿ ಸಂಭಾಷಣೆ ಮಾಡಿದ್ದೆ

"ಆತ್ಮ ಸಂಭಾಷಣೆ ಮಾಡುವುದಕ್ಕೆ ಸಾಧ್ಯ. ಅದೊಂದು ಟೆಕ್ನಾಲಜಿ. ಆಧ್ಯಾತ್ಮದಲ್ಲಿ ಹಿಂದಿನ ಜನ್ಮಗಳನ್ನು ತಿಳಿದುಕೊಳ್ಳುವುದಕ್ಕೆ ಹೇಗೆ ಟೆಕ್ನಾಲಜಿ ಇದೆಯೋ ಹಾಗೇ ಸತ್ತವರ ಜೊತೆ ಸಂಭಾಷಣೆ ಮಾಡುವಂತಹದ್ದೂ ಇದೆ. ಅಪ್ಪು ಆತ್ಮದ ಜೊತೆ ಸಂಭಾಷಣೆಯನ್ನು ನಾನು ಪಬ್ಲಿಕ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿಲ್ಲ. ನನ್ನ ವೈಯಕ್ತಿಕ ಮಾಹಿತಿಗೋಸ್ಕರ ನಾನು ಮಾಡಿದ್ದೆ. ಯಾಕಂದ್ರೆ ಅವರ ಅಭಿಮಾನಿಗಳು ಕೋಟಿ ಲೆಕ್ಕದಲ್ಲಿ ಇದ್ದಾರೆ." ಎಂದು ಡಾ. ಶ್ರೀ ರಾಮಚಂದ್ರ ಗುರೂಜಿ ಹೇಳಿಕೊಂಡಿದ್ದಾರೆ.

ಸತ್ತ ಕೆಲವೇ ದಿನಗಳಲ್ಲಿ ಸಂಭಾಷಣೆ

"ಅವರು ಸತ್ತ ಕೆಲವೇ ದಿನಗಳಲ್ಲಿ ನಾನು ಮಾಡಿದ್ದೆ. ಪಬ್ಲಿಕ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದರೆ, ಅದನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇರಲಿಲ್ಲ. ಏನು? ಹೇಗೆ? ಅಂತ ಅಷ್ಟು ಪ್ರಶ್ನೆಗಳು ಬರುತ್ತವೆ. ನಾನು ಒಬ್ಬನೇ ಮಾತಾಡುವುದಿಲ್ಲ. ಈಗ ಕರೆಂಟ್ ಹರಿಯುವುದಕ್ಕೆ ಒಂದು ಮಾಧ್ಯಮ ಬೇಕು. ಇಲ್ಲಿ ಮಾಧ್ಯಮ ಯಾವುದು ವೈಯರ್. ಇಲ್ಲಿ ಒಂದು ಮೀಡಿಯಂ ಬೇಕು." ಎಂದು ಡಾ. ಶ್ರೀ ರಾಮಚಂದ್ರ ಗುರೂಜಿ ಮಾತನಾಡಿದ್ದಾರೆ.

What are the three questions Dr Ramachandra Guruji asked with Puneeth Rajkumar Soul

ಮೊದಲನೇ-2ನೇ ಪ್ರಶ್ನೆ ಏನು?

"ನಾನು ಕೇಳಿದ ಪ್ರಶ್ನೆ ಇಷ್ಟು. ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ಅಪೋಹಗಳಿವೆ ಅದು ನಿಜನಾ? ಅದಕ್ಕೆ ಅವರು ಇಲ್ಲ ನಾನು ಹೃದಯ ಸಂಬಂಧಿ ಸಮಸ್ಯೆಯಿಂದಲೇ ಸತ್ತಿದ್ದು ಅಂತ ಮೊದಲು ಕ್ಲಿಯರ್ ಮಾಡಿದರು. ಎರಡನೆಯದ್ದು ಹೇಳಿದ್ದು, ಈಗ ಎಲ್ಲಿದ್ದೀರಿ ಅಂತ? ಅದಕ್ಕೆ ಅವರಿಂದ ಬಂದ ಉತ್ತರ ನಾನು ಅಪ್ಪ ಅಮ್ಮನ ಹುಡುಕಾಟದಲ್ಲಿ ಇದ್ದೇನೆ." ಎಂದು ಅಪ್ಪು ಆತ್ಮ ಹೇಳಿತ್ತು ಎಂದು ಡಾ. ಶ್ರೀ ರಾಮಚಂದ್ರ ಗುರೂಜಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮೂರನೇ ಪ್ರಶ್ನೆ ಏನು?

"ಮೂರನೇ ಪ್ರಶ್ನೆ ಕೇಳಿದ್ದು ಮತ್ತೆ ಹುಟ್ಟಿ ಬರುತ್ತೀರಾ? ಅದರ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಮತ್ತೊಮ್ಮೆ ಹುಟ್ಟಿ ಬರುವುದಾದರೆ, ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿಬರುತ್ತೇನೆ. ಇದಿಷ್ಟು ನಾವು ಸಂಭಾಷಣೆ ಮಾಡಿ ತಿಳಿದುಕೊಂಡಿದ್ದು. ಮಾಡಿದ್ದು ಇಷ್ಟಕ್ಕೆ, ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ನಮ್ಮ ಕುತೂಹಲಕ್ಕೆ, ನಮ್ಮ ಸಂಶೋಧನೆಗೆ. ಅದನ್ನು ನಾವು ಎಲ್ಲಿ ಹೇಳಿಕೊಂಡಿಲ್ಲ. ಅದನ್ನು ಮಾಡಿದ್ದಾರೆ ಅಂತ ಕೆಲವು ಯೂಟ್ಯೂಬರ್‌ಗಳು ಬಳಸಿಕೊಂಡರು." ಎಂದಿದ್ದಾರೆ ಡಾ. ಶ್ರೀ ರಾಮಚಂದ್ರ ಗುರೂಜಿ.

More from Filmibeat

English summary
Dr.Ramachandra Guruji asked question to Puneeth Rajkumar Soul
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X