Don't Miss!
- News ನೇಹಾ ಕೊಲೆ ಕೇಸ್ ಸಿಐಡಿಗೆ ಹಸ್ತಾಂತರ: ಇಂದು ಫಯಾಜ್ ವಶಕ್ಕೆ ಸಾಧ್ಯತೆ
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Technology Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಷ್ಟಕ್ಕೂ ದುನಿಯಾ ವಿಜಯ್ ಏನು ಹೇಳುತ್ತಾರೆ?
ನಟ ದುನಿಯಾ ವಿಜಯ್ ತಮ್ಮ ದಾಂಪತ್ಯ ಜೀವನದ ಇಕ್ಕಟ್ಟು ಬಿಕ್ಕಟ್ಟುಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪತ್ನಿ ನಾಗರತ್ನ ಅವರೊಂದಿಗೆ ವಿವಾಹ ವಿಚ್ಛೇದನ ಕೋರಿ ಅವರು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡುತ್ತಾ...
ನನಗಾಗಿರುವ
ನೋವು
ಇನ್ಯಾರಿಗೂ
ಆಗಬಾರದು.
ನನ್ನ
ತಾಯಿ
ನನಗೆ
ಮುಖ್ಯ.
ಎರಡು
ವರ್ಷಗಳ
ಹಿಂದೆ
ನನ್ನ
ತಾಯಿ
ಇನ್ನೇನು
ಸಾಯುವ
ಹಂತಕ್ಕೆ
ಹೋಗಿದ್ದರು.
ಆಗ
ಈ
ಸೊಸೆ
ಅನ್ನಿಸಿಕೊಂಡವರು
ಎಲ್ಲಿ
ಹೋಗಿದ್ದರು.
ಆಕೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು
ನಾನೀಗ ನ್ಯಾಯಾಲಯದ ಮೊರೆ ಹೋಗಿದ್ದೇನೆ. ನನಗೆ ನ್ಯಾಯ ಬೇಕು ಅಷ್ಟೇ. ಹೆತ್ತ ತಾಯಿಯನ್ನೇ ಬೀದಿ ಭಿಕಾರಿ ತರಹ ನೋಡಿದ್ದಾರೆ. ನನ್ನ ಪತ್ನಿ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾಗಿವೆ. ನನಗೆ ಸುಳ್ಳು ಹೇಳಲಿಕ್ಕೆ ಬರಲ್ಲ. ಆಕೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು.
ನನಗೆ ನನ್ನ ತಾಯಿ, ಅಕ್ಕ ಬೇಕು
ನನ್ನ ತಾಯಿ ಜೊತೆ ಬದುಕುತ್ತೇನೆ. ನನ್ನ ತಾಯಿ ಸಾಯುವ ಸ್ಥಿತಿಯಲ್ಲಿದ್ದರು. ಪತ್ನಿ ನೋಡಿಕೊಳ್ಳಲಿಲ್ಲ. ನನ್ನ ತಾಯಿ ಮುಖ್ಯ. ಪತ್ನಿ ಯಾವ ಆರೋಪವನ್ನಾದರೂ ಮಾಡಲಿ. ನಾನು ಸತ್ಯ, ನನ್ನ ತಾಯಿ ಸತ್ಯ. ನನಗೆ ನನ್ನ ತಾಯಿ, ಅಕ್ಕ ಬೇಕು. ಮಾನಸಿಕ ಕಿರುಕುಳವಾಗಿದೆ.
ಬಲವಂತವಾಗಿ ಯಾರೂ ಸಂಸಾರ ಮಾಡಕ್ಕಾಗಲ್ಲ
ಆಕೆಗೆ ನೀನು ಚೆನ್ನಾಗಿರು. ನಾನು ಚೆನ್ನಾಗಿರುತ್ತೇನೆ ಎಂದು ಹೇಳುತ್ತೇನೆ. ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನ ತಾಯಿಯನ್ನು ನಿನ್ನ ತಾಯಿ ಎಂದು ನೋಡು. ನಾನು ದುಡುಕಿ ನಿರ್ಧಾರ ತೆಗೆದುಕೊಂಡಿಲ್ಲ. ಪತ್ನಿಗೆ ಕಿರುಕುಳ ನೀಡಿಲ್ಲ. ಬಲವಂತವಾಗಿ ಯಾರೂ ಸಂಸಾರ ಮಾಡಕ್ಕಾಗಲ್ಲ.
ತಾಯಿಗಾಗಿ ನನ್ನ ಜೀವನ ಮೀಸಲು
ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಯಾವಾಗ ಸಿಗುತ್ತದೋ ಆವಾಗ ಸಿಗಲಿ. ಸಾಯೋವರೆಗೂ ಕಾಯುತ್ತೇನೆ. ನನ್ನ ಹೆತ್ತ ತಂದೆ ತಾಯಿಗೆ ಮೋಸವಾಗಿದೆ. ಹಾಗಾಗಿ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಮಕ್ಕಳು ನನ್ನೊಂದಿಗೆ ಇರುತ್ತಾರೆ. ದಯವಿಟ್ಟು ಅವರನ್ನು ಈ ಗಲಾಟೆಯಲ್ಲಿ ಎಳೆಯಬೇಡಿ. ತಾಯಿಗಾಗಿ ನನ್ನ ಜೀವನ ಮೀಸಲು ಎಂದಿದ್ದಾರೆ.
ವಿಜಿ ತಂದೆ ರುದ್ರಯ್ಯ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಏತನ್ಮಧ್ಯೆ ದುನಿಯಾ ವಿಜಿ ತಂದೆ ರುದ್ರಯ್ಯ ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಕ್ಷನ್ 13 (1A) ಅಡಿ ಅರ್ಜಿ ಸಲ್ಲಿಸಲಾಗಿದೆ. ವಕೀಲರಾದ ಸುಭಾಷ್ ಅವರು ದುನಿಯಾ ವಿಜಯ್ ಪರ ವಕೀಲರು. ಈ ನಡುವೆ ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ (ಜ.20) ಇನ್ನೇನು ಕೆಲವೇ ದಿನಗಳು ಬಾಕಿ ಇವೆ.