Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾವ್ರ ಬಿಡುಗಡೆಗೆ ಸರಕಾರ ಕೊಟ್ಟ ದುಡ್ಡಿನ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ ತಮಿಳು ಪತ್ರಕರ್ತ
ದೇಶದ ಇತಿಹಾಸದಲ್ಲೇ ಭಾರೀ ಸಂಚಲನ ಮೂಡಿಸಿದ್ದ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಅಪಹರಣದ ಹಿಂದಿನ ಸತ್ಯಾಸತ್ಯತೆಯ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯೂ ಸರಕಾರದಿಂದ ಹೊರಬಿದ್ದಿಲ್ಲ.
ಆದರೆ, ಆ ಸಮಯದಲ್ಲಿದ್ದ ತಮಿಳುನಾಡು / ಕರ್ನಾಟಕ ಪೊಲೀಸರು ಮತ್ತು ಪತ್ರಕರ್ತರು ಈ ವಿಚಾರದಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಈ ಸಂಬಂಧ ಹಲವು ಪುಸ್ತಕಗಳು ಬಿಡುಗಡೆಯಾಗಿವೆ ಕೂಡಾ..
ಡಾ.ರಾಜ್ ಕುಮಾರ್ 'ಕಸ್ತೂರಿ ನಿವಾಸ' ಚಿತ್ರಕ್ಕೆ 50 ವರ್ಷದ ಸಂಭ್ರಮ
ಇನ್ನು, ಎ.ಎಂ.ಆರ್ ರಮೇಶ್ ಮತ್ತು ರಾಮ್ ಗೋಪಾಲ್ ವರ್ಮಾ ಈ ಸಬ್ಜೆಕ್ಟ್ ಮೇಲೆ ಚಿತ್ರವನ್ನೂ ತೆಗೆದಿದ್ದಾರೆ. ಈಗ, ತಮಿಳು ಪತ್ರಕರ್ತರೊಬ್ಬರು ಡಾ.ರಾಜ್ ಬಿಡುಗಡೆಗೆ ಅಂದಿನ ಸರಕಾರ ಕೊಟ್ಟ ಹಣವೆಷ್ಟು ಎನ್ನುವುದರ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ.
2000ನೇ ಇಸವಿಯ ಜುಲೈ 30ರ ರಾತ್ರಿ
2000ನೇ ಇಸವಿಯ ಜುಲೈ 30ರ ರಾತ್ರಿ ಪತ್ನಿ ಪಾರ್ವತಮ್ಮ ಅವರೊಂದಿಗೆ ತಮ್ಮ ಹುಟ್ಟೂರು ಗಾಜನೂರಿಗೆ ಹೋಗಿದ್ದ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ್ಳ, ನರಹಂತಕ ವೀರಪ್ಪನ್ ಅಪಹರಿಸಿದ್ದ. ಆ ಸುದ್ದಿ ರಾಜ್ಯದ ಜನತೆಗೆ ಮರುದಿನ ಬೆಳಿಗ್ಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಘಟನೆ ನಡೆದ 108 ದಿನಗಳ ಬಳಿಕ ರಾಜ್ ಕುಮಾರ್ ಬಿಡುಗಡೆಯಾಗಿ ಮನೆಗೆ ಮರಳಿದ್ದರು.
ಎಸ್ ಎಂ ಕೃಷ್ಣ ತಮಿಳುನಾಡಿಗೆ ತೆರಳಿ ಎಂ. ಕರುಣಾನಿಧಿ ಜತೆ ಸಭೆ
ಅಂದು ರಾತ್ರಿ 1.30ರ ವೇಳೆ ಪಾರ್ವತಮ್ಮ ರಾಜ್ ಕುಮಾರ್, ಬೆಂಗಳೂರಿಗೆ ಧಾವಿಸಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದರು. ಎಸ್ ಎಂ ಕೃಷ್ಣ ಬೆಳಿಗ್ಗೆಯೇ ತಮಿಳುನಾಡಿಗೆ ತೆರಳಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಜತೆ ಸಭೆ ನಡೆಸಿದ್ದರು. ಈ ವಿಚಾರದ ಬಗ್ಗೆ ತಮಿಳು ಪತ್ರಕರ್ತ ಶಿವ ಸುಬ್ರಮಣಿಯನ್ ಹೊರತಂದಿರುವ ಪುಸ್ತಕದಲ್ಲಿ ಅಣ್ಣಾವ್ರ ಬಿಡುಗಡೆಗೆ ನೀಡಲಾದ ಹಣದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಒಂದು ಸಾವಿರ ಕೋಟಿ ಹಣ ಡಿಮಾಂಡ್ ಮಾಡಿದ್ದ
ರಾಜ್ ಬಿಡುಗಡೆಗೆ ಮೊದಲು ಕಾಡುಗಳ್ಳ ವೀರಪ್ಪನ್ ಒಂದು ಸಾವಿರ ಕೋಟಿ ಹಣ ಡಿಮಾಂಡ್ ಮಾಡಿದ್ದ. ಅದರಲ್ಲಿ 900 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 100 ಕೋಟಿ ಲಿಕ್ವಿಡ್ ಕ್ಯಾಶ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಎಂದು ಶಿವ ಸುಬ್ರಮಣಿಯನ್ ಬರೆದ 'ಲೈಫ್ ಎಂಡ್ ಫಾಲ್ ಆಫ್ ವೀರಪ್ಪನ್' ಪುಸ್ತಕದಲ್ಲಿ ಬರೆಯಲಾಗಿದೆ.
Recommended Video
ಪತ್ರಕರ್ತ ನಕ್ಕೀರನ್ ಮೂಲಕ ಸಂಧಾನ
ಕೊನೆಗೆ, ಪತ್ರಕರ್ತ ನಕ್ಕೀರನ್ ಮೂಲಕ ಸಂಧಾನ ನಡೆದು ಮೂರು ಕಂತಿನಲ್ಲಿ ಹದಿನೈದು ಕೋಟಿ ರೂಪಾಯಿಯನ್ನು ನೀಡಲಾಗಿತ್ತು. ಈ ಮೊತ್ತವನ್ನು ವೀರಪ್ಪನ್ ಒಪ್ಪಿಕೊಳ್ಳಲು ನಕ್ಕೀರನ್ ಆರು ಸುತ್ತಿನ ಮಾತುಕತೆ ನಡೆಸಿದ್ದ. ಹಣ, ಚಿನ್ನದ ಜೊತೆಗೆ ಬೇರೆ ಅವನ ಬೇಡಿಕೆಯನ್ನೂ ಈಡೇರಿಸಲಾಗಿತ್ತು ಎಂದು ಪುಸ್ತಕದಲ್ಲಿ ನಮೂದಾಗಿದೆ.