Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಸಿಂಪಲ್ ಬದುಕಿನ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ!
Recommended Video
ಸಾಹಸಸಿಂಹ ಡಾ ವಿಷ್ಣುವರ್ಧನ್, ತುಂಬಾನೇ ಸಿಂಪಲ್ ಆಗಿದ್ದ ಕಲಾವಿದ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗಿದ್ದರೂ ಕೂಡ ಜೀವನದಲ್ಲಿ ಸದಾ ಸರಳವಾಗಿ ಬದುಕಬೇಕು ಎನ್ನುವ ಸಿದ್ದಾಂತವನ್ನು ಪಾಲಿಸುತ್ತಾ ಬದುಕಿದ ನಟ.
ವಿಷ್ಣು ಅಭಿಮಾನಿಗಳನ್ನ ಅಗಲಿ ಸಾಕಷ್ಟು ವರ್ಷವಾದರೂ ಕೂಡ ಅವರ ನೆನಪು, ಅವರು ಬಿಟ್ಟು ಹೋದ ಸಿನಿಮಾಗಳು ಇವೆಲ್ಲವೂ ಅಭಿಮಾನಿಗಳ ಜೊತೆಯಲ್ಲಿಯೇ ಇದೆ. ಇಂದಿಗೂ ವಿಷ್ಣು ಅಭಿಮಾನಿಗಳನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ ಎನ್ನುವುದು ಇತ್ತೀಚಿಗಷ್ಟೆ ಮರು ಬಿಡುಗಡೆ ಆದ 'ನಾಗರಹಾವು' ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯಿಂದಲೇ ಗೊತ್ತಾಗುತ್ತೆ.
ಹೊರ ರಾಜ್ಯದಲ್ಲಿಯೂ ಶುರುವಾಯ್ತು ಸಾಹಸಸಿಂಹನ ಘರ್ಜನೆ
ವಿಷ್ಣು ಎಷ್ಟು ಸರಳವಾದ ಜೀವನವನ್ನು ರೂಡಿಸಿಕೊಂಡಿದ್ದರು ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆಯನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಮೈಸೂರಿಗೆ ಚಿತ್ರೀಕರಣಕ್ಕೆ ಹೋದಾಗ ಸಾಹಸಸಿಂಹ ಎಲ್ಲಿ ಉಳಿದುಕೊಳ್ತಿದ್ರು? ಎನ್ನುವುದರ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ಮುಂದೆ ಓದಿ
ಸಾಕಷ್ಟು ಜನರಿಗೆ ಸ್ಪೂರ್ತಿಯಾದ ವಿಷ್ಣು
ವಿಷ್ಣು ಸಾಕಷ್ಟು ಜನರಿಗೆ ಸ್ಪೂರ್ತಿಯಾದ ನಟ. ಸರಳತೆಯಿಂದಲೇ ಬದುಕಬೇಕು ಎನ್ನುವುದನ್ನು ರೂಡಿಸಿಕೊಂಡ ಕಲಾವಿದ. ಚಿತ್ರೀಕರಣಕ್ಕೆ ಬಂದಾಗ ವಿಷ್ಣು ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ ನಲ್ಲಿದ್ದ ಸಣ್ಣ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದರಂತೆ ವಿಷ್ಣು.
ಮುಂಚಿತವಾಗಿ ಬುಕ್ ಮಾಡುತ್ತಿರಲಿಲ್ಲ
ವಿಷ್ಣುವರ್ಧನ್ ಸದಾ ಉಳಿದುಕೊಳ್ಳುತಿದ್ದ ರೂಮ್ ನಂಬರ್ 334. ಹಾಗಂತ ಸಾಮಾನ್ಯ ದಿನಗಳಲ್ಲಿ ವಿಷ್ಣುಗಾಗಿ ಎಂದಿಗೂ ಈ ಕೊಠಡಿ ಬುಕ್ ಮಾಡುತ್ತಿರಲಿಲ್ಲ. ವಿಷ್ಣು ಮೈಸೂರಿನಲ್ಲಿ ಇಲ್ಲದ ದಿನ ಸಾಮಾನ್ಯವಾಗಿ ಹೋಟೆಲ್ ಗೆ ಭೇಟಿ ನೀಡುತ್ತಿದ್ದ ವ್ಯಕ್ತಿಗಳು ರೂಮ್ ಅನ್ನು ಬಳಸುತ್ತಿದ್ದರು.
ಪಂಚತಾರಾ ಹೋಟೆಲ್ ಆಸೆ ಇರಲಿಲ್ಲ
ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದ ವಿಷ್ಣು ಎಷ್ಟೇ ಶ್ರೀಮಂತರಾದರೂ ಪಂಚ ತಾರಾ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿರಲಿಲ್ಲವಂತೆ. ನಿರ್ಮಾಪಕರಿಗೆ ಹೊರೆ ಆಗದಂತೆ ಮೈಸೂರಿನ ಕಿಂಗ್ಸ್ ಕೋರ್ಟ್ ಸಾಮಾನ್ಯ ಕೊಠಡಿಯಲ್ಲಿ 1972 ರಿಂದ 2009 ರ ವರೆಗೂ ಬಂದು ಹೋಗುವುದನ್ನು ಮಾಡುತ್ತಿದ್ದರಂತೆ.
ವಿಷ್ಣು ಬಳಸುತ್ತಿದ್ದ ಕೊಠಡಿ ವಿಡಿಯೋ
ಮೈಸೂರಿನಲ್ಲಿ ವಿಷ್ಣು ಉಳಿದುಕೊಳ್ತಿದ್ದ ಹೋಟೆಲ್ ಕೊಠಡಿ ವಿಡಿಯೋ ಸದ್ಯ ಫೇಸ್ ಬುಕ್ ನಲ್ಲಿ ವೈರಲ್ ಆಗ್ತಿದೆ. ಮೈಸೂರು ಮೂಲದ ಪತ್ರಕರ್ತರಾದ ಜನಾರ್ಧನ ರಾವ್ ಸಾಳಂಕೆ ಯವರು ಹೋಟೆಲ್ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.