Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ನಾಲ್ಕು ಸಂದರ್ಭದಲ್ಲಿ ದರ್ಶನ್-ಸುದೀಪ್ ಭೇಟಿಯಾಗುವ ಸಾಧ್ಯತೆ ಇದೆ.!
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ನಡುವಿನ ಮನಸ್ತಾಪ ಅಂತ್ಯವಾಗಿದೆ ಎಂಬ ಮಾತುಗಳು ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿದೆ. ಕೆಲ ವೈಯಕ್ತಿಕ ವಿಷ್ಯಗಳಿಗೆ ಇಬ್ಬರು ಬೇರೆ ಬೇರೆಯಾಗಿದ್ದರು. ಆದ್ರೆ, ಚಿತ್ರರಂಗದ ಕೆಲವು ಹಿರಿಯರು ಈ ಇಬ್ಬರನ್ನ ಒಂದು ಗೂಡಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಹಾಗಿದ್ಮೇಲೆ, ಇಬ್ಬರನ್ನ ಒಟ್ಟಿಗೆ ನೋಡೋದು ಯಾವಾಗ ಎಂಬ ಪ್ರಶ್ನೆ ಇಬ್ಬರು ಅಭಿಮಾನಿಗಳದ್ದು. ಅದಕ್ಕೆ ಸ್ಯಾಂಡಲ್ ವುಡ್ ನಲ್ಲಿ ವೇದಿಕೆ ಕೂಡ ನಿರ್ಮಾಣವಾಗುತ್ತಿದೆ.
ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್
ಕನ್ನಡದ ಚಿತ್ರರಂಗದ ಪಾಲಿಗೆ ತುಂಬಾ ಮುಖ್ಯವಾಗಿರುವ ಕೆಲವು ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ವೇದಿಕೆಗಳಲ್ಲಿ ದಾಸ ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದಾಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ, ಈ ಇಬ್ಬರು ಸ್ಟಾರ್ ಗಳು ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಎಲ್ಲಿವೆ.? ಮುಂದೆ ಓದಿ.....
'ಅಂಬಿ ನಿಂಗ್ ವಯಸ್ಸಾಯ್ತೋ' ಆಡಿಯೋ ರಿಲೀಸ್
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಆಡಿಯೋ ಬಿಡುಗಡೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಇತರೆ ಇಂಡಸ್ಟ್ರಿಯ ಸೂಪರ್ ಸ್ಟಾರ್ ಗಳು ಬರಲಿದ್ದಾರಂತೆ. ಹೀಗಾಗಿ, ಈ ವೇದಿಕೆಯಲ್ಲಿ ದರ್ಶನ್ ಮತ್ತು ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡುತ್ತಿದೆ.
ಕೊಡಗು ಜನತೆಯ ನೆರವಿಗೆ ನಿಂತ 'ಡಿ-ಬಾಸ್' ಮತ್ತು 'ಕಿಚ್ಚ ಸುದೀಪ್'
ಅಂಬಿಗೋಸ್ಕರ ಬರ್ತಾರೆ ದಾಸ.!
ಅಂಬರೀಶ್ ಅವರಿಗೊಸ್ಕರ ರಜನಿಕಾಂತ್, ಚಿರಂಜೀವಿ ಸೇರಿದಂತೆ ಹಲವು ಸ್ಟಾರ್ ಗಳು ಬರುವ ಸಾಧ್ಯತೆ ಇದೆ. ಅದೆ ರೀತಿ ಅಂಬರೀಶ್ ಅವರ ಕಾರ್ಯಕ್ರಮ ಅಂದ್ಮೇಲೆ ದರ್ಶನ್ ಬರಲ್ವಾ ಅಂಬ ನಿರೀಕ್ಷೆ. ಹೇಳಿ ಕೇಳಿ ಅಂಬರೀಶ್ ಅವರ ಮಾತನ್ನ ದರ್ಶನ್ ಮೀರಲ್ಲ. ಇನ್ನು ಅಂಬಿಯ ಸಿನಿಮಾ ಅಂದ್ಮೇಲೆ ದಾಸ ಬರೋದು ಪಕ್ಕಾ ಎನ್ನಲಾಗಿದೆ. ಈ ಸಿನಿಮಾಗೆ ನಿರ್ಮಾಪಕ ಕಿಚ್ಚ ಸುದೀಪ್ ಮತ್ತು ಜಾಕ್ ಮಂಜು. ಒಂದು ವೇಳೆ ದರ್ಶನ್ ಬಂದ್ರೆ, ದರ್ಶನ್ ಸ್ವಾಗತವನ್ನ ಸುದೀಪ್ ಸ್ವತಃ ಸುದೀಪ್ ಅವರೇ ಮಾಡಬಹುದು ಎಂಬ ಲೆಕ್ಕಾಚಾರ ಇದೆ.
ದರ್ಶನ್-ಸುದೀಪ್ ಸಂಧಾನಕ್ಕೆ ರೆಬೆಲ್ ಸ್ಟಾರ್ ಮಧ್ಯಸ್ಥಿಕೆ?
'ಕುರುಕ್ಷೇತ್ರ' ಆಡಿಯೋ ರಿಲೀಸ್
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'. ಕನ್ನಡದ ಹಲವು ಹಿರಿಯ ನಟರು ಅಭಿನಯಿಸಿರುವ ಬಹುಕೋಟಿ ವೆಚ್ಚದ ಸಿನಿಮಾ. ಈ ಚಿತ್ರದಲ್ಲೂ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಮುನಿರತ್ನ ನಿರ್ಮಾಣ ಮಾಡುತ್ತಿರುವ ಈ ಚಿತ್ರ ಸ್ಯಾಂಡಲ್ ವುಡ್ ಪಾಲಿಗೆ ತುಂಬಾ ವಿಶೇಷವಾದ ಚಿತ್ರವಾಗಿರಲಿದೆ. ಹೀಗಾಗಿ, ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಶೀಘ್ರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರಿಗೆ ಆಹ್ವಾನ ನೀಡಬಹುದು. ಇದು ಸಾಧ್ಯವಾದ್ರೆ, ದರ್ಶನ್ ಸಿನಿಮಾಗಾಗಿ ಸುದೀಪ್ ಬರ್ತಾರೆ.
ಸುದೀಪ್ ಮತ್ತು ದರ್ಶನ್ ಒಟ್ಟಿಗೆ ಇಂತಹ ನಿರ್ಧಾರ ಮಾಡಿದ್ಯಾಕೆ?
'ಕೆಸಿಸಿ' ಕ್ರಿಕೆಟ್ ಟೂರ್ನಿ
ಕನ್ನಡದ ಸ್ಟಾರ್ ನಟರು ಹಾಗೂ ಅಂತರಾಷ್ತ್ರೀಯ ಕ್ರಿಕೆಟ್ ಆಟಗಾರರು ಸೇರಿ ಆಡುತ್ತಿರುವ ಕ್ರಿಕೆಟ್ ಟೂರ್ನಮೆಂಟ್ ಕೆಸಿಸಿ. ಸುದೀಪ್ ಮಾರ್ಗದರ್ಶನದಲ್ಲಿ ಈ ಟೂರ್ನಿ ಆಯೋಜನೆ ಆಗುತ್ತಿದೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಗಣೇಶ್, ಉಪೇಂದ್ರ, ದಿಗಂತ್, ರಕ್ಷಿತ್ ಶೆಟ್ಟಿ, ಯಶ್ ಸೇರಿದಂತೆ ಎಲ್ಲರು ಆಡುತ್ತಿದ್ದಾರೆ. ಆದ್ರೆ, ದರ್ಶನ್ ಒಬ್ಬರು ಭಾಗಿಯಾಗಿಲ್ಲ. ಹೀಗಾಗಿ, ದರ್ಶನ್ ಮತ್ತು ಸುದೀಪ್ ಸ್ನೇಹ ಮತ್ತೆ ಒಂದಾಗಿರುವುದು ನಿಜವಾದರೇ ಈ ಟೂರ್ನಿಯನ್ನ ನೋಡುವುದಕ್ಕಾದರೂ ದಾಸ ಬರಬಹುದು.
'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!
ಸುದೀಪ್ ಬರ್ತಡೇ
ಇಷ್ಟೆಲ್ಲಾ ದೊಡ್ಡ ದೊಡ್ಡ ಕಾರ್ಯಕ್ರಮಗಳ ಮಧ್ಯೆ ಸೆಪ್ಟಂಬರ್ 1 ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಈ ಹಿಂದಿನ ಬರ್ತಡೇಗಳಿಗೆ ದರ್ಶನ್ ಮತ್ತು ಸುದೀಪ್ ಭೇಟಿ ಮಾಡುತ್ತಿದ್ದರು. ಆದ್ರೆ, ಕಳೆದ ವರ್ಷದಿಂದ ಆ ಭೇಟಿಯಾಗುತ್ತಿಲ್ಲ. ಈ ವರ್ಷವಾದರೂ ಸುದೀಪ್ ಗೆ ದರ್ಶನ್ ಶುಭಕೋರುವುದಾಗಲಿ ಅಥವಾ ಭೇಟಿ ಮಾಡುವುದಾಗಲಿ ಆಗುತ್ತಾ ಎಂದು ಕಾದುನೋಡಬೇಕಿದೆ.