'ಮದಕರಿ ನಾಯಕ' ಯಾರಾಗಬೇಕು, ಜನಾಭಿಮತ ಏನು ಹೇಳುತ್ತಿದೆ.?
Recommended Video

'ಮದಕರಿ ನಾಯಕ' ಚಿತ್ರವನ್ನ ಯಾರು ಮಾಡಬೇಕು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ನಡೆಯುತ್ತಿದೆ. ಸುದೀಪ್ ಅಭಿಮಾನಿಗಳು ಕಿಚ್ಚ ಸುದೀಪ್ ಅವರೇ ಮಾಡಲಿ ಎಂದು ಕೆಲವು ಕಾರಣಗಳನ್ನ ಕೊಡ್ತಿದ್ದಾರೆ.
ಈ ಕಡೆ ದರ್ಶನ್ ಅವರೇ ಮದಕರಿ ನಾಯಕನಾಗಲಿ ಎಂದು ಡಿ ಬಾಸ್ ಭಕ್ತರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಫಿಲ್ಮಿಬೀಟ್ ಕನ್ನಡ ಈ ಬಗ್ಗೆ ಪೋಲ್ ಆಯೋಜನೆ ಮಾಡಿತ್ತು.
ಮದಕರಿ ನಾಯಕನ ಕುರಿತು ಚಿತ್ರವನ್ನ ಯಾರು ಮಾಡಬೇಕು ಎಂದು ಪ್ರಶ್ನಿಸಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಆಯ್ಕೆಗಳನ್ನ ನೀಡಲಾಗಿತ್ತು. ಈ ಪೋಲ್ ಗೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದ್ದು, ಜನಾಭಿಮತ ಹೊರಬಿದ್ದಿದೆ. ಚಿತ್ರಪ್ರೇಮಿಗಳ ಪ್ರಕಾರ ಈ ಸಿನಿಮಾ ಯಾರು ಮಾಡಬೇಕು ಎಂಬುದು ಬಹಿರಂಗವಾಗಿದೆ. . ಯಾರದು.? ಮುಂದೆ ಓದಿ......

50.4 ರಷ್ಟು ಮತ ದರ್ಶನ್
ದರ್ಶನ್ ಹಾಗೂ ಸುದೀಪ್ ಇಬ್ಬರಲ್ಲಿ ಯಾರು ಮದಕರಿ ನಾಯಕ ಸಿನಿಮಾ ಮಾಡಲಿ ಎಂಬ ಪ್ರಶ್ನೆಗೆ ಸುಮಾರು 50.4 ರಷ್ಟು ಜನ ದರ್ಶನ್ ಅವರಗೆ ಮತ ಚಲಾಯಿಸಿದ್ದಾರೆ.

49.6 ರಷ್ಟು ಜನ ಸುದೀಪ್
ಸುದೀಪ್ ಅವರಿಗೂ ಕಡಿಮೆ ಮತ ಸಿಕ್ಕಿಲ್ಲ. ದರ್ಶನ್ ಅವರಂತೆ ಕಿಚ್ಚನಿಗೂ ಬಹುದೊಡ್ಡ ಬೆಂಬಲ ಸಿಕ್ಕಿದೆ. ಈ ಕಡೆ ಸುದೀಪ್ ಅವರು ಮದಕರಿ ನಾಯಕ ಸಿನಿಮಾ ಮಾಡಲಿ ಎಂದು ಸುಮಾರು 49.6 ರಷ್ಟು ಜನ ವೋಟ್ ಮಾಡಿದ್ದಾರೆ.

ಇಬ್ಬರು ಅರ್ಹರೇ
ಕೆಲವೇ ಕೆಲವು ಮತಗಳ ಅಂತರ ಇಬ್ಬರಲ್ಲಿ ಕಂಡು ಬಂದಿದೆ. ಅಲ್ಲಿಗೆ ಇಬ್ಬರ ಪರವಾಗಿಯೂ ಜನರು ವೋಟ್ ಮಾಡಿದ್ದಾರೆ. ಇಬ್ಬರನ್ನೂ ಮದಕರಿ ನಾಯಕನನ್ನಾಗಿ ನೋಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಎರಡು ಸಿನಿಮಾ ಬರ್ತಿದೆ
ಅಂದ್ಹಾಗೆ, 'ಮದಕರಿ ನಾಯಕ'ನ ಕುರಿತು ಎರಡು ಸಿನಿಮಾ ಬರುವುದು ಖಚಿತವಾಗಿದೆ. ಸುದೀಪ್ ಅವರ ಸಿನಿಮಾ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ದರ್ಶನ್ ಮತ್ತು ರಾಕ್ ಲೈನ್ ಅವರು ಕೂಡ ಸಿನಿಮಾ ಮಾಡೋದನ್ನ ಖಚಿತಪಡಿಸಿದ್ದಾರೆ. ಅಲ್ಲಿಗೆ ಇಬ್ಬರು ಅಭಿಮಾನಿಗಳಿಗೂ ನಿರಾಸೆಯಾಗುವುದಿಲ್ಲ.


Click it and Unblock the Notifications











