twitter
    For Quick Alerts
    ALLOW NOTIFICATIONS  
    For Daily Alerts

    'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?

    |

    Recommended Video

    Kurukshetra Movie:ಕುರುಕ್ಷೇತ್ರ ಸುದ್ದಿಗೋಷ್ಠಿಗೆ ದರ್ಶನ್ ನಿಖಿಲ್ ಕುಮಾರಸ್ವಾಮಿ ಬರಲಿಲ್ಲ|ಮುನಿರತ್ನ ಹೇಳಿದ್ದೇನು?

    ಕಳೆದ ಶನಿವಾರ ಕನ್ನಡದ ಬಹುನಿರೀಕ್ಷೆಯ ಕುರುಕ್ಷೇತ್ರ ಚಿತ್ರದ ಸುದ್ದಿಗೋಷ್ಠಿ ಇತ್ತು. ತುಂಬಾ ಕುತೂಹಲಗಳ ನಂತರ ನಿರ್ಮಾಪಕ ಮುನಿರತ್ನ ಪ್ರೆಸ್ ಮೀಟ್ ಕರೆದಿದ್ದರು. ಮಂಡ್ಯ ಚುನಾವಣೆ ನಡೆದ ಬಳಿಕ ಈ ಪ್ರೆಸ್ ಮೀಟ್ ಇದ್ದಿದ್ದು ಸಹಜವಾಗಿ ಕುತೂಹಲ ಹುಟ್ಟುಹಾಕಿತ್ತು.

    ಯಾಕಂದ್ರೆ, ಮಂಡ್ಯ ಅಖಾಡದಲ್ಲಿ ಎದುರಾಳಿಗಳಾಗಿ ತೊಡೆತಟ್ಟಿದ್ದ ದರ್ಶನ್ದ ಮತ್ತು ನಿಖಿಲ್ ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ, ಈ ಸುದ್ದಿಗೋಷ್ಠಿಗೆ ಇಬ್ಬರು ಬರ್ತಾರೆ, ಒಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು.

    ಅಂತೂ ದುರ್ಯೋಧನನ ಎಂಟ್ರಿಗೆ ಡೇಟ್ ಫಿಕ್ಸ್: ವರಮಹಾಲಕ್ಷ್ಮಿಗೆ 'ಕುರುಕ್ಷೇತ್ರ' ದರ್ಶನ ಅಂತೂ ದುರ್ಯೋಧನನ ಎಂಟ್ರಿಗೆ ಡೇಟ್ ಫಿಕ್ಸ್: ವರಮಹಾಲಕ್ಷ್ಮಿಗೆ 'ಕುರುಕ್ಷೇತ್ರ' ದರ್ಶನ

    ಕುರುಕ್ಷೇತ್ರ ಬಿಡುಗಡೆ ದಿನಾಂಕ ಹೇಳ್ತಾರೆ ಅನ್ನೋದಕ್ಕಿಂತ ಇಬರಿಬ್ಬರು ಮುಖಾಮುಖಿ ಆಗ್ತಾರೆ ಎನ್ನುವುದೇ ಮುಖ್ಯವಾಗಿತ್ತು. ಆದ್ರೆ, ಅಂತಿಮವಾಗಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ಮುನಿರತ್ನ, ನಿರ್ದೇಶಕ ನಾಗಣ್ಣ, ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ ಲಹರಿ ವೇಲು. ಹಾಗಿದ್ರೆ, ಸ್ಟಾರ್ ನಟರು ಯಾಕೆ ಬಂದಿಲ್ಲ? ಮುಂದೆ ಓದಿ.....

    ಈ ಸುದ್ದಿಗೋಷ್ಠಿಗೆ ಕಲಾವಿದರ ಅಗತ್ಯವಿಲ್ಲ

    ಈ ಸುದ್ದಿಗೋಷ್ಠಿಗೆ ಕಲಾವಿದರ ಅಗತ್ಯವಿಲ್ಲ

    ದರ್ಶನ್, ಅರ್ಜುನ್ ಸರ್ಜಾ, ಸೋನು ಸೂದ್, ಶಶಿ ಕುಮಾರ್, ನಿಖಿಲ್ ಕುಮಾರ್, ಸ್ನೇಹಾ, ಮೇಘನಾ ರಾಜ್, ಡ್ಯಾನಿಶ್, ರವಿಶಂಕರ್ ಅಂತಹ ಸ್ಟಾರ್ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆದ್ರೆ, ಯಾರೊಬ್ಬರು ಈ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿಲ್ಲ. ಯಾಕೆ ಬಂದಿಲ್ಲ ಅಂತ ಕೇಳಿದ್ರೆ 'ಇದು ಬಿಡುಗಡೆ ದಿನಾಂಕ ಹೇಳಬೇಕೆಂದುಕೊಂಡ ಸುದ್ದಿಗೋಷ್ಠಿ, ಈಗ ಕಲಾವಿದರು ಬೇಡ. ನಿರ್ಮಾಪಕ' ಸಾಕು ಎಂದು ಮುನಿರತ್ನ ಸಮರ್ಥನೆ ಮಾಡಿಕೊಂಡರು.

    ಕುರುಕ್ಷೇತ್ರದ ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಮುನಿರತ್ನ, ರಿಲೀಸ್ ಬಗ್ಗೆ ಸುಳಿವುಕುರುಕ್ಷೇತ್ರದ ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಮುನಿರತ್ನ, ರಿಲೀಸ್ ಬಗ್ಗೆ ಸುಳಿವು

    ಆಡಿಯೋ ರಿಲೀಸ್ ಗೆ ಬರ್ತಾರೆ

    ಆಡಿಯೋ ರಿಲೀಸ್ ಗೆ ಬರ್ತಾರೆ

    ''ರಿಲೀಸ್ ದಿನಾಂಕ ಘೋಷಿಸುವುದು ನಿರ್ಮಾಪಕನ ಕೆಲಸ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಎಲ್ಲ ಕಲಾವಿದರು ಬರ್ತಾರೆ. ಅಂಬರೀಶ್ ಒಬ್ಬರು ಮಾತ್ರ ಇರಲ್ಲ. ಅಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಅವರೆ ಉತ್ತರ ಕೊಡ್ತಾರೆ' ಎಂದು ನಿರ್ಮಾಪಕ ಮುನಿರತ್ನ ತಿಳಿಸಿದರು.

    ಮೊದಲೇ ನಿರ್ಧಾರವಾಗಿತ್ತು

    ಮೊದಲೇ ನಿರ್ಧಾರವಾಗಿತ್ತು

    ಯಾವ ಕಾರ್ಯಕ್ರಮಕ್ಕೆ ಕಲಾವಿದರು ಬರಬೇಕು, ಯಾವುದಕ್ಕೆ ಬೇಡ ಎಂಬುದರ ಬಗ್ಗೆ ಈಗಾಗಲೇ ಮುನಿರತ್ನ, ನಿರ್ದೇಶಕ ನಾಗಣ್ಣ, ಹರಿಕೃಷ್ಣ ನಿರ್ಧರಿಸಿದ್ದಾರಂತೆ. ಅದರಂತೆ ಎಲ್ಲವೂ ನಡೆಯಲಿದೆ ಎಂದು ಮುಂದಿನ ಪ್ರಚಾರ ಕೆಲಸಗಳ ಬಗ್ಗೆ ಹೇಳಿಕೊಂಡರು.

    ಮುನಿರತ್ನ ಬೆನ್ನಿಗೆ ಬಿದ್ದ ಡಿ-ಬಾಸ್ ಫ್ಯಾನ್ಸ್: ಹೋದಲ್ಲಿ ಬಂದಲ್ಲಿ ಒಂದೇ ಪ್ರಶ್ನೆ.!ಮುನಿರತ್ನ ಬೆನ್ನಿಗೆ ಬಿದ್ದ ಡಿ-ಬಾಸ್ ಫ್ಯಾನ್ಸ್: ಹೋದಲ್ಲಿ ಬಂದಲ್ಲಿ ಒಂದೇ ಪ್ರಶ್ನೆ.!

    ಆಡಿಯೋ ರಿಲೀಸ್ ಯಾವಾಗ?

    ಆಡಿಯೋ ರಿಲೀಸ್ ಯಾವಾಗ?

    ಆಗಸ್ಟ್ 9 ನೇ ತಾರೀಖು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕುರುಕ್ಷೇತ್ರ ಸಿನಿಮಾ ಬರ್ತಿದೆ. ಅದಕ್ಕೂ ಒಂದು ತಿಂಗಳ ಮುಂಚೆ ಜುಲೈ ಮೊದಲ ವಾರದಲ್ಲಿ ಧ್ವನಿ ಸುರಳಿ ಬಿಡುಗಡೆ ಮಾಡುವ ಸಮಾರಂಭ ಏರ್ಪಡಿಸಲು ಚಿಂತಿಸಿದ್ದಾರಂತೆ.

    ದರ್ಶನ್ 'ಕುರುಕ್ಷೇತ್ರ' ಬಿಡುಗಡೆಗೆ ಅಡ್ಡಿಯಾಗ್ತಾರಾ ನಿಖಿಲ್ ಕುಮಾರ್.?ದರ್ಶನ್ 'ಕುರುಕ್ಷೇತ್ರ' ಬಿಡುಗಡೆಗೆ ಅಡ್ಡಿಯಾಗ್ತಾರಾ ನಿಖಿಲ್ ಕುಮಾರ್.?

    English summary
    Why Duryodhana darshan and abhimanyu Nikhil kumar did not attend the kurukshetra press meet at saturday. what the reason given by producer munirathna.
    Monday, May 20, 2019, 13:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X