Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಮ್ಮ ಪ್ರೀತಿಯ ರಾಮು' ಬಳಿಕ ದರ್ಶನ್ ಏಕೆ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಲೇ ಇಲ್ಲ?
Recommended Video
ಪ್ರತಿಯೊಬ್ಬ ನಟನಿಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುವ ಆಸೆ ಇರುತ್ತದೆ. ಕೆಲವು ಬಾರಿ ಅದರ ಪ್ರಯತ್ನಗಳೂ ನಡೆಯುತ್ತದೆ. ಆದರೆ, ಅಂತಹ ಸಿನಿಮಾಗಳ ಫಲಿತಾಂಶ, ಮುಂದೆ ಆ ನಟ ಆ ರೀತಿಯ ಸಿನಿಮಾಗಳ ಬಗ್ಗೆ ಯೋಚನೆ ಮಾಡದೆ ಇರುವ ಹಾಗೆ ಮಾಡಿ ಬಿಡುತ್ತದೆ.
ನಟ ದರ್ಶನ್ ತಮ್ಮ ಕೆರಿಯರ್ ನಲ್ಲಿ ಮಾಡಿದ ಪ್ರಯೋಗಾತ್ಮಕ ಚಿತ್ರ 'ನಮ್ಮ ಪ್ರೀತಿಯ ರಾಮು'. ತಮ್ಮ ಸ್ಟಾರ್ ಪಟ್ಟ, ಆಕ್ಷನ್, ಡ್ಯಾನ್ಸ್ ಎಲ್ಲವನ್ನು ಬಿಟ್ಟು, ಒಬ್ಬ ಅಂಧನ ಪಾತ್ರದಲ್ಲಿ ದರ್ಶನ್ ಇಲ್ಲಿ ಕಾಣಿಸಿಕೊಂಡಿದ್ದರು. ಈ ಸವಾಲಿನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಆದರೆ, ಆ ಸಿನಿಮಾ ಮಾತ್ರ ಗೆಲ್ಲಲಿಲ್ಲ.
ಸುದೀಪ್ ಬಗ್ಗೆ ಕೇಳಿದ್ದಕ್ಕೆ ಫುಲ್ ಗರಂ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಅಂದಹಾಗೆ, 'ನಮ್ಮ ಪ್ರೀತಿಯ ರಾಮು' ಚಿತ್ರ 2003ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾ ಬಂದು ಇಷ್ಟು ವರ್ಷಗಳ ಬಳಿಕ ದರ್ಶನ್ ಅದರ ಬಗ್ಗೆ ಮಾತನಾಡಿದ್ದಾರೆ.
'ಕುರುಕ್ಷೇತ್ರ' ಪ್ರೆಸ್ ಮೀಟ್ ನಲ್ಲಿ ಪ್ರಶ್ನೆ
ಇತ್ತೀಚಿಗಷ್ಟೆ 'ಕುರುಕ್ಷೇತ್ರ' ಚಿತ್ರದ ಸುದ್ದಿಗೋಷಿಯಲ್ಲಿ ದರ್ಶನ್ 'ನಮ್ಮ ಪ್ರೀತಿಯ ರಾಮು' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. 'ನಮ್ಮ ಪ್ರೀತಿಯ ರಾಮು' ಸಿನಿಮಾದ ಸೋಲಿಗೆ ನಿಜವಾದ ಕಾರಣ ಏನು ?, ಆ ಚಿತ್ರದ ನಂತರ ಅಂತಹ ಪ್ರಯೋಗಾತ್ಮಕ ಸಿನಿಮಾಗಳನ್ನು ಏಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ದರ್ಶನ್ ಉತ್ತರ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು
ನಿರ್ಮಾಪಕರಿಂದ ಸಮಸ್ಯೆ ಆಗಿತ್ತು
'ನಮ್ಮ ಪ್ರೀತಿಯ ರಾಮು' ಸಿನಿಮಾ ಸೋಲಿಗೆ ಕಾರಣ ಜನರು ಎಂದು ಅನೇಕರು ತಿಳಿದಿದ್ದಾರೆ. ಮಾಸ್ ಮಹಾರಾಜ ದರ್ಶನ್ ರನ್ನು ಜನ ಈ ರೀತಿಯ ಪಾತ್ರಗಳಲ್ಲಿ ನೋಡಲು ಇಷ್ಟ ಪಡುವುದಿಲ್ಲ ಎನ್ನುವುದು ಇನ್ನು ಕೆಲವರ ಅಭಿಪ್ರಾಯ. ಆದರೆ, ದರ್ಶನ್ ಹೇಳುವ ಪ್ರಕಾರ 'ನಮ್ಮ ಪ್ರೀತಿಯ ರಾಮು' ಸಿನಿಮಾಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತಂತೆ. ಆದರೆ, ನಿರ್ಮಾಪಕರ ಸಮಸ್ಯೆಯಿಂದ ಈ ಸಿನಿಮಾ ಜನರಿಗೆ ತಲುಪಲಿಲ್ಲ. ಬಿ ಪಿ ರಾಮೇ ಗೌಡ ಮತ್ತು ಜಿ ನಂದಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.
ಆ ರೀತಿಯ ಕಥೆಗಳು ಬರಲಿಲ್ಲ
'ನಮ್ಮ ಪ್ರೀತಿಯ ರಾಮು' ಸಿನಿಮಾದ ಸೋಲಿನ ನಂತರ ದರ್ಶನ್ ಗೆ ಆ ರೀತಿಯ ಕಥೆಗಳು ಬರಲಿಲ್ಲವಂತೆ. ಹಾಗಾಗಿ ತಮಗೆ ಬರುತ್ತಿದ್ದ ಮಾಸ್ ಸಿನಿಮಾಗಳನ್ನೆ ದರ್ಶನ್ ಹೆಚ್ಚು ಮಾಡಿದ್ದಾರೆ. ಹೀಗಿದ್ದರೂ, ''ಮುಂದೆ ಬೇರೆ ಬೇರೆ ರೀತಿಯ ಪ್ರಯೋಗಾತ್ಮಕ ಪಾತ್ರಗಳು ಬಂದರೆ ಖಂಡಿತ ಮಾಡುತ್ತೇನೆ. ಒಳ್ಳೆಯ ಸಿನಿಮಾಗಳನ್ನು ಮಾಡುವ ಆಸೆ ಖಂಡಿತ ಇದೆ.'' ಎಂದರು ದರ್ಶನ್.
ಟ್ರೋಲಿಗರಿಗೆ ಆಹಾರವಾಯ್ತು ಚಾಲೆಂಜಿಂಗ್ ಸ್ಟಾರ್ ಎಡವಟ್ಟಿನ ಹೇಳಿಕೆ
ರಂಗಭೂಮಿ ಅನುಭವ ಇರುವ ದರ್ಶನ್
ದರ್ಶನ್ ಒಂದು ಕಡೆ ಮಾಸ್ ಸಿನಿಮಾಗಳಿಗೆ ಅಂಟಿಕೊಂಡಿದ್ದಾರೆ ನಿಜ. ಆದರೆ, ಆಗಾಗ ಅವರ ಪಾತ್ರದ ಶೈಲಿ ಬದಲಾಗುತ್ತದೆ. 'ನಮ್ಮ ಪ್ರೀತಿಯ ರಾಮು', 'ಅನಾಥರು', 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹಾಗೂ 'ಕುರುಕ್ಷೇತ್ರ' ಚಿತ್ರಗಳ ಅವರ ಪಾತ್ರಗಳು ದರ್ಶನ್ ನಟನ ಸಾಮರ್ಥ್ಯವನ್ನು ತೋರುತ್ತದೆ. ಅಲ್ಲದೆ, ರಂಗಭೂಮಿ ಅನುಭವ ಹೊಂದಿರುವ ದರ್ಶನ್ ಬೇರೆ ಬೇರೆ ರೀತಿಯ ಪಾತ್ರವನ್ನು ನಿರ್ವಹಿಸುವ ಶಕ್ತಿ ಹೊಂದಿದ್ದಾರೆ.