Don't Miss!
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಂಸಾಹಾರಿ' ಆಗಿದ್ದ ಜಗ್ಗೇಶ್ ಇದ್ದಕ್ಕಿದ್ದಂತೆ ಸಸ್ಯಾಹಾರಿ ಆಗಿದ್ದು 'ಇದೇ' ಕಾರಣಕ್ಕೆ.!
Recommended Video
ಗ್ರಿಲ್ಡ್ ಚಿಕನ್.. ತಂದೂರಿ ಚಿಕನ್.. ಕಾಲು ಸೂಪ್.. ಮಟನ್ ಸಾಂಬಾರ್.. ಮಟನ್ ಬಿರಿಯಾನಿ.. ಹೀಗೆ ನಾನ್ ವೆಜ್ ಖಾದ್ಯಗಳ ಹೆಸರು ಹೇಳಿದರೆ ಸಾಕು ಅನೇಕರ ಬಾಯಲ್ಲಿ ನೀರೂರುತ್ತೆ.
ಒಂದ್ಕಾಲದಲ್ಲಿ ಮಾಂಸಾಹಾರಿ ಆಗಿದ್ದ ನಟ ಜಗ್ಗೇಶ್ ಇದೀಗ ಸಸ್ಯಾಹಾರಿ ಆಗಿ ಬದಲಾಗಿದ್ದಾರೆ. 'ಬದಲಾವಣೆ ಜಗದ ನಿಯಮ' ಅನ್ನೋದು ಸಹಜ. ಆದ್ರೆ, ಆಹಾರ ಪದ್ಧತಿಯಲ್ಲಿ ಬದಲಾವಣೆ ತರಲು ನಟ ಜಗ್ಗೇಶ್ ಮನಸ್ಸು ಮಾಡಿದ್ದು ಯಾಕೆ ಗೊತ್ತಾ.?
ಈ ಜಾಗಕ್ಕೂ ಜಗ್ಗೇಶ್ ಗೂ ಅವಿನಾಭಾವ ಸಂಬಂಧ: ಯಾವುದು ಈ ಸ್ಥಳ.?
ಒಂದು ಕುರಿಯನ್ನು ಕಡಿಯಲು ಕಟುಕ ಅಣಿಯಾದಾಗ ಮತ್ತೊಂದು ಕುರಿ ರೋಧಿಸುತ್ತಿದ್ದನ್ನ ನೋಡಿ ಸ್ವತಃ ಕಣ್ಣೀರಿಟ್ಟಿದ್ದ ನಟ ಜಗ್ಗೇಶ್ ಮಾಂಸಾಹಾರವನ್ನ ತ್ಯಜಿಸಿದರಂತೆ. ಹಾಗೆಂದು ಸ್ವತಃ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
''ನಾನು ಸಸ್ಯಾಹಾರಿ ಆಗಿದ್ದು ಯಾಕೆ ಅಂದ್ರೆ, ಊರ ಹಬ್ಬಕ್ಕೆ ಕುರಿ ಕಡಿಯಲು ಕಟುಕ ಅಣಿಯಾದಾಗ ಮತ್ತೊಂದು ಕುರಿ ರೋಧಿಸುತ್ತಿದ್ದನ್ನು ನೋಡಿ ನಾನು ಅತ್ತುಬಿಟ್ಟೆ. ಕಟುಕನಿಗೆ ತಲೆ ಕೊಟ್ಟಿದ್ದು ಮಗ, ರೋಧಿಸುತ್ತಿದ್ದದ್ದು ಅಮ್ಮ. ಪ್ರಾಣಿಗಳಲ್ಲೂ ಭಾವನಾತ್ಮಕ ಸಂಬಂಧ ಇರುತ್ತದೆ. ಹೀಗಾಗಿ 4 ಗಂಟೆಗೆ ಮಲವಾಗುವ ಊಟಕ್ಕೆ ಯಾಕೆ ಬೇಕು ಭಾವನೆ ಕೊಂದ ಊಟ.?! ದಯೆಯೇ ಧರ್ಮದ ಮೂಲ'' ಎಂದು ಟ್ವೀಟ್ ಮಾಡಿದ್ದಾರೆ ನಟ ಜಗ್ಗೇಶ್.
Why i Became vegetarian.!
— ನವರಸನಾಯಕ ಜಗ್ಗೇಶ್ (@Jaggesh2) June 27, 2018
ಊರ ಹಬ್ಬಕ್ಕೆ ಕುರಿ ಕಡಿಯಲು ಕಟುಕ ಅಣಿಯಾದಾಗ ಮಾತ್ತೊಂದು ಕುರಿ ರೋಧಿಸುತ್ತಿತ್ತು ವಿಷಯ ತಿಳಿದಾಗ ನಾನು ಅತ್ತುಬಿಟ್ಟಿ.!
ಕಟುಕನಿಗೆ ತಲೆಕೊಟ್ಟದ್ದು ಮಗ ರೋಧಿಸುತ್ತಿದ್ದದ್ದು ಅಮ್ಮ.!
ಪ್ರಾಣಿಗಳಲ್ಲು ಭಾವನಾತ್ಮಕ ಸಂಬಂಧವಿರುತ್ತದೆ.!
4ಘಂಟೆಗೆ ಮಲವಾಗುವ ಊಟಕ್ಕೆ ಯಾಕೆ ಬೇಕು ಭಾವನೆ ಕೊಂದ ಊಟ.!
ದಯೇ ಧರ್ಮದ ಮೂಲ.!
ಪ್ರಾಣಿ ಪ್ರಿಯರು, 'ಪ್ರಾಣಿ ಹಿಂಸೆ ಮಹಾ ಪಾಪ' ಎನ್ನುವುದನ್ನ ನಂಬಿರುವವರು ಜಗ್ಗೇಶ್ ಮಾಡಿರುವ ಈ ಟ್ವೀಟ್ ಗೆ ಜೈಕಾರ ಹಾಕುತ್ತಿದ್ದಾರೆ. ಇದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...