ಸುದೀಪ್ 'ಕನ್ವರ್ ಲಾಲ್' ಸಿನಿಮಾ ನಿಂತಿದ್ಯಾಕೆ?
ಕಿಚ್ಚ ಸುದೀಪ್ ಅವರು 'ಕನ್ವರ್ ಲಾಲ್' ಹೆಸರಿನಲ್ಲಿ ಸಿನಿಮಾ ಮಾಡಲು ಯೋಜಿಸಿದ್ದರು. ಅದಕ್ಕೆ ಬೇಕಾದ ತಯಾರಿ ಕೂಡ ನಡೆಸಿದ್ದರು. ದುರಾದೃಷ್ಟವಶಾತ್ ಆ ಪ್ರಾಜೆಕ್ಟ್ ಆರಂಭವಾಗಲಿಲ್ಲ. ಇದ್ದಕ್ಕಿದ್ದಂತೆ ಈ ಸಿನಿಮಾ ನಿಂತಿದ್ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೂಪರ್ ಹಿಟ್ 'ಅಂತ' ಚಿತ್ರದ ಕನ್ವರ್ ಲಾಲ್ ಪಾತ್ರವನ್ನಿಟ್ಟು, ಸುದೀಪ್ ಸ್ಕ್ರಿಪ್ಟ್ ಮಾಡಿದ್ದರಂತೆ. ಈ ಸಿನಿಮಾ ಮಾಡೋಣ ಎಂದು ನಿರ್ಧರಿಸಿದಾಗ ಅಲ್ಲೊಂದು ಸಮಸ್ಯೆ ಎದುರಾಯಿತಂತೆ. ಆ ಕಾರಣಕ್ಕಾಗಿ ಈ ಚಿತ್ರವನ್ನ ನಿಲ್ಲಿಸಬೇಕಾಯಿತಂತೆ. ಆದರೆ, ಆ ಸಮಸ್ಯೆ ಏನು ಎಂಬುದನ್ನ ಸುದೀಪ್ ಹೇಳಲಿಲ್ಲ.

ಆ ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕರಿಗೆ ಮೋಸ ಆಗಬಾರದು ಎಂಬ ಕಾರಣಕ್ಕೆ, ಸೂರಪ್ಪಬಾಬು ಅವರ ಬಳಿಯಿದ್ದ 'ಸಿಂಗಂ' ಚಿತ್ರದ ಹಕ್ಕನ್ನು ಖರೀದಿ ಮಾಡಿ, ಕೆಂಪೇಗೌಡ ಸಿನಿಮಾ ಮಾಡಲಾಯಿತಂತೆ.
ಕನ್ವರ್ ಲಾಲ್ ಚಿತ್ರಕ್ಕೆ ಸ್ವತಃ ಸುದೀಪ್ ಚಿತ್ರಕಥೆ ಬರೆದಿದ್ದರು. ಬಹುಶಃ ಆ ಸ್ಕ್ರಿಪ್ಟ್ ಇನ್ನು ಸುದೀಪ್ ಅವರ ಬಳಿಯೇ ಉಳಿಸಿಕೊಂಡಿರಬೇಕು. ಕಿಚ್ಚನ ಮನಸ್ಸು ಮಾಡಿದ್ರೆ ಮತ್ತೆ ಈ ಚಿತ್ರಕ್ಕೆ ಜೀವ ನೀಡಬಹುದು.
ಸದ್ಯ ಸುದೀಪ್ ಅವರು ನಿರ್ದೇಶನ ಮಾಡುವ ಕಡೆ ಒಲವು ಹೊಂದಿಲ್ಲ. ಯಾಕಂದ್ರೆ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ, ಬೇರೆ ನಿರ್ದೇಶಕರಿಗೆ ಕಾಲ್ ಶೀಟ್ ಕೊಡಬೇಕಿರುವ ಒತ್ತಡದಲ್ಲಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಇನ್ನು ಮುಗಿದಿಲ್ಲ. ಅದಾದ ಬಳಿಕ ಅನೂಪ್ ಭಂಡಾರಿ ಜೊತೆ ಸಿನಿಮಾ ಆರಂಭಿಸಬೇಕಿದೆ.


Click it and Unblock the Notifications











