Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ 'ಕನ್ವರ್ ಲಾಲ್' ಸಿನಿಮಾ ನಿಂತಿದ್ಯಾಕೆ?
ಕಿಚ್ಚ ಸುದೀಪ್ ಅವರು 'ಕನ್ವರ್ ಲಾಲ್' ಹೆಸರಿನಲ್ಲಿ ಸಿನಿಮಾ ಮಾಡಲು ಯೋಜಿಸಿದ್ದರು. ಅದಕ್ಕೆ ಬೇಕಾದ ತಯಾರಿ ಕೂಡ ನಡೆಸಿದ್ದರು. ದುರಾದೃಷ್ಟವಶಾತ್ ಆ ಪ್ರಾಜೆಕ್ಟ್ ಆರಂಭವಾಗಲಿಲ್ಲ. ಇದ್ದಕ್ಕಿದ್ದಂತೆ ಈ ಸಿನಿಮಾ ನಿಂತಿದ್ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೂಪರ್ ಹಿಟ್ 'ಅಂತ' ಚಿತ್ರದ ಕನ್ವರ್ ಲಾಲ್ ಪಾತ್ರವನ್ನಿಟ್ಟು, ಸುದೀಪ್ ಸ್ಕ್ರಿಪ್ಟ್ ಮಾಡಿದ್ದರಂತೆ. ಈ ಸಿನಿಮಾ ಮಾಡೋಣ ಎಂದು ನಿರ್ಧರಿಸಿದಾಗ ಅಲ್ಲೊಂದು ಸಮಸ್ಯೆ ಎದುರಾಯಿತಂತೆ. ಆ ಕಾರಣಕ್ಕಾಗಿ ಈ ಚಿತ್ರವನ್ನ ನಿಲ್ಲಿಸಬೇಕಾಯಿತಂತೆ. ಆದರೆ, ಆ ಸಮಸ್ಯೆ ಏನು ಎಂಬುದನ್ನ ಸುದೀಪ್ ಹೇಳಲಿಲ್ಲ.
ಅಂಬಿ ಬಯೋಪಿಕ್ ನಲ್ಲಿ ಸುದೀಪ್: ಕಿಚ್ಚ ಹೇಳಿದ್ದೇನು?
ಆ ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕರಿಗೆ ಮೋಸ ಆಗಬಾರದು ಎಂಬ ಕಾರಣಕ್ಕೆ, ಸೂರಪ್ಪಬಾಬು ಅವರ ಬಳಿಯಿದ್ದ 'ಸಿಂಗಂ' ಚಿತ್ರದ ಹಕ್ಕನ್ನು ಖರೀದಿ ಮಾಡಿ, ಕೆಂಪೇಗೌಡ ಸಿನಿಮಾ ಮಾಡಲಾಯಿತಂತೆ.
ಬಿಗ್ ಬಾಸ್ ಸಂಭಾವನೆ ಬಗ್ಗೆ ಕೇಳಿದ್ದಕ್ಕೆ ಸುದೀಪ್ ಏನಂದ್ರು?
ಕನ್ವರ್ ಲಾಲ್ ಚಿತ್ರಕ್ಕೆ ಸ್ವತಃ ಸುದೀಪ್ ಚಿತ್ರಕಥೆ ಬರೆದಿದ್ದರು. ಬಹುಶಃ ಆ ಸ್ಕ್ರಿಪ್ಟ್ ಇನ್ನು ಸುದೀಪ್ ಅವರ ಬಳಿಯೇ ಉಳಿಸಿಕೊಂಡಿರಬೇಕು. ಕಿಚ್ಚನ ಮನಸ್ಸು ಮಾಡಿದ್ರೆ ಮತ್ತೆ ಈ ಚಿತ್ರಕ್ಕೆ ಜೀವ ನೀಡಬಹುದು.
ಸದ್ಯ ಸುದೀಪ್ ಅವರು ನಿರ್ದೇಶನ ಮಾಡುವ ಕಡೆ ಒಲವು ಹೊಂದಿಲ್ಲ. ಯಾಕಂದ್ರೆ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ, ಬೇರೆ ನಿರ್ದೇಶಕರಿಗೆ ಕಾಲ್ ಶೀಟ್ ಕೊಡಬೇಕಿರುವ ಒತ್ತಡದಲ್ಲಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಇನ್ನು ಮುಗಿದಿಲ್ಲ. ಅದಾದ ಬಳಿಕ ಅನೂಪ್ ಭಂಡಾರಿ ಜೊತೆ ಸಿನಿಮಾ ಆರಂಭಿಸಬೇಕಿದೆ.