Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಸ್ಟರ್ ಪೀಸ್' ಹಿಟ್ ಆದ್ರೂ ಮಂಜು ಮಾಂಡವ್ಯ 4 ವರ್ಷ ಸಿನಿಮಾ ಮಾಡಲಿಲ್ಲ ಏಕೆ?
ನಿರ್ದೇಶಕ ಮಂಜು ಮಾಂಡವ್ಯ 'ಮಾಸ್ಟರ್ ಪೀಸ್' ನಂತಹ ಹಿಟ್ ಸಿನಿಮಾ ನೀಡಿದ್ದರು. ಯಶ್ ರೊಂದಿಗೆ ಮಾಡಿದ ಈ ಸಿನಿಮಾದ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆ ಮಾಡಿತ್ತು. ಆದರೂ ಈ ಸಿನಿಮಾದ ನಂತರ 4 ವರ್ಷ ಅವರ ಬೇರೆ ಯಾವ ಸಿನಿಮಾವೂ ಶುರು ಆಗಲಿಲ್ಲ.
ಹೀಗಾಗಿ ಮಂಜು ಮಾಂಡವ್ಯಗೆ 'ಮಾಸ್ಟರ್ ಪೀಸ್' ನಂತರ ಅವಕಾಶಗಳು ಸಿಗಲಿಲ್ಲ ಎನ್ನುವ ಮಾತು ಇತ್ತು. ಆದರೆ, ಈ ಬಗ್ಗೆ ಸ್ವತಃ ಮಂಜು ಮಾಂಡವ್ಯ ಸ್ಪಷ್ಟನೆ ನೀಡಿದ್ದಾರೆ. 'ಶ್ರೀ ಭರತ ಬಾಹುಬಲಿ' ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಈ ಸಂಗತಿ ಹಂಚಿಕೊಂಡಿದ್ದಾರೆ.
'ಮಾಸ್ಟರ್ ಪೀಸ್'ಗೆ ವಿಜಯ ಕಿರಗಂದೂರು ನಿರ್ಮಾಪಕರಾಗಿದ್ದರು. ಸಿನಿಮಾ ಬಗ್ಗೆ ಪ್ರೀತಿ ಇದ್ದ ಅವರು ಏನು ಕೇಳಿದರೂ ನೀಡುತ್ತಿದ್ದರು. ಆ ಚಿತ್ರದ ನಂತರ ನಾನು ಅದೇ ರೀತಿಯ ನಿರ್ಮಾಪಕರನ್ನು ನೋಡುತ್ತಿದ್ದೆ. ಆದರೆ, ನನ್ನ ಬಳಿ ಬರುವ ನಿರ್ಮಾಪಕರನ್ನು ಗಮನಿಸಿದರೆ, ಸಿನಿಮಾ ಮಾಡುವ ನಂಬಿಕೆ ಬರಲಿಲ್ಲ.
''ಮೈ ತುಂಬ ಚಿನ್ನ ಹಾಕಿಕೊಂಡು ಬರುತ್ತಿದ್ದರು. ಈ ಕಾರ್ ನಿಮ್ಮದೆ ಎನ್ನುತ್ತಿದ್ದರೂ ನನಗೆ ಅದನ್ನು ನೋಡಿದಾಗ ಇವರು ಸಿನಿಮಾ ಮಾಡಲು ಬಂದಿದ್ದಾರೆಯೇ ಎನ್ನುವ ಅನುಮಾನ ಮೂಡುತ್ತಿತ್ತು. ಹಾಗಾಗಿ, ನನ್ನ ಸಿನಿಮಾ ತಡ ಆಯಿತು.'' ಎಂದು ಮಂಜು ಹೇಳಿದ್ದಾರೆ.
ಅದರೊಂದಿಗೆ, ಉಪೇಂದ್ರರಿಗೆ ಒಂದು ಸಿನಿಮಾ ಮಾಡುವ ಪ್ಲಾನ್ ಇತ್ತು. ಆದರೆ, ನೋಟ್ ಬ್ಯಾನ್ ನಿಂದ ಆ ಸಿನಿಮಾ ನಿಂತು ಹೋಯ್ತು. ಈ ಕಾರಣಗಳಿಂದ ನಾನು 4 ವರ್ಷ ಸಿನಿಮಾ ಮಾಡಲಿಲ್ಲ ಎಂದು ಮಂಜು ಮಾಂಡವ್ಯ ತಿಳಿಸಿದ್ದಾರೆ.
'ಶ್ರೀ ಭರತ ಬಾಹುಬಲಿ' ಮಂಜು ಮಾಂಡವ್ಯ ನಿರ್ದೇಶನದ ಹಾಗೂ ನಟನೆಯ ಸಿನಿಮಾವಾಗಿದೆ. ಈ ಸಿನಿಮಾ ಜನವರಿ 17 ರಂದು ಬಿಡುಗಡೆ ಆಗಲಿದೆ.