Just In
Don't Miss!
- News
ಗಣರಾಜ್ಯೋತ್ಸವ ಪರೇಡ್ನಲ್ಲಿ ಇದೇ ಮೊದಲ ಬಾರಿ ಲಡಾಖ್ ಸ್ತಬ್ಧಚಿತ್ರ
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Finance
ಜನವರಿ 1ರಿಂದ 22ರ ತನಕ ಎಫ್ ಪಿಐನಿಂದ ರು. 18,456 ಕೋಟಿ ಹೂಡಿಕೆ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲ್ಲರನ್ನ ಬಿಟ್ಟು 'ಪ್ರಜಾಕಾರಣಿ' ಉಪೇಂದ್ರಗೆ ಮಾತ್ರ ಯಾಕೆ ಜೈ ಎನ್ನಬೇಕು.?
ನಮ್ ದೇಶದಲ್ಲಿ ರಾಜಕೀಯ, ರಾಜಕಾರಣ ಹೊಸದಾ.? ಖಂಡಿತ ಇಲ್ಲ. ಎಂತೆಂಥವ್ರೋ ರಾಜಕೀಯಕ್ಕೆ ಧುಮುಕಿ ಬೇಜಾನ್ ಕಾಸು ಮಾಡ್ಕೊಂಡಿದ್ದನ್ನ ನೋಡಿದ್ದೀವಿ. ಹಾಗೇ ಜೇಬು ತುಂಬಾ ದುಡ್ಡು ಹಿಡ್ಕೊಂಡ್ ಬಂದು, ಎಲೆಕ್ಷನ್ ನಲ್ಲಿ ಮಕಾಡೆ ಮಲಗಿ, ಇದ್ದ ಹಣವನ್ನೆಲ್ಲ ಕಳ್ಕೊಂಡೋರ ಕಥೆಯನ್ನೂ ಕೇಳಿದ್ದೀವಿ. ಈ ಮಧ್ಯೆ ಸಿನಿಮಾ ಮಾಡ್ಕೊಂಡಿದ್ದ ಉಪೇಂದ್ರಗೆ ರಾಜಕೀಯದ ಉಸಾಬರಿ ಯಾಕ್ ಬೇಕು ಅಂತ ಕೆಲವರು ತಲೆ ಚಚ್ಚಿಕೊಳ್ಳಬಹುದು.
ಹಾಗೇ, ರಾಜಕೀಯದಲ್ಲಿ ಅನುಭವವೇ ಇಲ್ಲದ ಉಪ್ಪಿಗೆ ನಾವ್ಯಾಕೆ ಸಪೋರ್ಟ್ ಮಾಡಬೇಕು ಎಂಬ ಹುಳ ಕೆಲವರ ತಲೆಯಲ್ಲಿ ಹರಿದಾಡುತ್ತಿರಬಹುದು. ಅಂಥವರೆಲ್ಲರಿಗೂ ಉಪೇಂದ್ರ ಕೊಟ್ಟಿರುವ ಉತ್ತರ ಇದು. ಒಮ್ಮೆ ಓದ್ಕೊಂಡ್ಬಿಡಿ...
''ರಾಜನ ಕೈಯಲ್ಲಿ ಕೀ ಕೊಡುತ್ತೀರಾ... ರಾಜಕೀಯಕ್ಕೆ ಸಪೋರ್ಟ್ ಮಾಡಿ. ಇಲ್ಲ ನೀವು ಪ್ರಜೆಗಳ ಕೈಯಲ್ಲಿ ಕೀ ಇಟ್ಕೊಂತೀರಾ.? ಪ್ರಜಾಕೀಯಕ್ಕೆ ಸಪೋರ್ಟ್ ಮಾಡಿ ಅಂತ ಹೇಳಿ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಅಷ್ಟಕ್ಕೂ, ಉಪ್ಪಿ ಹೀಗೆ ಟ್ವೀಟ್ ಮಾಡಲು ಕಾರಣ ಪಾರ್ಥ ವಾಸು ಎಂಬ ಉಪ್ಪಿ ಅಭಿಮಾನಿ. ''ಸರ್ ನಾನು ನನ್ ಫ್ರೆಂಡ್ಸ್ ಗೆ ಉಪ್ಪಿ ಸರ್ ಸ ಸಪೋರ್ಟ್ ಮಾಡಿ ಎಂದಾಗ ಅವರು ಕೇಳಿದ ಒಂದು ಪ್ರಶ್ನೆ 'ಯಾಕೆ ಸಪೋರ್ಟ್ ಮಾಡಬೇಕು' ಅಂತ. ಅದಕ್ಕೆ ನಿಮ್ಮ ಉತ್ತರವೇನು.?'' ಎಂದು ಪಾರ್ಥ ವಾಸು ಎಂಬುವರು ಉಪ್ಪಿಗೆ ಟ್ವೀಟ್ ಸಂದೇಶ ಕಳುಹಿಸಿದ್ದರು.
ರಾಜನ ಕಯ್ಯಲ್ಲಿ ಕೀ ಕೊಡುತೀರಾ ರಾಜಕೀಯಕ್ಕೆ ಸಪೋರ್ಟ್ ಮಾಡಿ. ಇಲ್ಲ ನೀವು ಪ್ರಜೆಗಳ ಕಯ್ಯಲ್ಲಿ ಕೀ ಇಟ್ಕೊಂತೀರಾ ? ಪ್ರಜಾಕೀಯಕ್ಕೆ ಸಪೋರ್ಟ್ ಮಾಡಿ ಅಂತ ಹೇಳಿ.
— Upendra (@nimmaupendra) August 21, 2017
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಉಪೇಂದ್ರ ಪ್ರಜೆಗಳ ಕೈಯಲ್ಲಿ ಕೀ ಇರಬೇಕು ಅಂದ್ರೆ, ಪ್ರಜಾಕಾರಣಕ್ಕೆ ಸಪೋರ್ಟ್ ಮಾಡಿ ಎಂದಿದ್ದಾರೆ. ಉಪ್ಪಿ ಉತ್ತರ ಸರಿ ಎನಿಸಿದರೆ, ಉಪ್ಪಿಗೆ ಜೈಕಾರ ಹಾಕಿಬಿಡಿ....