Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಬೇಸರಕ್ಕೆ ಕಾರಣವೇನು?
ಶ್ರೀನಗರ ಕಿಟ್ಟಿ ಸ್ಯಾಂಡಲ್ ವುಡ್ ನ ತ್ಯಾಗರಾಜ ಅಂತಾನೇ ಫೇಮಸ್. ರಮೇಶ್ ಅರವಿಂದ್ ನಂತ್ರ ಟ್ರ್ಯಾಜಿಡಿ ಎಂಡಿಂಗ್ ಸಿನಿಮಾಗಳಲ್ಲಿ ಮಿಂಚಿದ ನಟ. ಕಿಟ್ಟಿ ಸಿನಿಮಾಗಳಲ್ಲಿ ಕೊರೆಯುವ ನೋವು ಚಿತ್ರಪ್ರೇಮಿಗಳಿಗೆ ಇಷ್ಟವಾಗಿತ್ತು.
'ಸಂಜು ವೆಡ್ಸ್ ಗೀತಾ' ನಂತರ ಡೈಮಂಡ್ ಸ್ಟಾರ್ ಕೂಡ ಆದ ಶ್ರೀನಗರ ಕಿಟ್ಟಿಯವರ ಯಾವ ಸಿನಿಮಾಗಳೂ ರಿಲೀಸಾಗೋ ಲಕ್ಷಣಗಳಿಲ್ಲ. ಕಿಟ್ಟಿ ಅಭಿನಯದ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ಮುಗ್ಗರಿಸಿವೆ.
'ಸಂಜು ವೆಡ್ಸ್ ಗೀತಾ' ನಂತರ 'ಪಾರು ವೈಫ್ ಆಫ್ ದೇವದಾಸ್', ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ 'ಅಪ್ಪಯ್ಯ', ಇತ್ತೀಚೆಗೆ ಬಂದ 'ಬಹುಪರಾಕ್' ಸಿನಿಮಾಗಳಿಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಸದ್ಯ ಸುಬ್ರಮಣಿ, ಶಂಕ್ರ, ಗೀತಾಂಜಲಿ ಸಿನಿಮಾಗಳು ಶೂಟಿಂಗ್ ಮುಗಿಸಿವೆ.
ಆದ್ರೆ ಮಾರ್ಕೆಟ್ ನಲ್ಲಿ ಕಿಟ್ಟಿ ಹವಾ ಸ್ವಲ್ಪ ಕಡಿಮೆ ಇರುವ ಕಾರಣ ಸಿನಿಮಾ ರೆಡಿಯಾದರೂ ತೆರೆಗೆ ತರಲಾಗದಿರೋ ಸ್ಥಿತಿಯಲ್ಲಿದ್ದಾರೆ ನಿರ್ಮಾಪಕರು. ಇಂದರಿಂದಾಗಿ ಬೇಸರದಿಂದಾಗಿ ಶ್ರೀನಗರ ಕಿಟ್ಟಿ ಯಾವುದೇ ಕಾರ್ಯಕ್ರಮಗಳಿಗೆ ಬರ್ತಿಲ್ಲ ಅನ್ನೋ ಗುಲ್ಲು ಗಾಂಧಿನಗರದಲ್ಲಿ ಹರಿದಾಡ್ತಿದೆ.
ಟ್ರ್ಯಾಜಿಡಿ ಸಿನಿಮಾಗಳ ಹೀರೋ ಈಗ ಟ್ರ್ಯಾಜಿಡಿ ಸ್ಥಿತಿಯಲ್ಲಿರೋದು ಕಿಟ್ಟಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ. ಶ್ರೀನಗರಕಿಟ್ಟಿ ಮತ್ತೆ ಫಾರಂಗೆ ಬರಲಿ. ಅವರ ಚಿತ್ರಗಳು ಹಂಡ್ರಡ್ ಡೇಸ್ ಪ್ರದರ್ಶನ ಕಾಣಲಿ ಎಂಬುದು ಅಭಿಮಾನಿಗಳ ಅಭಿಮತ.