Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಯೋಗ್ಯ' ನಿರ್ದೇಶಕರಿಗೆ ಭಾರಿ ಡಿಮ್ಯಾಂಡ್: 'ಮದ ಗಜ' ಆಗ್ತಾರಾ ಧ್ರುವ ಸರ್ಜಾ.?
'ಅಯೋಗ್ಯ' ಸಿನಿಮಾ ಸೂಪರ್ ಹಿಟ್ ಆದ್ಮೇಲೆ ನಿರ್ದೇಶಕ ಮಹೇಶ್ ಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. 'ಅಯೋಗ್ಯ' ಚಿತ್ರ ಹತ್ತು ಕೋಟಿ ಕ್ಲಬ್ ಸೇರಿದ್ಮೇಲೆ, ಮಹೇಶ್ ನಿರ್ದೇಶನ ಮಾಡುವ ಮುಂದಿನ ಚಿತ್ರಕ್ಕೆ ಬಂಡವಾಳ ಹಾಕಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ.
ಚೊಚ್ಚಲ ಚಿತ್ರ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ, ನಿರ್ದೇಶಕ ಮಹೇಶ್ ಗೆ ಜವಾಬ್ದಾರಿ ಜಾಸ್ತಿ ಆಗಿದೆ. ಎರಡನೇ ಚಿತ್ರವನ್ನೂ ಚೆನ್ನಾಗಿ ತೆರೆಗೆ ತರಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಮಾಸ್ ಎಂಟರ್ ಟೇನರ್ ಕಥೆಯನ್ನ ರೆಡಿ ಮಾಡಿಕೊಂಡಿರುವ ಮಹೇಶ್, ಚಿತ್ರಕ್ಕೆ 'ಮದ ಗಜ' ಅಂತ ಶೀರ್ಷಿಕೆ ಫಿಕ್ಸ್ ಮಾಡಿದ್ದಾರೆ. ಮಹೇಶ್ ಆಕ್ಷನ್ ಕಟ್ ಹೇಳುವ 'ಮದ ಗಜ' ಚಿತ್ರಕ್ಕೆ ಹೀರೋ ಯಾರಾಗುತ್ತಾರೆ ಅನ್ನೋದೇ ಸದ್ಯದ ಪ್ರಶ್ನೆ. ಮುಂದೆ ಓದಿರಿ...
'ಮದ ಗಜ' ಆಗ್ತಾರಾ ಧ್ರುವ ಸರ್ಜಾ.?
ಧ್ರುವ ಸರ್ಜಾ ಅವರಿಗೆ ನಿರ್ದೇಶಕ ಮಹೇಶ್ 'ಮದ ಗಜ' ಕಥೆ ಹೇಳಿದ್ದಾಗಿದೆ. 'ಮದ ಗಜ' ಕಥೆ ಕೇಳಿ ಧ್ರುವ ಸರ್ಜಾ ಇಷ್ಟ ಪಟ್ಟಿದ್ದಾರೆ. ಹಾಗಾದ್ರೆ, 'ಮದ ಗಜ' ಚಿತ್ರಕ್ಕೆ ಧ್ರುವ ಸರ್ಜಾ ಹೀರೋ ಆಗುತ್ತಾರಾ.? ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ ಇನ್ನೂ ಏಳು ದಿನ ಕಾಯಬೇಕು.
'ಅಯೋಗ್ಯ'ನ ಆನಂದದಲ್ಲಿ ಭಾಗಿಯಾದ ಧ್ರುವ ಸರ್ಜಾ
ಡೇಟ್ಸ್ ಹೊಂದಾಣಿಕೆ ಆಗಬೇಕು.!
'ಪೊಗರು' ಚಿತ್ರದ ಶೂಟಿಂಗ್ ನಲ್ಲಿ ನಟ ಧ್ರುವ ಸರ್ಜಾ ಬಿಜಿಯಿದ್ದಾರೆ. ಹೀಗಾಗಿ, ಡೇಟ್ಸ್ ಕ್ಲ್ಯಾಶ್ ಆಗದೇ ಇದ್ದರೆ, 'ಮದ ಗಜ' ಚಿತ್ರವನ್ನ ಧ್ರುವ ಸರ್ಜಾ ಒಪ್ಪಿಕೊಳ್ಳುವ ಸಾಧ್ಯತೆ ಇದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.?
ಚೆನ್ನೈನಲ್ಲಿದ್ದಾರೆ ಧ್ರುವ ಸರ್ಜಾ
ಸದ್ಯ ಧ್ರುವ ಸರ್ಜಾ ಚೆನ್ನೈನಲ್ಲಿದ್ದಾರೆ. ಅಲ್ಲಿಂದ ಅವರು ವಾಪಸ್ ಬರುವುದು ಸೆಪ್ಟೆಂಬರ್ 20 ರಂದು. 'ಮದ ಗಜ' ಚಿತ್ರಕ್ಕೆ ಧ್ರುವ ಸರ್ಜಾ ಡೇಟ್ಸ್ ಕೊಡ್ತಾರಾ, ಇಲ್ವಾ ಅನ್ನೋದು ಇದೇ ತಿಂಗಳ 20 ರಂದು ಪಕ್ಕಾ ಆಗಲಿದೆ.
'ಬಹದ್ದೂರ್' ಧ್ರುವ ಸರ್ಜಾ ಗಡ್ಡ ಬಿಟ್ಟಿರುವುದರ ಹಿಂದಿನ ಗುಟ್ಟೇನು.?
ಎಲ್ಲವೂ ಸಸ್ಪೆನ್ಸ್
'ಮದ ಗಜ' ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಟಾಪ್ ಹೀರೋಯಿನ್ ನಾಯಕಿ ಆಗಲು ಒಪ್ಪಿಕೊಂಡಿದ್ದಾರಂತೆ. ದಕ್ಷಿಣ ಭಾರತದ ಪ್ರಖ್ಯಾತ ವಿಲನ್ 'ಮದ ಗಜ' ಚಿತ್ರಕ್ಕಾಗಿ ಗಾಂಧಿನಗರಕ್ಕೆ ಬರ್ತಿದ್ದಾರೆ. ಯಾರು ಆ ವಿಲನ್, ನಾಯಕಿ ಯಾರು ಎಂಬ ಗುಟ್ಟನ್ನ ನಿರ್ದೇಶಕ ಮಹೇಶ್ ಬಿಟ್ಟು ಕೊಟ್ಟಿಲ್ಲ. 'ಮದ ಗಜ' ಚಿತ್ರದ ಬಗ್ಗೆ ಲೇಟೆಸ್ಟ್ ಅಪ್ ಡೇಟ್ಸ್ ಕೊಡ್ತಾಯಿರ್ತೀವಿ, 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಭೇಟಿ ನೀಡುತ್ತಲಿರಿ..