Don't Miss!
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೋಕಸಭೆ ಚುನಾವಣೆಯಲ್ಲಿ 'UPP' ಸ್ಪರ್ಧಿಸಬೇಕಾ? ಉಪ್ಪಿ ಕೇಳಿದ ಪ್ರಶ್ನೆಗೆ ಜನರು ಏನಂದ್ರು?
ಲೋಕಸಭೆ ಚುನಾವಣೆಗಾಗಿ ಕೌಂಟ್ ಡೌನ್ ಶುರುವಾಗಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಎಲೆಕ್ಷನ್ ನಡೆಯಬಹುದು ಎಂಬ ನಿರೀಕ್ಷೆಯಿದೆ. ಈ ಮಹಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ದೇಶದ ಇತರೆ ಪಕ್ಷಗಳು ಸಜ್ಜಾಗುತ್ತಿವೆ.
ಈ ಮಧ್ಯೆ ನಟ ಉಪೇಂದ್ರ ಅವರ 'ಉತ್ತಮ ಪ್ರಜಾಕೀಯ ಪಾರ್ಟಿ' ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾ ಅಥವಾ ಇಲ್ವಾ ಎಂಬ ಕುತೂಹಲ ಈಗ ಸ್ಯಾಂಡಲ್ ವುಡ್ ಅಭಿಮಾನಿಗಳನ್ನ ಹಾಗೂ ಉಪೇಂದ್ರ ಅವರ ಬೆಂಬಲಿಗರನ್ನ ಕಾಡುತ್ತಿದೆ.
ಡೈರೆಕ್ಷನ್ ಮಾಡಿ ಅಂತಿದ್ದವರಿಗೆ 'ಮೆಗಾ ಬ್ರೇಕಿಂಗ್' ನೀಡಿದ ಉಪೇಂದ್ರ
ಈಗಾಗಲೇ 'ಉತ್ತಮ ಪ್ರಜಾಕೀಯ ಪಾರ್ಟಿ' ಎಂದು ಪಕ್ಷದ ಹೆಸರು ರಿಜಿಸ್ಟರ್ ಮಾಡಿಸಿರುವ ಉಪೇಂದ್ರ, ಪಕ್ಷದ ಗುರುತನ್ನ ಪಡೆದುಕೊಂಡಿಲ್ಲ. ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಇಂತಹ ಸಮಯದಲ್ಲಿ UPP ಏನು ಮಾಡುತ್ತೆ ಎಂಬುದು ಚರ್ಚೆಯಾಗ್ತಿದೆ. ಈ ಬಗ್ಗೆ ಸ್ವತಃ ಉಪೇಂದ್ರ ಅವರೇ ಜನರ ಅಭಿಪ್ರಾಯ ಕೇಳಿದ್ದಾರೆ. ಅದಕ್ಕೆ ಜನರು ಏನು ಹೇಳಿದ್ದಾರೆ? ಮುಂದೆ ಓದಿ....
UPP ಸ್ಪರ್ಧೆ ಮಾಡ್ಬೇಕಾ? ಬೇಡವಾ?
ಈ ಬರುವ 2019 ಲೋಕಸಭಾ ಚುನಾವಣೆಗೆ ''ಉತ್ತಮ ಪ್ರಜಾಕೀಯ ಪಾರ್ಟಿ'' ಸ್ಪರ್ದಿಸಬೇಕೆ? ಎಂದು ಪ್ರಶ್ನಿಸಿರುವ ಉಪೇಂದ್ರ ಹೌದು ಮತ್ತು ಇಲ್ಲ ಎಂದು ಎರಡು ಆಯ್ಕೆಗಳನ್ನ ನೀಡಿದ್ದಾರೆ. ಈ ಪೋಲ್ ಗೆ ಸುಮಾರು 11 ಸಾವಿರಕ್ಕಿಂತ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.
''ಬರಿ ರೀಮೇಕ್ ಮಾಡ್ತೀರಾ ಯಾಕೆ'' ಎಂದಿದ್ದಕ್ಕೆ ಉಪೇಂದ್ರ ಹೇಳಿದ್ದೇನು ಗೊತ್ತಾ.?
ಸ್ಪರ್ಧೆ ಮಾಡಲಿ ಎಂದ ಬೆಂಬಲಿಗರು
ಲೋಕಸಭೆ ಚುನಾವಣೆಯಲ್ಲಿ ''ಉತ್ತಮ ಪ್ರಜಾಕೀಯ ಪಾರ್ಟಿ'' ಸ್ಪರ್ಧೆ ಮಾಡಲಿ ಎಂದೇ ಹೆಚ್ಚು ಜನರು ಹೇಳ್ತಿದ್ದಾರೆ. ಶೇಕಡಾ 75 ರಷ್ಟು ಜನರು ಸ್ಪರ್ಧಿಸಲಿ ಎಂದು ಸಪೋರ್ಟ್ ಮಾಡ್ತಿದ್ರೆ, ಶೇಕಡಾ 25 ರಷ್ಟು ಜನ ಬೇಡ ಎಂದು ವಿರೋಧಿಸುತ್ತಿದ್ದಾರೆ.
ನಂಬಿದವರೇ ಉಪೇಂದ್ರಗೆ ಮೋಸ ಮಾಡಿದ್ರಂತೆ.! ಯಾರದು.?
ವಿಧಾನಸಭೆ ಚುನಾವಣೆ ಮಿಸ್ ಆಗಿತ್ತು
ಕಳೆದ ವರ್ಷದಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಅವರ ಪಕ್ಷ (ಆಗ 'ಕೆಪಿಜೆಪಿ' ಪಕ್ಷದಲ್ಲಿದ್ದರು) ಸ್ಪರ್ಧೆ ಮಾಡುವ ತಯಾರಿ ನಡೆಸಿತ್ತು. ಕೊನೆಯ ಕ್ಷಣದಲ್ಲಿ ಪಕ್ಷದಲ್ಲಿ ಉಂಟಾದ ಆಂತಕರಿಕ ಕಲಹದಿಂದ ಉಪೇಂದ್ರ ಪಕ್ಷ ಬಿಟ್ಟು ಹೊರನಡೆದರು. ಹಾಗಾಗಿ, ವಿಧಾನಸಭೆ ಚುನಾವಣೆಯಲ್ಲಿ ಉಪ್ಪಿ ಅಖಾಡಕ್ಕೆ ಇಳಿಯಲಿಲ್ಲ.
'ಪ್ರಜಾಕೀಯ'ದತ್ತ ಹೆಜ್ಜೆ ಹಾಕಿದ ಪಾಕಿಸ್ತಾನಕ್ಕೆ ಉಪ್ಪಿ ಪ್ರಚಾರ: ಜನರಿಂದ ಟೀಕೆ
ಉಪೇಂದ್ರ ಕ್ಷೇತ್ರ ಯಾವುದು?
ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧೆ ಮಾಡಿದ್ರೆ, ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಈ ಬಗ್ಗೆ ಎಲ್ಲಿಯೂ ಉಪೇಂದ್ರ ಅವರು ಮಾತನಾಡಿಲ್ಲ. ಸ್ಪರ್ಧೆ ಮಾಡ್ತಾರಾ ಅನ್ನೋದೇ ಅನುಮಾನವಾಗಿ ಉಳಿದಿದೆ.
ರಿಯಲ್ ಸ್ಟಾರ್ ಉಪ್ಪಿಯ ಕಾಲೆಳೆಯುತ್ತಿರುವ ಅಭಿಮಾನಿಗಳು