Don't Miss!
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಡ್ಯ ರಮೇಶ್ ಮನೆಗೆ ಆಗಮಿಸಿದ ವಿಶೇಷ ಅತಿಥಿ
ಚಿತ್ರೀಕರಣ, ನಾಟಕ, ರಂಗ ಚಟುವಟಿಕೆ, ನಾಟಕ ತರಬೇತಿ ಹೀಗೆ ಸದಾ ಚಟುವಟಿಕೆಯಿಂದಿರುತ್ತಿದ್ದ ನಟ ಮಂಡ್ಯ ರಮೇಶ್ ಕೊರೊನಾ ಲಾಕ್ಡೌನ್ ಕಾರಣದಿಂದ ಮನೆಯಲ್ಲಿದ್ದಾರೆ.
Recommended Video
ಮನೆಯಲ್ಲಿ ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿರುವ ಮಂಡ್ಯ ರಮೇಶ್ ಅವರ ನಿವಾಸಕ್ಕೆ ವಿಶೇಷ ಅತಿಥಿ ಆಗಿಮಿಸಿ ಮನೆಯವರಿಗೆಲ್ಲ ಆಶ್ಚರ್ಯ, ಭಯ ತಂದಿದ್ದಾರೆ!
ಮೈಸೂರಿನ ದಟ್ಟಗಹಳ್ಳಿಯಲ್ಲಿ ಮಂಡ್ಯ ರಮೇಶ್ ನಿವಾಸವಿದ್ದು ಆ ಮನೆಗೆ ಇಂದು ಪುಟ್ಟ ಹಾವೊಂದು ಬಂದಿದೆ. ಹಾವನ್ನು ಕಂಡ ಮಂಡ್ಯ ರಮೇಶ್ ಹಾಗೂ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಉರಗ ರಕ್ಷಕರನ್ನು ಮನೆಗೆ ಕರೆಸಿದ್ದಾರೆ.
ಮಂಡ್ಯ ರಮೇಶ್ ಮನೆಗೆ ಬಂದ ಉರಗ ರಕ್ಷಕ ಸೂರ್ಯಕೀರ್ತಿ ಹಾವಿನ ಮರಿಯನ್ನು ಹಿಡಿದುಕೊಂಡಿದ್ದಾರೆ. ಅದೊಂದು ವಿಷರಹಿತ ತೋಳದ ಹಾವೆಂದು (ಕಾಮನ್ ವುಲ್ ಸ್ನೇಕ್) ಕುಟುಂಬದವರಿಗೆ ಮಾಹಿತಿ ನೀಡಿದ್ದಲ್ಲದೆ. ಮಂಡ್ಯ ರಮೇಶ್ ಸಹ ಹಾವನ್ನು ಹಿಡಿದುಕೊಳ್ಳುವಂತೆ ಮಾಡಿ ಅವರಲ್ಲೂ ಧೈರ್ಯ ತುಂಬಿದ್ದಾರೆ.
ಹಾವು ಹಿಡಿಯಲು ಮೊದಲಿಗೆ ಭಯಪಟ್ಟ ರಮೇಶ್, ಐದು ಸಾವಿರ ಪ್ರೇಕ್ಷಕರ ಮುಂದೆ ಪ್ರದರ್ಶನ ಕೊಡಬಲ್ಲೆ ಆದರೆ ಹಾವು ಎಂದರೆ ಬಹಳ ಭಯ ಆಗುವುದೇ ಇಲ್ಲ ಎಂದಿದ್ದಾರೆ. ಆದರೆ ಹಾವಿನ ಬಗ್ಗೆ ಮಾಹಿತಿ ನೀಡಿದ ಸೂರ್ಯ ಕೀರ್ತಿ ಮಂಡ್ಯ ರಮೇಶ್ ಕೈಗೆ ಹಾವನ್ನು ಕೊಟ್ಟಿದ್ದಾರೆ. ಕೊನೆಗೆ ಅಂತೂ-ಇಂತೂ ತುಸು ಧೈರ್ಯ ಮಾಡಿ ಸ್ವಲ್ಪ ಹೊತ್ತು ಹಾವು ಹಿಡಿದುಕೊಂಡಿದ್ದಾರೆ ಮಂಡ್ಯ ರಮೇಶ್.