ಬಾಗಲಕೋಟೆಯಲ್ಲಿ ಡಿ ಫ್ಯಾನ್ಸ್ ಕಡೆಯಿಂದ ಗೋ ಪೂಜೆ, ಅನ್ನ ಸಂತರ್ಪಣೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಜಾರು ನಮ್ದೆ ಇವತ್ತು ಎಂದು ಹಾಡು ಹೇಳುತ್ತ ಚಿತ್ರಮಂದಿರಕ್ಕೆ ಬಂದಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ಯಜಮಾನ' ರಾಜ್ಯಾದಂತ್ಯ ಬಿಡುಗಡೆಯಾಗಿದೆ.
ಅಭಿಮಾನಿಗಳು ತಮ್ಮ ಪ್ರೀತಿಯ ಡಿ ಬಾಸ್ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಬೆಳಿಗ್ಗೆಯಿಂದಲೇ ಥಿಯೇಟರ್ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಬಾಗಲಕೋಟೆಯ ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ ಕೂಡ ಬಹಳ ಜೋರಾಗಿದೆ. ಪಟಾಕಿ ಹೊಡೆದು, ಸಿಹಿ ಹಂಚಿ ಅಬಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಬಾಗಲಕೋಟೆ ನಗರದ ವಾಸವಿ ಚಿತ್ರಮಂದಿರದ ಮುಂದೆ ದರ್ಶನ್ ಪರ ಘೋಷಣೆ ಕೂಗಿ ಚಿತ್ರಕ್ಕೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಚಿತ್ರಮಂದಿರದ ಮುಂದೆ ಗೋಮಾತೆ ಪೂಜೆ ಮಾಡಿ, ಅನ್ನ ಸಂತರ್ಪಣೆ ಮಾಡಿ ತಮ್ಮ ಅಭಿಮಾನ ತೋರಿದ್ದಾರೆ.
ಸಿನಿಮಾದಲ್ಲಿ ಶಿವನಂದಿ ಬ್ರಾಂಡ್ ಎಣ್ಣೆಯನ್ನು ದರ್ಶನ್ ತಯಾರು ಮಾಡುತ್ತಿರುತ್ತಾರೆ. ಹಸುಗಳಿಗೂ ಅವರ ಪಾತ್ರಕ್ಕೂ ಸಂಬಂಧ ಇದೆ. ಇದೇ ಕಾರಣಕ್ಕೆ ಗೋ ಪೂಜೆ ಮಾಡಿದ್ದಾರೆ ಅಭಿಮಾನಿಗಳು.
More from Filmibeat
English summary
Challenging star Darshan and Rashmika Mandanna's most expected movie 'Yajamana' craze in bagalkot. The movie is a mass and family entertainer.


Click it and Unblock the Notifications











