Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬರೆದಿಟ್ಟುಕೊಳ್ಳಿ, ದರ್ಶನ್ 50ನೇ ಚಿತ್ರ ಪಕ್ಕಾ ಆಯ್ತು
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಯಾವುದು ಎಂಬ ಗೊಂದಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಯಜಮಾನ ಮತ್ತು ಕುರುಕ್ಷೇತ್ರ ಚಿತ್ರಗಳ ನಡುವಿನ ಕನ್ ಫ್ಯೂಶನ್ ಗೆ ಉತ್ತರ ಸಿಕ್ಕಿದೆ.
ಡಿ ಬಾಸ್ ದರ್ಶನ್ 50ನೇ ಸಿನಿಮಾ ವಿಶೇಷವಾಗಿರಬೇಕು. ಈ ಚಿತ್ರ ಮೈಲಿಗಲ್ಲಾಗಬೇಕು ಎಂಬ ಕಾರಣಕ್ಕೆ ಮೊದಲೇ ನಿರ್ಧರಿಸಿದ್ದ ಚಿತ್ರಗಲನ್ನ ಪಕ್ಕಕ್ಕಿಟ್ಟು ಕುರುಕ್ಷೇತ್ರಕ್ಕೆ ಚಾಲನೆ ನೀಡಿದ್ದರು ದರ್ಶನ್. ನಿರೀಕ್ಷೆಯಂತೆ ಈ ಸಿನಿಮಾನೇ 50ನೇಯದ್ದು ಆಗಲಿದೆ ಎಂಬ ಲೆಕ್ಕಾಚಾರ ನಡೆದಿತ್ತು.
ದರ್ಶನ್ 50ನೇ ಚಿತ್ರದ ಬಗ್ಗೆ ನಿಲ್ಲದ ಚರ್ಚೆ: ಗೊಂದಲವೇ ಹೆಚ್ಚು.!
ಆದ್ರೆ, ಕುರುಕ್ಷೇತ್ರ ಸಿನಿಮಾದ ಪ್ಲಾನಿಂಗ್ ಸ್ವಲ್ಪ ಬದಲಾಯ್ತು. ಅದರ ಪರಿಣಾಮ ಯಜಮಾನ ಚಿತ್ರ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗೋಯ್ತು. ಹಾಗಿದ್ದರೂ ಎಲ್ಲೋ ಒಂದು ಕಡೆ ಕುರುಕ್ಷೇತ್ರವೇ ಮೊದಲು ಬರಬಹುದು ಎಂಬ ಆಸೆ ಅನೇಕರಲ್ಲಿತ್ತು. ಕೊನೆಗೂ ಭಾಗ್ಯ ಇನ್ನಷ್ಟು ದೂರವಾಗಿ ಉಳಿದಿದೆ. ಮುಂದೆ ಓದಿ....
ಶಿವರಾತ್ರಿಗೆ ಯಜಮಾನ
ದರ್ಶನ್ ಅವರ 50ನೇ ಸಿನಿಮಾ ಯಾವುದು ಎಂಬ ಲೆಕ್ಕಾಚಾರದ ನಡೆವೆಯೇ ಯಜಮಾನ ಸಿನಿಮಾ ಬಿಡುಗಡೆ ದಿನಾಂಕವನ್ನ ಘೋಷಿಸಿದೆ. ಫೆಬ್ರವರಿ 10 ರಂದು ಟ್ರೈಲರ್ ರಿಲೀಸ್ ಮಾಡಿದ್ದ ಯಜಮಾನ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನ ಪ್ರಕಟಿಸಿದೆ. ಹೌದು, ಮಾರ್ಚ್ 1 ರಂದು ಯಜಮಾನ ತೆರೆಗೆ ಬರ್ತಿದ್ದಾನೆ
'ಯಜಮಾನ' ಟ್ರೇಲರ್ : ಶಿವನಂದಿಯಾಗಿ ಅಬ್ಬರಿಸಿದ ಡಿ ಬಾಸ್
ಏಪ್ರಿಲ್ ಮೊದಲನೇ ವಾರ
ಶಿವರಾತ್ರಿ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಶಿವನಂದಿ ಉಡುಗೊರೆಯಾಗಲಿದ್ದಾನೆ. ಯುಗಾದಿ ಹಬ್ಬಕ್ಕೆ ಕುರುಕ್ಷೇತ್ರವನ್ನ ತರಲು ನಿರ್ಮಾಪಕ ಮುನಿರತ್ನ ನಿರ್ಧರಿಸಿದ್ದಾರೆ. ಈಗಾಗಲೇ ಮುನಿರತ್ನ ಹೇಳಿರುವ ಪ್ರಕಾರ ಕುರುಕ್ಷೇತ್ರ ಏಪ್ರಿಲ್ 5 ರಂದು ಚಿತ್ರಮಂದಿರಕ್ಕೆ ಆಗಮನವಾಗಲಿದೆ. ಅದು ಯುಗಾದಿ ಹಬ್ಬದ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲಿದೆ.
ದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ ಹರಿಕೃಷ್ಣ
ಕುರುಕ್ಷೇತ್ರ ಮುಂದಕ್ಕೆ ಹೋಗಬಹುದು.!
ಎಲ್ಲ ಅಂದುಕೊಂಡಂತೆ ಆಗಿದ್ದರೇ ಕುರುಕ್ಷೇತ್ರ ಸಿನಿಮಾ ಇಷ್ಟೋತ್ತಿಗಾಗಲೇ ಬರಬೇಕಿತ್ತು. ಬಹುಭಾಷೆಯಲ್ಲಿ ರಿಲೀಸ್, ಡಬ್ಬಿಂಗ್, 3ಡಿ ಹೀಗೆ ಪೋಸ್ಟ್ ಪ್ರೊಡಕ್ಷನ್ ಕೆಲಸದಿಂದ ಬಿಡುಗಡೆ ವಿಳಂಬವಾಗಿದೆ. ಬಹುಶಃ, ಏಪ್ರಿಲ್ 5ಕ್ಕೆ ಬರಬೇಕು ಎನ್ನುವುದು ನಿರ್ಮಾಪಕರ ಆಸೆಯಾಗಿದೆ. ಆದ್ರೆ, ನಿರೀಕ್ಷೆಯಂತೆ ಔಟ್ ಪುಟ್ ಬಂದಿಲ್ಲ ಅಂದ್ರೆ ಮತ್ತಷ್ಟು ದಿನ ಮುಂದಕ್ಕೆ ಹೋಗುವುದಕ್ಕೆ ನಿರ್ಮಾಪಕರು ಹಿಂದೇಟು ಹಾಕುವುದಿಲ್ಲ. ಹಾಗಾಗಿ, ಅಧಿಕೃತವಾಗಿ ಹೇಳುವವರೆಗೂ ಕುರುಕ್ಷೇತ್ರ ದಿನಾಂಕ ಪಕ್ಕಾ ಅಲ್ಲ.
6 ನಿಮಿಷದಲ್ಲಿ ಹಳೆ ದಾಖಲೆ ಉಡೀಸ್ ಮಾಡಿದ ಯಜಮಾನ ಟೈಟಲ್ ಹಾಡು.!
ಯಜಮಾನ 50ನೇ ಸಿನಿಮಾ ಒಳ್ಳೆಯದು
ಹಾಗ್ನೋಡಿದ್ರೆ, ಕುರುಕ್ಷೇತ್ರ ವಿಳಂಬದಿಂದ ದರ್ಶನ್ 50ನೇ ಚಿತ್ರ ಎಂಬ ಹೆಗ್ಗಳಿಕೆ ಯಜಮಾನ ಪಾತ್ರವಾಗಲಿದೆ. ಸದ್ಯ ಹಾಡುಗಳು, ಟ್ರೈಲರ್ ಮೂಲಕ ಅತಿಯಾದ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ದರ್ಶನ್ ವೃತ್ತಿ ಜೀವನದಲ್ಲಿ ಮತ್ತೆ ಗೆಲುಗು ತಂದುಕೊಡಲಿದೆ ಎಂಬ ಮಾತಿದೆ.