Don't Miss!
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- News Zero Shadow Day: ನಾಳೆ ಬುಧವಾರ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ; ಸಮಯ, ವಿವರ
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು ಈ ಇಬ್ಬರು ನಟರು
Recommended Video
'ಪೈಲ್ವಾನ್' ಬಿಡುಗಡೆಯಾಗಿ 50 ದಿನಗಳನ್ನು ಪೂರೈಸಿದೆ. ಈ ಸಿನಿಮಾ ಯಶಸ್ವಿಯಾಗಲು ಸುದೀಪ್ ಜೊತೆಗೆ ಕನ್ನಡದ ಇಬ್ಬರು ನಟರೂ ಸಹ ಕಾರಣರಾಗಿದ್ದಾರೆ. ಈ ನಟರಿಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಧನ್ಯವಾದ ಹೇಳಿದ್ದಾರೆ.
ಪೈಲ್ವಾನ್ ಚಿತ್ರದ ಟಿಕೆಟ್ ಬೆಲೆಯಲ್ಲಿ ಆಫರ್ ನೀಡಿದ ನಿರ್ಮಾಪಕ
ನಟ ಯಶ್ ಹಾಗೂ ನಿಖಿಲ್ ಕುಮಾರ್ 'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು. ಬಿಡುಗಡೆ ಸಮಯದಲ್ಲಿ ಹಣಕಾಸಿನ ಸಮಸ್ಯೆ ಬಂದಾಗ ನಿರ್ದೇಶಕ ಕೃಷ್ಣ ಜೊತೆಗೆ ಯಶ್ ಹಾಗೂ ನಿಖಿಲ್ ಕುಮಾರ್ ನಿಂತರು. ಆ ಸಮಯದಲ್ಲಿ ಈ ಇಬ್ಬರು ನಟರು ಹಣಕಾಸಿನ ಸಹಾಯ ಮಾಡಿದ್ದು, ಸಿನಿಮಾ ಬಿಡುಗಡೆ ಸರಿಯಾಗಿ ಆಯ್ತು.
ಒಬ್ಬ ಟೆಕ್ನಿಷಿಯನ್ ಅನ್ನು ನಂಬಿ ಸಿನಿಮಾಗೆ ಹಣ ಸಹಾಯ ಮಾಡಿದ ಯಶ್ ಹಾಗೂ ನಿಖಿಲ್ ಕುಮಾರ್ ರಿಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಥ್ಯಾಂಕ್ಯು ಹೇಳಿದ್ದಾರೆ. ಒಬ್ಬ ನಟನ ಸಿನಿಮಾಗೆ ಇನ್ನೊಬ್ಬ ನಟರು ಈ ರೀತಿ ಸಹಾಯ ಮಾಡುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ.
ಅಂದಹಾಗೆ, ಈ ಹಿಂದೆ ನಟ ಯಶ್ ರಿಗೆ ಕೃಷ್ಣ 'ಗಜ ಕೇಸರಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಕ್ಯಾಮರಾ ಮ್ಯಾನ್ ಆಗಿದ್ದ ಕೃಷ್ಣ ಇದೇ ಸಿನಿಮಾದಿಂದ ಡೈರೆಕ್ಟರ್ ಆದರು.
50 ದಿನಗಳನ್ನು ಪೂರೈಸಿ ಸೆಂಚುರಿಯತ್ತ ಮುನ್ನುಗ್ಗುತ್ತಿದೆ 'ಪೈಲ್ವಾನ್'
ಇನ್ನು ಕೃಷ್ಣ ತಮ್ಮ ಮುಂದಿನ ಸಿನಿಮಾವನ್ನು ನಿಖಿಲ್ ಕುಮಾರ್ ಜೊತೆಗೆ ಮಾಡುತ್ತಿದ್ದಾರೆ. ಈ ಸಿನಿಮಾ ನಿಖಿಲ್ ನಟನೆಯ ನಾಲ್ಕನೇ ಸಿನಿಮಾವಾಗಿದೆ.