twitter
    For Quick Alerts
    ALLOW NOTIFICATIONS  
    For Daily Alerts

    'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು ಈ ಇಬ್ಬರು ನಟರು

    |

    Recommended Video

    Yash and Nikhil Kumaraswamy helped the Pailwaan team financially | Oneindia Kannada

    'ಪೈಲ್ವಾನ್' ಬಿಡುಗಡೆಯಾಗಿ 50 ದಿನಗಳನ್ನು ಪೂರೈಸಿದೆ. ಈ ಸಿನಿಮಾ ಯಶಸ್ವಿಯಾಗಲು ಸುದೀಪ್ ಜೊತೆಗೆ ಕನ್ನಡದ ಇಬ್ಬರು ನಟರೂ ಸಹ ಕಾರಣರಾಗಿದ್ದಾರೆ. ಈ ನಟರಿಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಧನ್ಯವಾದ ಹೇಳಿದ್ದಾರೆ.

    ಪೈಲ್ವಾನ್ ಚಿತ್ರದ ಟಿಕೆಟ್ ಬೆಲೆಯಲ್ಲಿ ಆಫರ್ ನೀಡಿದ ನಿರ್ಮಾಪಕಪೈಲ್ವಾನ್ ಚಿತ್ರದ ಟಿಕೆಟ್ ಬೆಲೆಯಲ್ಲಿ ಆಫರ್ ನೀಡಿದ ನಿರ್ಮಾಪಕ

    ನಟ ಯಶ್ ಹಾಗೂ ನಿಖಿಲ್ ಕುಮಾರ್ 'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು. ಬಿಡುಗಡೆ ಸಮಯದಲ್ಲಿ ಹಣಕಾಸಿನ ಸಮಸ್ಯೆ ಬಂದಾಗ ನಿರ್ದೇಶಕ ಕೃಷ್ಣ ಜೊತೆಗೆ ಯಶ್ ಹಾಗೂ ನಿಖಿಲ್ ಕುಮಾರ್ ನಿಂತರು. ಆ ಸಮಯದಲ್ಲಿ ಈ ಇಬ್ಬರು ನಟರು ಹಣಕಾಸಿನ ಸಹಾಯ ಮಾಡಿದ್ದು, ಸಿನಿಮಾ ಬಿಡುಗಡೆ ಸರಿಯಾಗಿ ಆಯ್ತು.

    Yash And Nikhil Kumar Did Financial Help For Pailwaan Movie

    ಒಬ್ಬ ಟೆಕ್ನಿಷಿಯನ್ ಅನ್ನು ನಂಬಿ ಸಿನಿಮಾಗೆ ಹಣ ಸಹಾಯ ಮಾಡಿದ ಯಶ್ ಹಾಗೂ ನಿಖಿಲ್ ಕುಮಾರ್ ರಿಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಥ್ಯಾಂಕ್ಯು ಹೇಳಿದ್ದಾರೆ. ಒಬ್ಬ ನಟನ ಸಿನಿಮಾಗೆ ಇನ್ನೊಬ್ಬ ನಟರು ಈ ರೀತಿ ಸಹಾಯ ಮಾಡುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ.

    Yash And Nikhil Kumar Did Financial Help For Pailwaan Movie

    ಅಂದಹಾಗೆ, ಈ ಹಿಂದೆ ನಟ ಯಶ್ ರಿಗೆ ಕೃಷ್ಣ 'ಗಜ ಕೇಸರಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಕ್ಯಾಮರಾ ಮ್ಯಾನ್ ಆಗಿದ್ದ ಕೃಷ್ಣ ಇದೇ ಸಿನಿಮಾದಿಂದ ಡೈರೆಕ್ಟರ್ ಆದರು.

    50 ದಿನಗಳನ್ನು ಪೂರೈಸಿ ಸೆಂಚುರಿಯತ್ತ ಮುನ್ನುಗ್ಗುತ್ತಿದೆ 'ಪೈಲ್ವಾನ್'50 ದಿನಗಳನ್ನು ಪೂರೈಸಿ ಸೆಂಚುರಿಯತ್ತ ಮುನ್ನುಗ್ಗುತ್ತಿದೆ 'ಪೈಲ್ವಾನ್'

    ಇನ್ನು ಕೃಷ್ಣ ತಮ್ಮ ಮುಂದಿನ ಸಿನಿಮಾವನ್ನು ನಿಖಿಲ್ ಕುಮಾರ್ ಜೊತೆಗೆ ಮಾಡುತ್ತಿದ್ದಾರೆ. ಈ ಸಿನಿಮಾ ನಿಖಿಲ್ ನಟನೆಯ ನಾಲ್ಕನೇ ಸಿನಿಮಾವಾಗಿದೆ.

    English summary
    Actor Yash and Nikhil Kumar did financial help for 'Pailwaan' movie.
    Saturday, November 2, 2019, 11:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X