Don't Miss!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿಯಾದ ಯಶ್ - ರಾಧಿಕಾ ಪಂಡಿತ್
ಇತ್ತೀಚಿಗೆ ನಟ ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಬರ್ತಾರೆ ಎಂಬ ಮಾತುಗಳು ಆಗಾಗ ಸುದ್ದಿಯಾಗ್ತಿರುತ್ತೆ. ಆದರೆ, ಇದಕ್ಕೆಲ್ಲಾ ಯಶ್ ಯಾವತ್ತೂ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಸದ್ಯ ಭಾರತೀಯ ಸಿನಿರಂಗದಲ್ಲಿ 'ಕೆಜಿಎಫ್ 2' ಹೊಸ ಚಾಪನ್ನೇ ಮೂಡಿಸಿ ಮುನ್ನುಗ್ಗುತ್ತಿದೆ. ನಟ ಯಶ್ ಕೂಡ ನಟನೆಯಲ್ಲಿ ಹೆಚ್ಚು ಆಸಕ್ತಿ ತೋರಿದ್ದು, ಇನ್ನು ಭಿನ್ನ ವಿಭಿನ್ನ ಚಿತ್ರಗಳನ್ನು ಮಾಡಲು ಉತ್ಸುಕರಾಗಿದ್ದಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಯಶ್ ರಾಜಕೀಯಕ್ಕೆ ಬರಬಹುದು ಎಂಬ ಚರ್ಚೆಗಳು ಆಗ್ತಾನೆ ಇವೆ. ಏಕೆಂದರೆ ಯಶ್ ಕೆಲ ವರ್ಷಗಳಿಂದ ಜನಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಹೀಗಾಗಿ ಯಶ್ಗೆ ಜನಪರ ಕಾಳಜಿ ಇದ್ದು, ರಾಜಕೀಯಕ್ಕೆ ಬಂದರೆ ಜನರಿಗಾಗಿ ಕೆಲಸ ಮಾಡುತ್ತಾರೆ ಎಂಬ ಬಿಸಿ ಚರ್ಚೆ ಶುರುವಾಗಿದೆ.
ಈಗಾಗಲೇ ಯಶ್ ಕೂಡ ಈ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಉತ್ತರಿಸಿದ್ದಾರೆ. ನನ್ನ ಗುರಿಯೇ ಬೇರೆ ಇದೆ. ಮಾಡಬೇಕಾದ ಕೆಲಸಗಳು ನೂರಾರಿದೆ. ನಾನು ಇರಬೇಕಾದ ಸ್ಥಾನವೇ ಬೇರೆ ಇದೆ ಎಂಬ ಮಾತುಗಳನ್ನ ಹೇಳಿದ್ದರು. ಸದ್ಯ ಈಗ ಆ ಮಾತುಗಳೇ ಯಶ್ ರಾಜಕೀಯಕ್ಕೆ ಏನಾದರೂ ಬರಬಹುದು ಎಂಬ ಗುಸುಗುಸುಗೆ ಕಾರಣವಾಗಿದೆ.
ತಮಿಳಿನಲ್ಲೂ ಸೆಂಚೂರಿ ಬಾರಿಸಿದ 'KGF 2': ತಮಿಳುನಾಡಿನಲ್ಲಿ ಕನ್ನಡ ಕಹಳೆ
ಸದ್ಯ ಯಶ್ ಹಾಗೂ ರಾಧಿಕಾ ಗೋವಾ ಪ್ರವಾಸದಲ್ಲಿದ್ದು, ಪಣಜಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿ ಆತ್ಮೀಯ ಮಾತುಕತೆಯನ್ನು ನಡೆಸಿದ್ದಾರೆ. ಈ ಹಿಂದೆಯೂ ಕೂಡ ಯಶ್ ಹಲವು ರಾಜಕೀಯ ವ್ಯಕ್ತಿಗಳ ಜೊತೆ ಕಾಣಿಸಿಕೊಂಡಿದ್ದಾರೆ. ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಲ್ಲಿ ನಿಂತಾಗ ದರ್ಶನ್ ಹಾಗೂ ಯಶ್ ಇಬ್ಬರೂ ಸೇರಿ ಚುನಾವಣಾ ಪ್ರಚಾರ ನಡೆಸಿದ್ದರು. ಹೀಗಾಗಿ ಆಗಾಗ ರಾಜಕೀಯ ನಾಯಕರುಗಳ ಭೇಟಿಯಾಗುವುದರಿಂದ ಯಶ್ ಇಂದಲ್ಲದಿದ್ದರೂ ಮುಂದಾದರೂ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇನ್ನು ಯಶ್ ಹಾಗೂ ರಾಧಿಕಾ ಪಂಡಿತ್ ಭೇಟಿ ಮಾಡಿದ ಪೋಟೊಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರಮೋದ್ ಸಾವಂತ್ ಹರ್ಷ ವ್ಯಕ್ತಪಡಿಸಿದ್ದಾರೆ. ಇಂದು ಕೆಜಿಎಫ್ ಸೂಪರ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿದ್ದು, ಖುಷಿ ತಂದಿದೆ. ಯಶ್ ಹಾಗೂ ಪತ್ನಿ ರಾಧಿಕಾ ಹಾಗೂ ಅವರ ಚಿತ್ರತಂಡದ ಜೊತೆ ಇಂದು ಪಣಜಿಯಲ್ಲಿರುವ ತಮ್ಮ ಕಚೇರಿಯಲ್ಲಿ ಮಾತುಕತೆ ನಡೆಸಿದ್ದು, ಸಂತೋಷ ತಂದಿದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
twitter embed :
It was a pleasure to meet the KGF superstar, @TheNameIsYash along with his wife Radhika and team at Panaji. pic.twitter.com/oyuR0NRwub
— Dr. Pramod Sawant (@DrPramodPSawant) May 4, 2022
ಸದ್ಯ ದಿಢೀರ್ ಅಂತ ರಾಜಕಿಯಕ್ಕೆ ಬರದಿದ್ದರೂ ಸಹ ಮುಂದೊಂದು ದಿನ ರಾಜಕೀಯಕ್ಕೆ ಬರುವ ಎಲ್ಲಾ ಮುನ್ಸೂಚನೆ ಇದೆ ಅಂತ ಹೇಳಲಾಗ್ತಿದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿರಬಹುದು ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡ್ತಿದೆ. ಒಂದು ವೇಳೆ ಆ ರೀತಿ ಆದರೆ ಯಶ್ ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ಸದ್ಯಕ್ಕೆ 'ಕೆಜಿಎಫ್' ಸಕ್ಸಸ್ನಲ್ಲಿರುವ ಯಶ್ ದಂಪತಿ ರಿಲಾಕ್ಸ್ ಮೂಡ್ನಲ್ಲಿದ್ದು, ಗೋವಾದಲ್ಲಿ ಕಾಲ ಕಳೆಯುತ್ತಿದ್ದಾರೆ.