Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಗೆ ಬಂದ ರಾಜಕುಮಾರಿ : ಇಂದಿನ ಕಾರ್ಯಕ್ರಮ ರದ್ದುಗೊಳಿಸಿದ ಯಶ್
Recommended Video
ಯಶ್ ಹಾಗೂ ರಾಧಿಕಾ ಪಂಡಿತ್ ಜೀವನದ ಮಹತ್ವದ ದಿನ. ಇಂದು ಸ್ಯಾಂಡಲ್ ವುಡ್ ನ ಈ ತಾರಾ ಜೋಡಿ ಈಗ ಅಪ್ಪ ಅಮ್ಮನಾಗಿದ್ದಾರೆ. ನಟಿ ರಾಧಿಕ ಪಂಡಿತ್ 6.20ರ ಸುಮಾರಿಗೆ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಯಶ್ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಇಂದು ಯಶ್-ರಾಧಿಕಾ ಪಂಡಿತ್ ದಂಪತಿಗೆ ಮರೆಯಲಾಗದ ದಿನವಾಗಿದೆ. ಆದ್ದರಿಂದಲೇ ಯಶ್ ತಮ್ಮ ಮಡದಿ ಮತ್ತು ಮಗು ಜೊತೆ ಇಂದು ಪೂರ್ತಿ ದಿನ ಇರಲಿದ್ದಾರೆ. ಹಾಗಾಗಿ ಯಶ್ ಇಂದಿನ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ಯಶ್ ಆಸೆ ಈಡೇರಿತು : ಸಂತಸ ಹಂಚಿಕೊಂಡ ರಾಕಿಂಗ್ ಕುಟುಂಬ
ಇಂದು ಅವರು ನಾಗರಬಾವಿಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ರೂಪ್ ಸಂಗಮ್ ದಿ ಫ್ಯಾಮಿಲಿ ಸ್ಟೋರ್ಸ್ ನ ಉದ್ಘಾಟನೆ ಮಾಡಲು ಹೋಗಬೇಕಿತ್ತು. ಆದರೆ, ಅವರು ಅದರಲ್ಲಿ ಪಾಲ್ಗೊಳಲಿಲ್ಲ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಯಶ್ ಹೀಗೆ ಬರೆದುಕೊಂಡಿದ್ದಾರೆ.
''ಇಂದು ನಾಗರಬಾವಿಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ "ರೂಪ್ ಸಂಗಮ್" ದಿ ಫ್ಯಾಮಿಲಿ ಸ್ಟೋರ್ಸ್ ನ ಉದ್ಘಾಟನೆ ಮಾಡಲು ಪ್ರೀತಿಯಿಂದ ಆಗಮಿಸುತ್ತೇನೆಂದು ತಿಳಿಸಿದ್ದೆ. ಆದರೆ, ಇಂದು ವೈಯಕ್ತಿಕ ಕಾರಣಗಳಿಂದ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಕ್ಷಮೆಯಿರಲಿ. ರೂಪ್ ಸಂಗಮ್ ನ ಮಾಲೀಕರಿಗೆ ನನ್ನ ತುಂಬು ಹೃದಯದ ಶುಭಾಶಯಗಳನ್ನು ತಿಳಿಸುತ್ತೇನೆ.'' ಎಂದು ಯಶ್ ಟ್ವೀಟ್ ಮಾಡಿದ್ದಾರೆ.
ಇಂದು ನಾಗರಬಾವಿಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ "ರೂಪ್ ಸಂಗಮ್" ದಿ ಫ್ಯಾಮಿಲಿ ಸ್ಟೋರ್ಸ್ ನ ಉದ್ಘಾಟನೆ ಮಾಡಲು ಪ್ರೀತಿಯಿಂದ ಆಗಮಿಸುತ್ತೇನೆಂದು ತಿಳಿಸಿದ್ದೆ. ಆದರೆ, ಇಂದು ವೈಯಕ್ತಿಕ ಕಾರಣಗಳಿಂದ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲಾ ಕ್ಷಮೆಯಿರಲಿ.
— Yash (@NimmaYash) December 2, 2018
ರೂಪ್ ಸಂಗಮ್ ನ ಮಾಲೀಕರಿಗೆ ನನ್ನ ತುಂಬು ಹೃದಯದ ಶುಭಾಶಯಗಳನ್ನು ತಿಳಿಸುತ್ತೇನೆ.
ಪುಟ್ಟ ಕಂದನನ್ನು ಪ್ರೀತಿಯಿಂದ ಬರಮಾಡಿಕೊಂಡ ಸ್ಯಾಂಡಲ್ ವುಡ್
ಸದ್ಯ ,ಯಶ್ ತಮ್ಮ 'ಕೆಜಿಫ್' ಸಿನಿಮಾದ ಪ್ರಚಾರದಲ್ಲಿ ಸಹ ಬ್ಯುಸಿ ಇದ್ದಾರೆ. ಆ ಸಿನಿಮಾದ ಜೊತೆಗೆ ಈಗ ಮನೆಗೆ ಮಹಾಲಕ್ಷ್ಮೀ ಆಗಮನದಿಂದ ಅವರಿಗೆ ಮತ್ತಷ್ಟು ಸಂತಸ ತಂದಿದೆ.