Don't Miss!
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- News Zero Shadow Day: ನಾಳೆ ಬುಧವಾರ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ; ಸಮಯ, ವಿವರ
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆಲ್ಫಿಗಾಗಿ ಯಶ್ ಮೇಲೆ ಮುಗಿಬಿದ್ದ ತೆಲುಗು ಮಂದಿ
Recommended Video
ಡಿಸೆಂಬರ್ 9 ರಂದು ಹೈದರಾಬಾದ್ ನಲ್ಲಿ ಕೆಜಿಎಫ್ ತೆಲುಗು ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ಸಂಜೆ 7 ಗಂಟೆಗೆ ಆರಂಭವಾದ ಈ ಶೋಗೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. ಇದರಲ್ಲಿ ಕರ್ನಾಟಕದ ಮೂಲದ ಹೈದರಾಬಾದ್ ನಲ್ಲಿ ನೆಲೆಸಿರುವ ಕನ್ನಡ ಅಭಿಮಾನಿಗಳು ಹಾಗೂ ತೆಲುಗು ಫ್ಯಾನ್ಸ್ ಇದ್ದರು.
ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಅದ್ಧೂರಿಯಾಗಿ ಆರಂಭಿಸಿದ ಶೋಗೆ, ರಾಕಿಂಗ್ ಸ್ಟಾರ್ ಗ್ರ್ಯಾಂಡ್ ಎಂಟ್ರಿ ಕೂಡ ಆಗಿತ್ತು. ಅಲ್ಲಿಗೆ ಕೆಜಿಎಫ್ ಪ್ರೀ-ರಿಲೀಸ್ ಗೆ ಅಧಿಕೃತ ಚಾಲನೆ ದೊರೆಯಿತು.
ಪ್ರಶಾಂತ್ ನೀಲ್ ಹೇಳಿದ 'ಆ ಒಂದು' ಮಾತು ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.!
ನಿಗದಿಯಂತೆ ಕೆಜಿಎಫ್ ಚಿತ್ರತಂಡ, ರಾಜಮೌಳಿ ಎಲ್ಲರೂ ಮಾತನಾಡಿದರು. ಈ ಮಧ್ಯೆ ಕೆಲವು ಮನರಂಜನೆ ಕಾರ್ಯಕ್ರಮ, ಡ್ಯಾನ್ಸ್, ಹರಟೆ, ನಿರೂಪಕರ ಫನ್ನಿ ಮಾತುಗಳು ಎಲ್ಲವೂ ಕಿಕ್ ನೀಡಿತ್ತು.
ಎಲ್ಲವೂ ಮುಗಿದ ಮೇಲೆ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಅಭಿಮಾನಿಗಳ ಕಡೆಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಮಯದಲ್ಲಿ ವೇದಿಕೆ ಮೇಲೆ ಏರಿದ ಅಭಿಮಾನಿಗಳು ಯಶ್ ಜೊತೆ ಸೆಲ್ಫಗಾಗಿ ಮುಗಿಬಿದ್ದರು.
ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!
ಕರ್ನಾಟಕದಲ್ಲಿ ಯಶ್ ಗೆ ಸಿಗುವಷ್ಟು ಕ್ರೇಜ್ ಹೈದರಾಬಾದ್ ವೇದಿಕೆಯಲ್ಲೂ ಸಿಕ್ತು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಫೋಟೋಗಾಗಿ ಯಶ್ ಮೇಲೆ ಮುಗಿಬಿದ್ದರು. ಅಭಿಮಾನ ಕಂಡು ತಬ್ಬಿಬಾದ ಯಶ್ ಒಂದ ಕ್ಷಣ ಅಲ್ಲೇ ನಿಂತರು. ಆದ್ರೆ, ಜನರು ಹೆಚ್ಚಾಗಿದ್ದನ್ನ ಗಮನಿಸಿ ವೇದಿಕೆಯಿಂದ ನಿರ್ಗಮಿಸಿದರು.
ಈ ದೃಶ್ಯವನ್ನ ನೋಡಲು ಕನ್ನಡ ಕಲಾರಸಿಕರಿಗೆ ನಿಜಕ್ಕೂ ಖುಷಿ ಆಯ್ತು. ಕನ್ನಡ ಸಿನಿಮಾಗೆ ಇಷ್ಟು ದೊಡ್ಡ ಸ್ವಾಗತ ಸಿಗ್ತಿದೆ ಎಂಬ ಸಂತಸದ ನಡುವೆ ಕನ್ನಡ ನಟನಿಗೆ ಅಲ್ಲಿಯೂ ದೊಡ್ಡ ಅಭಿಮಾನಿ ಹುಟ್ಟಿಕೊಂಡಿದೆ ಎಂಬುದು ಹೆಮ್ಮೆಯ ವಿಚಾರ.