Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಧ್ರ ಪ್ರದೇಶದ ಕಡಪದಲ್ಲಿ ರಾಕಿ ಭಾಯ್ ನೋಡಲು ಮುಗಿಬಿದ್ದ ಜನಸಾಗರ
Recommended Video
ಕೆಜಿಎಫ್ ಸಿನಿಮಾ ಬಂದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಇಮೇಜ್ ರಾಷ್ಟ್ರಮಟ್ಟದಲ್ಲಿ ಬದಲಾಯ್ತು. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ರಾಜಾಹುಲಿಯ ಅಬ್ಬರ ಗಡಿಯಾಚೆಯೂ ಘರ್ಜಿಸಿತು.
ಕನ್ನಡ ಸಿನಿಮಾಗಳು ಅಂದ್ರೆ, ಸ್ವಲ್ಪ ಅಸಡ್ಡೆಯಿಂದ ನೋಡುತ್ತಿದ್ದವರೆಲ್ಲಾ ನಮ್ಮ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಆಯಿತು. ಇದರ ಪರಿಣಾಮ ಯಶ್ ಹೋದಲ್ಲಿ ಬಂದಲ್ಲಿ ಜನಸಾಗರ ಸೇರುತ್ತಿದೆ.
ಸದ್ಯ ಯಶ್ ಅವರು ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಹಳ್ಳಿಯೊಂದರಲ್ಲಿದ್ದಾರೆ. ಶೂಟಿಂಗ್ ಕಾರಣದಿಂದ ಅಲ್ಲಿಗೆ ಹೋಗಿರುವ ಯಶ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ.
'ಕೆಜಿಎಫ್' ಬಂದು ಹೋದ 1 ವರ್ಷದಲ್ಲಿ ಇಂಡಸ್ಟ್ರಿಯಲ್ಲಾದ 5 ಬಹುಮುಖ್ಯ ಬದಲಾವಣೆ
ಕೆಜಿಎಫ್ ಹೀರೋ ಬಂದಿರುವ ವಿಚಾರ ತಿಳಿಯುತ್ತಿದ್ದ ಸುತ್ತಮುತ್ತಲಿನ ಊರಿನವರೆಲ್ಲಾ ಜಾತ್ರೆಯಂತೆ ಸೇರಿದ್ದಾರೆ. ಅಷ್ಟು ಜನ ಬಂದಿರುವುದನ್ನ ಖುಷಿಯಿಂದ ಸ್ವಾಗತಿಸಿದ ರಾಕಿ ಭಾಯ್ ತಾಳ್ಮೆಯಿಂದ ಮಾತನಾಡಿಸಿದ್ದಾರೆ.
2019ರ 'ಬುಕ್ ಮೈ ಶೋ' ಟಾಪ್ ರೇಟ್ ಚಿತ್ರಗಳ ಪಟ್ಟಿಯಲ್ಲಿ 'ಕೆಜಿಎಫ್'ಗೆ ಎಷ್ಟನೇ ಸ್ಥಾನ?
ನಗುನಗುತ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜನಸಂಖ್ಯೆ ಹೆಚ್ಚಿರುವುದನ್ನು ಲೆಕ್ಕಿಸಿದ, ಬಹುತೇಕರಿಗೆ ಸೆಲ್ಫಿ ನೀಡಿದ್ದಾರೆ. ಜನರು ಕೂಡ ಸಾಲಿನಲ್ಲಿ ನಿಂತು ಯಶ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.
'ಕೆಜಿಎಫ್' ನಿರ್ಮಿಸಿರುವ ಈ 8 ದಾಖಲೆ ಬ್ರೇಕ್ ಮಾಡೋದು ಯಾರು?
ಈ ಮುಂಚೆ ಯಶ್ ಅವರನ್ನು ನೋಡಲು ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದ ಅಭಿಮಾನಿಗಳು ಬೆಂಗಳೂರಿಗೆ ಬಂದಿದ್ದರು. ಆಗಲೂ ಹೊರರಾಜ್ಯದಿಂದ ಬಂದ ಎಲ್ಲ ಅಭಿಮಾನಿಗಳ ಜೊತೆ ಮಾತನಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು ಯಶ್.
ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಮಧ್ಯದಲ್ಲಿ ತೆರೆಗೆ ಬರುವ ತಯಾರಿ ಮಾಡಲಾಗುತ್ತಿದೆ. ಈ ಸಲ ಯಶ್ ಕೆಜಿಎಫ್ ಗೆ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಕೂಡ ಸಾಥ್ ನೀಡಿದ್ದಾರೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.