Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಡಿಗೆ' ವಿಷ್ಯ ಕೆದಕಿದ ನಿಖಿಲ್ ಗೆ ಯಶ್ ತಿರುಗೇಟು
Recommended Video
ಮಂಡ್ಯ ಅಖಾಡದಲ್ಲಿ ನಿಖಿಲ್ ಕುಮಾರ್ ವರ್ಸಸ್ ರಾಕಿಂಗ್ ಸ್ಟಾರ್ ಯಶ್ ಎನ್ನುವಂತಾಗಿದೆ. ಆರಂಭದಿಂದಲೂ ಪರೋಕ್ಷವಾಗಿ ವಾಕ್ಸರ ಮಾಡುತ್ತಿದ್ದ ಇವರಿಬ್ಬರು ಈಗ ನೇರಾನೇರ ಮಾತಿನ ಯುದ್ಧಕ್ಕೆ ನಿಂತಿದ್ದಾರೆ. ಸೋಮವಾರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದ ನಿಖಿಲ್ 'ಮನೆ ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ನಟ ಯಶ್ ವಿರುದ್ಧ ಹರಿಹಾಯ್ದಿದ್ದರು.
ಅದಕ್ಕೀಗ ಉತ್ತರ ಕೊಟ್ಟಿರುವ ರಾಜಾಹುಲಿ 'ಹೌದು, ನಮಗೆ ಮನೆ ಬಾಡಿಗೆ ಕಟ್ಟೋಕೆ ಆಗಿಲ್ಲ. ಆ ದುಡ್ಡಿನಲ್ಲಿ ಉತ್ತರ ಕರ್ನಾಟಕದ ಜನತೆಗೆ ಸಹಾಯ ಮಾಡಿದ್ದೀನಿ. ಈ ಸರ್ಕಾರಗಳು ಏನೂ ಮಾಡಿಲ್ಲ' ಎಂದು ತಿರುಗೇಟು ನೀಡಿದ್ದಾರೆ.
'ಬಾಡಿಗೆ ಕಟ್ಟದವರು ಮಾತನಾಡ್ತಾರೆ': ಯಶ್ ವಿರುದ್ಧ ಗುಡುಗಿದ ನಿಖಿಲ್
ಮಂಗಳವಾರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವ ನಟ ಯಶ್, ಸಿಎಂ ಪುತ್ರನ ಆರೋಪಕ್ಕೆ ತಮ್ಮದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟಿದ್ದು, ಸ್ವಾಭಿಮಾನದ ನಾಡಲ್ಲಿ ಇದು ದೊಡ್ಡ ಚರ್ಚೆಯಾಗಿದೆ. ಹಾಗಿದ್ರೆ, ನಿಖಿಲ್ ಬಗ್ಗೆ ಯಶ್ ಬೇರೆ ಏನು ಹೇಳಿದ್ರು? ಮುಂದೆ ಓದಿ....
ಸರ್ಕಾರಗಳು ಮಾಡಿಲ್ಲ, ನಾನು ಮಾಡಿದೆ
''ಉತ್ತರ ಕರ್ನಾಟಕ ಜನರಿಗೆ ಕುಡಿಯೋಕೆ ನೀರು ಇರಲಿಲ್ಲ. ಬಹಳ ಕಷ್ಟಪಡ್ತಿದ್ರು. ಈ ಸರ್ಕಾರಗಳು ಬಂದಾಗ ಏನೂ ಕೆಲಸ ಮಾಡಿಲ್ಲ. ನಾವು ಆಗ ಸ್ವಲ್ಪ ಕಷ್ಟಪಟ್ಟು ದುಡಿದಿದ್ದ ದುಡ್ಡಿಂದ ಕೆರೆಯಲ್ಲಿ ನೀರು ಸಂಗ್ರಹಿಸುವಂತೆ ಮಾಡಿದ್ವಿ ಅಲ್ವಾ, ಆಗ ನಮ್ಮ ಹತ್ರ ಇದ್ದ ದುಡ್ಡು ಖರ್ಚು ಆಗೋಯ್ತು. ಅದಕ್ಕೆ ಬಾಡಿಗೆ ಕಟ್ಟೋಕೆ ಆಗಿಲ್ಲ'' ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ರು.
'ನಾವು ಬಿಸಿಲಿನಲ್ಲಿ ಆಡಿ ಬಂದವರು' ಸಿಎಂ ಹೇಳಿಕೆಗೆ ರಾಕಿ ಭಾಯ್ ಪಂಚ್
ನಾವು ಕಷ್ಟಪಟ್ಟು ದುಡಿಬೇಕು
''ಬೇರೆ ಎಲ್ಲ ಕೆಸಲಗಳಿಗೂ ಹೇಗೆ ದೇವರು ಕೊಡ್ತಾನೆ. ಆದ್ರೆ, ಮನೆ ಬಾಡಿಗೆ ಕಟ್ಟೋಕೆ ನಮಗೆ ಯೋಗ್ಯತೆ ಇಲ್ಲ. ಏನು ಮಾಡ್ತೀರಾ, ಕೆಲವರ ಹಣೆಬರಹ, ಯೋಗದಲ್ಲಿ ಬಂದಿರ್ತಾರೆ. ನಾವು ಕಷ್ಟಪಟ್ಟು ದುಡಿಬೇಕು ಮುಂದಿನ ದಿನದಲ್ಲಿ ನಮಗೆ ಆ ಸ್ಥಿತಿ ಬರಬಾರದು ಎಲ್ಲರೂ ಪ್ರಾರ್ಥನೆ ಮಾಡಿಕೊಳ್ಳಿ. ನಾನು ಮಾಡ್ಕೊಳ್ತೀನಿ'' ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಸುಮಲತಾ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಯ್ತಾ.? ಅಂಬಿ ಪತ್ನಿ ಹೇಳಿದ್ದೇನು?
ಟೀಕೆ ನಾವು ಮಾಡ್ತಿಲ್ಲ
ಟೀಕೆ ಮಾಡ್ಕೊಂಡು ರಾಜಕೀಯ ಮಾಡ್ತಿರೋದು ನಾವಲ್ಲ. ಛತ್ರಿ ಹಿಡ್ಕೊಂಡು ಇದ್ದ ಸಿನಿಮಾದವರು ಬಿಸಿಲಿಗೆ ಬಂದಿದ್ದಾರೆ. ಗಂಡ ಸತ್ತ ಮೇಲೆ ಮನೆಯಲ್ಲಿರಬೇಕು, ಬಾಡಿಗೆ ಕಟ್ಟಿಲ್ಲ ಇದೆಲ್ಲ ಟೀಕೆ ಮಾಡಿದ್ದು ನಾವಲ್ಲ. ಯಾರಾದರೂ ಟೀಕೆ ಮಾಡಿದಾಗ, ನೀವು ನಮ್ಮ ಅಭಿಪ್ರಾಯ ಕೇಳ್ತೀರಾ. ಅದಕ್ಕೆ ನಾವು ಉತ್ತರ ಕೊಟ್ಟಿದ್ದೀವಿ ಅಷ್ಟೇ.
'ನಿಖಿಲ್ ಎಲ್ಲಿದ್ದೀಯಪ್ಪ...' ಯಾರಿಗೆ ಸಿಗಲಿದೆ ಈ ಟೈಟಲ್?
ನಿಖಿಲ್ ಏನು ಹೇಳಿದ್ರು?
'ಛತ್ರಿ ಹಿಡ್ಕೊಂಡು ಶೂಟಿಂಗ್ ಮಾಡುತ್ತಿದ್ದವರಿಗೆ ಕಷ್ಟ ಆಗ್ತಿರಬಹುದು' ಎಂದು ಕುಮಾರಸ್ವಾಮಿ ಅವರು, ಯಶ್ ಮತ್ತು ದರ್ಶನ್ ಕುರಿತು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟ ಯಶ್ 'ಅವರ ಅಭ್ಯರ್ಥಿ ಬಗ್ಗೆ ಹೇಳುತ್ತಿದ್ದಾರೆ' ಎಂದು ವ್ಯಂಗ್ಯ ಮಾಡಿದ್ದರು. ಯಶ್ ಹೇಳಿದ ಆ ಮಾತಿಗೆ ತಿರುಗೇಟು ಕೊಟ್ಟಿದ್ದ ನಿಖಿಲ್, 'ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ, ಮಾತಾಡಲಿ..ಮಾತಾಡಲಿ....ಎಷ್ಟು ದಿನ ಅಂತ ನೋಡೋಣ' ಎಂದು ಟಾಂಗ್ ನೀಡಿದ್ರು.