Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಯಬಿದ್ದು ಅಮೆರಿಕದಿಂದ ಓಡಿ ಬಂದಿದ್ದೇಕೆ ರಾಕಿಂಗ್ ಸ್ಟಾರ್?
Recommended Video
ನ್ಯಾಷನಲ್ ಸ್ಟಾರ್ ಆಗಿ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೂ ರಾಕಿ ಭಾಯ್, ಸ್ಯಾಂಡಲ್ ವುಡ್ ನ ಬೆಳದಿಂಗಳ ಬಾಲೆ ಎಂದೆ ಖ್ಯಾತಿಗಳಿಸಿರುವ ಸುಮನ್ ನಗರ್ಕರ್ ಅಭಿನಯದ 'ಬಬ್ರೂ' ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಆಗಮಿಸಿದ್ದರು.
ಅಮೆರಿಕದಲ್ಲಿ ನೆಲೆಸಿರುವ ಸುಮನ್ ನಗರ್ಕರ್ ಅಭಿನಯದ ಬಬ್ರೂ ಸಿನಿಮಾದ ಟ್ರೈಲರ್ ನೋಡಿ ಯಶ್ ಇಷ್ಟ ಪಟ್ಟಿದ್ದಾರೆ. ಇದೆ ಸಮಯದಲ್ಲಿ ಅಮೆರಿಕ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. ಗಜಕೇಸರಿ ಸಿನಿಮಾ ರಿಲೀಸ್ ಸಮಯದಲ್ಲಿ ಅಂದರೆ ಸುಮಾರು 5 ವರ್ಷದ ಹಿಂದೆ ಯಶ್ ಸಿನಿಮಾ ವಿಚಾರವಾಗಿ ಅಮೆರಿಕಗೆ ಹೋದಾಗ ಅಲ್ಲಿ ಆದ ಅನುಭವನ್ನು ಬಿಚ್ಚಿಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಗೆ ಆವಾಜ್ ಹಾಕಿದ ರಾಧಿಕಾ ಪಂಡಿತ್
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಸಿನಿಮಾ ಇಂಟ್ರೆಸ್ಟ್ ಹೇಗಿರುತ್ತೆ, ಯಾವ ರೀತಿಯ ಸಿನಿಮಾಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಯಶ್ ಅಮೆರಿಕಗೆ ಹೋಗಿದ್ದರಂತೆ. ಅಲ್ಲಿ ಜನರ ಅಭಿರುಚಿ ನೋಡಿ ಭಯಬಿದ್ದು ವಾಪಸ್ ಬಂದಿದ್ದರಂತೆ.
ಯುಎಸ್ ನಲ್ಲಿ ಸಿನಿಮಾ ನೋಡುವವರ ಕಥೆಯೆ ಮಜವಾಗಿರುತ್ತಂತೆ. ಶಾರುಖ್ ಖಾನ್ ಅಭಿನಯದ 'ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ' ಸಿನಿಮಾ ನೋಡಿ ಫಿದಾ ಆಗಿ ಯು ಎಸ್ ನಲ್ಲಿರುವ ಹುಡುಗನನ್ನು ಮದುವೆಯಾದ ಜೋಡಿಯ ಕಥೆಯನ್ನು ಹಂಚಿಕೊಂಡರು. ಅಮೇರಿಕಾದಲ್ಲಿ ಮನೆಯ ಕೆಲಸವನ್ನು ಅವರೆ ಮಾಡಬೇಕು. ಕೆಲಸಕ್ಕೆ ಆಳುಕಾಳು ಯಾರು ಇರುವುದಿಲ್ಲ. ಯುಎಸ್ ಗೆ ಹೋದವರೆಲ್ಲರು ಅವರವರ ಕೆಲಸ ಅವರೆ ಮಾಡಿಕೊಳ್ಳಬೇಕು. ಆದ್ರಿಲ್ಲಿ ಅಸಿಸ್ಟಂಟ್ ಗೆ ಒಬ್ಬ ಅಸಿಸ್ಟಂಟ್ ಇರುತ್ತಾರೆ.
ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?
ಅಲ್ಲಿಯ ಜೀವನ ನೋಡಿ ನಾನು ಭಯಬಿದ್ದು ಓಡಿ ಬಂದೆ ಎಂದು ಹೇಳಿದ್ದಾರೆ. ಅಲ್ಲದೆ ಯುಎಸ್ ನಲ್ಲಿ ಕನ್ನಡದ ಹೆಸರಲ್ಲಿ ಬ್ಯುಸಿನೆಸ್ ನಡೆಯುತ್ತಿದೆ, ಎಂದು ವಿದೇಶದಲ್ಲಿ ಕನ್ನಡ ಚಿತ್ರ ಪ್ರದರ್ಶನ ಮಾಡಬೇಕಾದರೆ ಎಷ್ಟೆಲ್ಲ ಕಷ್ಟವಿತ್ತು ಎನ್ನುವುದನ್ನು ಹೇಳಿದ್ದಾರೆ. ಆದ್ರೀಗ ಪರಿಸ್ಥಿತಿ ತುಂಬ ಸುದಾರಿಸಿದೆ ಎಂದು ಹೇಳಿದ್ದಾರೆ.