Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡೆಗೂ 'ಪಬ್ಲಿಕ್ ಟಿವಿ'ಯಲ್ಲಿ ಪ್ರತ್ಯಕ್ಷರಾದ ಯಶ್.!
ಕನ್ನಡ ಸುದ್ದಿ ವಾಹಿನಿಗಳು ಹಾಗೂ ರಾಕಿಂಗ್ ಸ್ಟಾರ್ ಯಶ್ ಮಧ್ಯೆ ಕಳೆದ ಕೆಲ ದಿನಗಳ ಹಿಂದೆ ಏಟು-ತಿರುಗೇಟು-ಎದಿರೇಟು ನಡೆದದ್ದು ನಿಮಗೆ ನೆನಪಿರಲೇಬೇಕು.
''ರೈತರ ಸಮಸ್ಯೆ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಪ್ರೈಮ್ ಟೈಮ್ ನಲ್ಲಿ ಅವಕಾಶ ಕೊಟ್ಟರೆ ನಾನು ಬರಲು ಸಿದ್ಧ'' ಅಂತ ಕನ್ನಡ ಸುದ್ದಿ ವಾಹಿನಿಗಳಿಗೆ ಯಶ್ ಹಾಕಿದ ಬಹಿರಂಗ ಸವಾಲನ್ನ 'ಪಬ್ಲಿಕ್ ಟಿವಿ' ಮೊದಲು ಸ್ವೀಕರಿಸಿ, ಯಶ್ ರವರಿಗೆ ಬಹಿರಂಗ ಆಹ್ವಾನ ನೀಡಿತ್ತು.
ಅಲ್ಲಿಂದ 'ರೈತರ ಸಮಸ್ಯೆ' ಕುರಿತು ಚರ್ಚೆ ನಡೆಯುವ ಬದಲು ಕನ್ನಡ ಸುದ್ದಿ ವಾಹಿನಿಗಳಲ್ಲಿ 'ಎಲ್ಲಿದ್ದೀರಾ ಯಶ್' ಎಂಬ ಪ್ರಶ್ನೆಯೇ ರಾರಾಜಿಸುತ್ತಿತ್ತು. ವಾದ-ವಿವಾದ ನಡೆದರೂ ಅಂದು 'ಪಬ್ಲಿಕ್ ಟಿವಿ' ಸ್ಟುಡಿಯೋದಲ್ಲಿ ಪ್ರತ್ಯಕ್ಷವಾಗದ ಯಶ್ ಇಂದು ಅದೇ 'ಪಬ್ಲಿಕ್ ಟಿವಿ'ಯಲ್ಲಿ ಎಚ್.ಆರ್.ರಂಗನಾಥ್ ಜೊತೆ ಪ್ರತ್ಯಕ್ಷವಾಗಿದ್ದಾರೆ.
ಕಡೆಗೂ ಎಚ್.ಆರ್.ರಂಗನಾಥ್ ಜೊತೆ ಯಶ್ ಪ್ರತ್ಯಕ್ಷ
ಎಚ್.ಆರ್.ರಂಗನಾಥ್ ಜೊತೆ ಕೂತು ರೈತರ ಸಮಸ್ಯೆ ಕುರಿತು ಯಶ್ ಚರ್ಚೆ ನಡೆಸಲು ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೂ, ಎಚ್.ಆರ್.ರಂಗನಾಥ್ ರವರನ್ನ ಯಶ್ ಮೀಟ್ ಮಾಡಿದ್ದಾರೆ. [ಯಶ್ ಕರೆದ ಜಾಗಕ್ಕೆ ಚರ್ಚೆಗೆ ಬರಲ್ಲ ಅಂದ ಎಚ್.ಆರ್.ರಂಗನಾಥ್]
ಭೇಟಿ ಯಾಕೆ?
ನಟಿ ರಾಧಿಕಾ ಪಂಡಿತ್ ಜೊತೆಗಿನ ತಮ್ಮ ವಿವಾಹ ಮಹೋತ್ಸವಕ್ಕೆ ಹಾಜರಾಗಲು 'ಪಬ್ಲಿಕ್ ಟಿವಿ' ಮುಖ್ಯಸ್ಥ ಎಚ್.ಆರ್.ರಂಗನಾಥ್ ಗೆ ಯಶ್ ಆಹ್ವಾನ ನೀಡಿದ್ದಾರೆ.
'ಪಬ್ಲಿಕ್ ಟಿವಿ'ಗೆ ತೆರಳಿದ್ದರು.!
ಯಶವಂತಪುರದಲ್ಲಿರುವ 'ಪಬ್ಲಿಕ್ ಟಿವಿ' ಕಛೇರಿಗೆ ತೆರಳಿ ಎಚ್.ಆರ್.ರಂಗನಾಥ್ ರವರಿಗೆ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ ಯಶ್. [ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']
ಯಶ್ 'ಸ್ಟೈಲ್'ನಲ್ಲಿ ಆಮಂತ್ರಣ
ಎಂದಿನಂತೆ ಸಂಪಿಗೆ ಸಸಿ, 'ಲೈಫ್ ಈಸ್ ಬ್ಯೂಟಿಫುಲ್' ಪುಸ್ತಕ, ಪ್ಯಾಲೇಸ್ ಗ್ರೌಂಡ್ ಗೆ ಗೇಟ್ ಪಾಸ್ ಜೊತೆಗೆ 'ಆಮಂತ್ರಣ ಪತ್ರಿಕೆ' ಕೊಟ್ಟು ಎಚ್.ಆರ್.ರಂಗನಾಥ್ ರವರನ್ನ ಯಶ್ ಆಹ್ವಾನಿಸಿದ್ದಾರೆ. ['ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್]
ಅಂದು 'ಪಬ್ಲಿಕ್ ಟಿವಿ' ಕಡೆ ಯಾಕೆ ಮುಖ ಮಾಡ್ಲಿಲ್ಲ?
'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಯಶ್ ಹಾಗೂ ಮಾಧ್ಯಮ ಪ್ರತಿನಿಧಿಗಳ ಮಧ್ಯೆ ವಾಗ್ವಾದ ನಡೆದ ಬಳಿಕ 'ಪಬ್ಲಿಕ್ ಟಿವಿ' ಗೆ ಮೊದಲು ಹೋಗುವುದಾಗಿ ಯಶ್ ಹೇಳಿದ್ದರು. ಆದ್ರೆ, ಅಂದು ಎಚ್.ಆರ್.ರಂಗನಾಥ್ ವೈಯುಕ್ತಿಕ ಪ್ರವಾಸದಲ್ಲಿ ಇದ್ದ ಕಾರಣ 'ಪಬ್ಲಿಕ್ ಟಿವಿ'ಯಲ್ಲಿ ಸಮಯ ನಿಗದಿ ಆಗ್ಲಿಲ್ಲ. ಹೀಗಾಗಿ 'ಈ ಟಿವಿ'ಯಲ್ಲಿ ಯಶ್ ಚರ್ಚೆಗೆ ಕೂತರು. [ಆ ರಂಗನಾಥ್ ಬಿಟ್ಟು 'ಈ' ರಂಗನಾಥ್ ಜೊತೆ ಕುಳಿತ ನಟ ಯಶ್.!]
ವಿವಾದ ತಣ್ಣಗಾಗಿದೆ.!
ರೈತರ ಸಮಸ್ಯೆ ಕುರಿತು 'ಈ ಟಿವಿ'ಯಲ್ಲಿ ಯಶ್ ಚರ್ಚೆ ಮಾಡಿದ ಬಳಿಕ ವಿವಾದಕ್ಕೆ ಈಗ ಫುಲ್ ಸ್ಟಾಪ್ ಬಿದ್ದಿದೆ.