Don't Miss!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Automobiles Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- News ನೇಹಾ ಕೊಲೆಗೆ ಸಿಎಂ ತೀವ್ರ ಖಂಡನೆ: ಕೊಲೆಗಾರನಿಗೆ ಶಿಕ್ಷೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಬಳಿಕ ಸುಮಲತಾ ಸಿಕ್ತು ಮನೆ ಮಗ ಯಶ್ ಬೆಂಬಲ!
Recommended Video
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಒಬ್ಬರ ನಂತರ ಒಬ್ಬರಂತೆ ಸ್ಯಾಂಡಲ್ ವುಡ್ ಕಲಾವಿದರು ಸುಮಲತಾಗೆ ಬೆಂಬಲ ಸೂಚಿಸುತ್ತಿದ್ದಾರೆ.
ಚುನಾವಣೆಯ ಬಗ್ಗೆ ಮಾತನಾಡುವ ವೇಳೆ ಸುಮಲತಾ ''ದರ್ಶನ್ ನನ್ನ ದೊಡ್ಡ ಮಗ ಹಾಗೂ ಯಶ್ ನನ್ನ ಮನೆ ಮಗ'' ಅವರು ಏನೇ ಸಹಾಯ ಕೇಳಿದರೂ ಮಾಡುತ್ತಾರೆ ಎಂದಿದ್ದರು. ಅದೇ ರೀತಿ ದರ್ಶನ್ ಸುಮಲತಾ ಅವರ ಪರ ನಿಂತಿದ್ದರು.
ದರ್ಶನ್ ನನ್ನ ದೊಡ್ಡ ಮಗ, ಯಶ್ ಮನೆ ಮಗ: ಸುಮಲತಾ
ನಟ ದರ್ಶನ್ ನಂತರ ಇದೀಗ ಯಶ್ ಸಹ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಲಿದ್ದಾರೆ ಎನ್ನಲಾಗಿದೆ. ನಿನ್ನೆ ಇದೇ ವಿಚಾರವಾಗಿ ಯಶ್ ರನ್ನು ಸುಮಲತಾ ಭೇಟಿ ಮಾಡಿದ್ದಾರೆ. ಮುಂದೆ ಓದಿ...
ಸುಮಲತಾ ಅಂಬರೀಶ್ ಗೆ ಯಶ್ ಸಾಥ್
ನಟಿ ಸುಮಲತಾ ಅಂಬರೀಶ್ ಕೆಲ ದಿನಗಳ ಹಿಂದೆ ಚುನಾವಣಾ ವಿಚಾರವಾಗಿ ದರ್ಶನ್ ರನ್ನು ಭೇಟಿ ಮಾಡಿದ್ದರು. ಅದರ ನಂತರ ನಿನ್ನೆ ರಾಕಿಂಗ್ ಸ್ಟಾರ್ ಯಶ್ ರನ್ನು ಸಹ ಭೇಟಿ ಮಾಡಿದ್ದಾರೆ. ನಿನ್ನೆ ಬೆಂಗಳೂರು ಪ್ರೆಸ್ಟಿಜ್ ಅಪಾರ್ಟ್ ಮೆಂಟ್ ನಲ್ಲಿ ಯಶ್ ಹಾಗೂ ಸುಮಲತಾ ಭೇಟಿಯಾಗಿದ್ದು, ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ್ದಾರೆ.
ಮಂಡ್ಯದಲ್ಲಿ ಪ್ರಚಾರ
ನಿನ್ನೆ ಸುಮಾರು ನಾಲ್ಕು ಗಂಟೆಗಳ ಕಾಲ ಲೋಕಸಭಾ ಚುನಾವಣೆ ಬಗ್ಗೆ ಯಶ್ ಮತ್ತು ಸುಮಲತಾ ಚರ್ಚೆ ಮಾಡಿದ್ದಾರೆ. ಈ ವೇಳೆ ಯಶ್ ರಿಂದ ಕೆಲ ಸಲಹೆಯನ್ನು ಸುಮಲತಾ ಪಡೆದಿರಬಹುದು. ಮಂಡ್ಯದಲ್ಲಿ ತಮ್ಮ ಪರ ಪ್ರಚಾರ ಮಾಡಲು ತಿಳಿಸಿರಬಹುದು. ಇತ್ತ ಯಶ್ ಕೂಡ ಸುಮಲತಾ ಮಾತಿಗೆ ಸಮ್ಮತಿ ನೀಡಿರಬಹುದು.
ಮಂಡ್ಯ ಚುನಾವಣಾ ಪ್ರಚಾರದ ನಿರ್ಧಾರ ತಿಳಿಸಿದ ದರ್ಶನ್! 'ಯಜಮಾನ' ಯಾರ ಪರ?
ದರ್ಶನ್ ಹೇಳಿದ್ದೇನು?
ಈ ಹಿಂದೆ ಸುಮಲತಾ ಪರ ಮಾತನಾಡಿದ್ದ ದರ್ಶನ್ ''ಅಂಬರೀಶ್ ಅಪ್ಪಾಜಿಯವರು ಯಾವಾಗ ಚುನಾವಣೆಯಲ್ಲಿ ನಿಂತಿದ್ದರೊ ಆಗಲು ನಾನು ಹೋಗಿದ್ದೇನೆ. ಇದು ನಮ್ಮ ಕರ್ತವ್ಯ. ಸುಮಲತಾ ಅಮ್ಮ ಪ್ರಚಾರಕ್ಕೆ ಕರೆದರೆ ಹೋಗುತ್ತೇನೆ. ಎಷ್ಟೊ ಜನ ಸ್ನೇಹಿತರಿಗೂ ಚುನಾವಣೆಗಳಲ್ಲಿ ಪ್ರಚಾರ ಮಾಡಿ ಕೊಟ್ಟಿದ್ದೇನೆ. ಹಾಗೆಯೇ ಈಗಲೂ ಹೋಗಿ ಬರುತ್ತೇನೆ.'' ಎಂದು ಹೇಳಿದ್ದರು.
ನಟ ಚರಣ್ ರಾಜ್ ಪ್ರತಿಕ್ರಿಯೆ
ನಟ ಚರಣ್ ರಾಜ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ''ನನಗೆ ಅವರ ವೈಯಕ್ತಿಕ ವಿಷಯದ ಬಗ್ಗೆ ತಿಳಿದಿಲ್ಲ. ನಾನು ಪೇಪರ್ ಗಳಲ್ಲಿ ಈ ಬಗ್ಗೆ ಸುದ್ದಿ ನೋಡಿದೆ. ಸುಮಲತಾ ಅವರು ಅಂಬರೀಶ್ ಅಣ್ಣನ ದಾರಿಯಲ್ಲಿ ಹೋಗುತ್ತಿದ್ದಾರೆ. ನಾನು ಅಂಬರೀಶ್ ಅಣ್ಣನ ಮನೆಯಲ್ಲಿ ಊಟ ಮಾಡಿದ್ದೇನೆ. ನನಗೆ ಸುಮಲತಾ ಅವರು ಯಾವತ್ತೆ.. ಯಾವ ಸಮಯದಲ್ಲಿಯೇ ಕರೆದರೂ ಖಂಡಿತ ನಾನು ಹೋಗಿ ಅವರಿಗೆ ಸಪೋರ್ಟ್ ಮಾಡುತ್ತೇನೆ.'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.