Don't Miss!
- News ಚುನಾವಣೆ ಸಮಯದಲ್ಲೇ ಬಿಜೆಪಿಗೆ ಗುಡ್ಬೈ ಹೇಳಿದ ಸಂಸದ ಕರಡಿ ಸಂಗಣ್ಣ: ಕಾಂಗ್ರೆಸ್ ಸೇರ್ಪಡೆ
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Sports KKR vs RR IPL 2024: ಟೇಬಲ್ ಟಾಪರ್ ಸ್ಥಾನಕ್ಕಾಗಿ ಹಣಾಹಣಿ; ಟಾಸ್ ವರದಿ, ಆಡುವ 11ರ ಬಳಗ
- Lifestyle ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಜ ಜೀವನದಲ್ಲಿ ರೈತನಾಗಲು ಸಜ್ಜಾದ ರಾಕಿ ಭಾಯ್
ನಟ ಯಶ್ಗೆ ಕೃಷಿಯಲ್ಲಿ, ಹಳ್ಳಿ ಜೀವನದಲ್ಲಿ ಬಹಳ ಒಲವು. ತಮ್ಮ ಕೃಷಿ ಪ್ರೀತಿಯ ಬಗ್ಗೆ ಈ ಹಿಂದೆಯೇ ಕೆಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ ನಟ ಯಶ್.
Recommended Video
ಕೃಷಿ ಹಾಗೂ ಕೃಷಿಕರ ಬಗ್ಗೆ ಅಪಾರ ಒಲವು ಇರುವ ನಟ ಯಶ್ ಇದೀಗ ತಾವೇ ಸ್ವತಃ ಕೃಷಿಕರಾಗುತ್ತಿದ್ದಾರೆ. ಹಾಸನದ ತಿಮ್ಲಾಪುರ ಬಳಿಯ ತಮ್ಮ ಜಮೀನಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಯಶ್, ಜಮೀನನ್ನು ಹದಗೊಳಿಸಿ ಕೃಷಿ ಮಾಡಲಿದ್ದಾರೆ.
ಯಶ್ ಅವರು ಮುಂದಾಳತ್ವವಹಿಸಿ ಜಮೀನನ್ನು ಹಸನು ಮಾಡಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಮೀನಿನಲ್ಲಿ ಮಾದರಿ ಕೃಷಿ ಮಾಡುವ ಯೋಚನೆಯಲ್ಲಿದ್ದಾರೆ ಯಶ್. ಈ ಹಿಂದೆಯೇ ಈ ಬಗ್ಗೆ ಯಶ್ ಹೇಳಿದ್ದರು.
ವಿವಾದಕ್ಕೆ ಕಾರಣವಾಗಿದ್ದ ಜಮೀನು
ಕೆಲವು ದಿನಗಳ ಹಿಂದೆ ಯಶ್ ಅವರ ಈ ಜಮೀನು ವಿವಾದಕ್ಕೆ ಕಾರಣವಾಗಿತ್ತು, ದೇವಸ್ಥಾನದ ಜಾಗವನ್ನು ಅತಿಕ್ರಮಿಸಿ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತಕರಾರು ತೆಗೆದಿದ್ದರು. ಆದರೆ ನಂತರ ಗ್ರಾಮಸ್ಥರು ಹಾಗೂ ಯಶ್ ತಂಡ ಒಟ್ಟಿಗೆ ಕೂತು ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಂಡರು.
ಹಲವು ಯೋಜನೆಗಳಿವೆ ಯಶ್ಗೆ
ಜಮೀನು ವಿವಾದ ಆಗಿದ್ದಾಗ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಯಶ್, 'ಈ ಜಮೀನಿನಲ್ಲಿ ಮಾದರಿ ಕೃಷಿ ಮಾಡುವ ಉದ್ದೇಶ ಇದೆ. ನೀರು ಮರುಪೂರ್ಣ ವ್ಯವಸ್ಥೆ, ಇಂಗು ಗುಂಡಿ ನಿರ್ಮಾಣ, ಮಳೆ ನೀರು ಹಿಡಿದಿಡುವ ಆಧುನಿಕ ವ್ಯವಸ್ಥೆ ಮಾಡುವ ಯೋಚನೆ ಇದೆ. ಇದರಿಂದ ಸುತ್ತ-ಮುತ್ತಲಿನ ರೈತರಿಗೂ ಅನುಕೂಲವಾಗಲಿದೆ ಎಂದಿದ್ದರು.
ಕೊಳವೆ ಬಾವಿ ರಹಿತ ತೋಟಗಾರಿಕೆ
ಯಶ್ ಅವರು ಹಾಸನದ ತಿಮ್ಲಾಪುರದ ಬಳಿಯ ಜಮೀನು ಖರೀದಿಸಿದ್ದೆ ಕೃಷಿಯ ಉದ್ದೇಶಕ್ಕೆ. ಆ ಜಮೀನಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೊಳವೆಬಾವಿ ರಹಿತ ತೋಟಗಾರಿಕೆ ಮಾಡುವ ಉದ್ದೇಶ ಯಶ್ ಅವರದ್ದು.
ಕೆರೆ ತುಂಬುವ ಕಾರ್ಯ ಮಾಡಿದ್ದ ಯಶ್
ಮಳೆ ನೀರು ಪುನರ್ಬಳಕೆ, ಕೆರೆ ಮರುಪೂರಣ ಇಂಥಹಾ ವಿಷಯಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಯಶ್, 'ಯಶೋಮಾರ್ಗ' ಸಮಾಜ ಸೇವಾ ಸಂಸ್ಥೆ ಮೂಲಕ ಕೆಲವು ಕೆರೆಗಳನ್ನು ಸ್ವಂತ ಖರ್ಚಿನಲ್ಲಿ ಮರುಪೂರಣ ಮಾಡಿಸಿದ್ದಾರೆ.