twitter
    For Quick Alerts
    ALLOW NOTIFICATIONS  
    For Daily Alerts

    'ಮಾಯಾಂಗನೆ ಸುಮಲತಾ' ಟೀಕೆಗೆ ರಾಕಿಂಗ್ ಸ್ಟಾರ್ ಫುಲ್ ಗರಂ

    |

    Recommended Video

    Lok Sabha Elections 2019 : ಜಯಲಲಿತಾ ಮೀರಿಸುವಂತಹ ಮಾಯಾಂಗನೆ ಸುಮಲತಾ ಎಂದಿದ್ದ ಶಿವರಾಮೇಗೌಡ

    ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಗಿಂತ ಮಾಯಾಂಗನೆ ಎಂದು ಸಂಸದ ಶಿವರಾಮೇಗೌಡ ಟೀಕೆ ಮಾಡಿದ್ದರು. ಈ ಹೇಳಿಕೆಗೆ ಸುಮಲತಾ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.

    ನಟ ದರ್ಶನ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ 'ಅವರು ಏನೇ ಹೇಳಿದ್ರು ನಾವು ರಿಯಾಕ್ಟ್ ಮಾಡಲ್ಲ' ಎಂದಿದ್ದರು. ಇದೀಗ, ಈ ಬಗ್ಗೆ ನಟ ಯಶ್ ಮಾತನಾಡಿ ಸಂಸದ ಶಿವರಾಮೇಗೌಡ ವಿರುದ್ಧ ಕಿಡಿಕಾರಿದ್ದಾರೆ.

    'ಅಂಬರೀಶ್ ಅವರು ಇದ್ದಿದ್ರೆ ಬರಿ ಬೆರಳು ತೋರಿಸಲು ಯಾರಿಗಾದರೂ ತಾಕತ್ ಇತ್ತಾ? ಅವರಿಲ್ಲ ಎಂಬ ಕಾರಣಕ್ಕೆ ಈಗ ಏನೆಲ್ಲಾ ಮಾತಾಡ್ತಿದ್ದಾರೆ. ಈ ದುರಹಂಕಾರಕ್ಕೆ ಮಂಡ್ಯ ಜನರು ಪಾಠ ಕಲಿಸುತ್ತಾರೆ' ಎಂದು ಯಶ್ ತಿರುಗೇಟು ನೀಡಿದ್ದಾರೆ.

    Yash react about mayanagane sumalatha word

    'ಮಾಯಾಂಗನೆ ಸುಮಲತಾ' ಟೀಕೆಗೆ ದರ್ಶನ್ ಹೇಳಿದ್ದು ಮತ್ತದೇ ಉತ್ತರ 'ಮಾಯಾಂಗನೆ ಸುಮಲತಾ' ಟೀಕೆಗೆ ದರ್ಶನ್ ಹೇಳಿದ್ದು ಮತ್ತದೇ ಉತ್ತರ

    'ಹೆಣ್ಣುಮಕ್ಕಳ ವಿಚಾರಕ್ಕೆ ಬರಬಾರದು. ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಇರ್ತಾರೆ. ಇವರ ಬಗ್ಗೆ ಮಾತನಾಡುವುದಕ್ಕೂ ಮುಂಚೆ ಅವರ ಹೆಣ್ಣು ಮಕ್ಕಳನ್ನ ನೆನಪು ಮಾಡಿಕೊಳ್ಳಲಿ. ಅವರ ಗಂಡ ಸ್ಪರ್ಧೆ ಮಾಡಿದ್ದ ಜಾಗದಲ್ಲಿ ಅವರು ಚುನಾವಣೆ ಸ್ಪರ್ಧಿಸಿದ್ದಾರೆ. ಅದರಲ್ಲಿ ಏನಿದು ತಪ್ಪು' ಎಂದು ಪ್ರಶ್ನಿಸಿದ್ದಾರೆ.

    ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು? ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು?

    ಇಂದು ನಾಗಮಂಗಲದಲ್ಲಿ ಪ್ರಚಾರ ಮಾಡುತ್ತಿರುವ ಯಶ್, ಏಪ್ರಿಲ್ 14 ರಂದು ಕೆ ಆರ್ ಪೇಟೆ, ಏಪ್ರಿಲ್ 15 ರಂದು ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದಾರೆ.

    English summary
    Kannada actor yash has react about Mp shivarame gowda's mayengani comment. shivarame gowda has called mayengani to sumalatha.
    Saturday, April 13, 2019, 15:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X