Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರು ಚಿತ್ರೋತ್ಸವ ವೇದಿಕೆಯಲ್ಲಿ ಸಿಎಂ ಬಳಿ ಬೇಡಿಕೆ ಇಟ್ಟ ನಟ ಯಶ್
12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರು ಚಿತ್ರೋತ್ಸವವನ್ನು ಉದ್ಘಾಟಿಸಿ ಶುಭಕೋರಿದ್ದಾರೆ.
Recommended Video
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ, ಬಾಲಿವುಡ್ ಗಾಯಕ ಸೋನು ನಿಗಮ್, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್, ಕನ್ನಡದ ನಟ ಯಶ್, ಹಾಗೂ ಹಿರಿಯ ನಟಿ ಜಯಪ್ರದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ
ಈ ಸಮಯದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಸಿಎಂ ಯಡಿಯೂರಪ್ಪ ಬಳಿ ಒಂದು ಮನವಿ ಮಾಡಿಕೊಂಡರು. ನಿಮ್ಮನ್ನು ಏನು ಕೇಳುವುದಿಲ್ಲ ನಮಗೆ ಒಂದು ಸ್ಟುಡಿಯೋ ನಿರ್ಮಿಸಿ ಕೊಡಿ ಎಂದರು.
"ಸಿನಿಮಾ ಚಿಕ್ಕವಯಸ್ಸಿನಲ್ಲಿಯೆ ನನ್ನನ್ನು ಆವರಿಸಿಕೊಂಡಿತ್ತು. ಸಿನಿಮಾ ನನಗೆ ಅನ್ನ ಕೊಟ್ಟಿದೆ, ಸಿನಿಮಾ ನನಗೆ ಸ್ಫೂರ್ತಿ ಕೊಟ್ಟಿದೆ. ಸಮಾಜದಲ್ಲಿ ಒಂದು ಸ್ಥಾನ ಕೊಟ್ಟಿದೆ, ಅಂತ ಸಿನಿಮಾವನ್ನು ಎಲ್ಲರು ಸೆಲೆಬ್ರೇಟ್ ಮಾಡೋಣ. ಮುಖ್ಯ ಮಂತ್ರಿಗಳಿಗೆ ನನ್ನದೊಂದು ಮನವಿ. ದೊಡ್ಡ ಕನಸಿದೆ ನಮಗೆ ಸ್ಟುಡಿಯೋ ಕಟ್ಟಿಸಿ ಕೊಡಿ. ಅಲ್ಲಿ ಇಲ್ಲಿ, ಅಷ್ಟು ಎಕರೆ ಇಷ್ಟು ಎಕರೆ ಎನ್ನುತ್ತ ಹೋಗುತ್ತನೆ ಇದೆ" ಎಂದರು.
"ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಅದ್ಯಾವುದೊ ಸಿಸ್ಟಮ್ ಗೆ ಹೊಂದಿಕೊಳ್ಳಬೇಕು. ಇಲ್ಲೆ ಸ್ಟುಡಿಯೋ ಕೊಡಿ ನಮಗೆ. ಟ್ಯಾಕ್ಸ್ ರೂಪದಲ್ಲಿ ಎಷ್ಟೋ ಪಾವಾಸ್ ಕೊಡುತ್ತಿವಿ ನಿಮಗೆ. ಇದರಿಂದ ಇಡೀ ಉದ್ಯಮ ಬೆಳೆಯುತ್ತೆ. 70ರ ದಶಕದಲ್ಲಿ ಕನ್ನಡ ಚಿತ್ರದಲ್ಲಿ ಒಂದು ಯುಗ ಅಂತ ಹೇಳಿದ್ರಲ್ಲ, ಹಾಗೆ ಕೆಲಸ ಮಾಡುವಂತ ಹುಡುಗರು ಇಲ್ಲೂ ಇದ್ದಾರೆ. ಅವರಿಗೆ ಶಕ್ತಿ ತುಂಬ ಬೇಕು" ಎಂದು ಹೇಳಿದ್ದರು.
"ಅಂದು ಚೆನ್ನೈ ಸಿನಿಮಾ ಕೆಲಸಗಳು ನಡಿಯುತ್ತಿತ್ತು. ಅಲ್ಲಗೆ ಹೋಗಿ ಎಲ್ಲರು ಕೆಲಸ ಮಾಡಿ ಕಲಿಯುತ್ತಿದ್ದರು. ಈಗ ಎಲ್ಲರು ಏಕಲವ್ಯ ಆಗಿದ್ದಾರೆ. ಎಲ್ಲೋ ನೋಡಿ ಕಲಿತು ಬೇರೆಯವರ ಜೊತೆ ಸ್ಪರ್ಧೆ ಮಾಡುತ್ತೀವಿ. ಅವರಿಗೆ ಸ್ವಲ್ಪ ಶಕ್ತಿ ಕೊಡಿ. ಇನ್ಸ್ಟಿಟ್ಯೂಷನ್, ಎಜುಕೇಶನ್ ಕೊಡಿ. ಆಗ ಕನ್ನಡಿಗರು ಸಿನಿಮಾರಂಗ ಆಳುತ್ತಾರೆ. ಇದು ನನ್ನ ಮನವಿ" ಎಂದರು.
ಫೆಬ್ರವರಿ 26 ರಿಂದ ಮಾರ್ಚ್ 4ರ ವರೆಗೂ ಸುಮಾರು 200 ಚಿತ್ರಗಳು ಪ್ರದರ್ಶನವಾಗಲಿದೆ. ಒರೆಯಾನ್ ಮಾಲ್, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘದ ರಾಜ್ ಕುಮಾರ್ ಭವನ, ಸುಚಿತ್ರ ಫಿಲಂ ಸಿಟಿಯಲ್ಲಿ ಸಿನಿಮಾಗಳು ಪ್ರದರ್ಶನವಾಗಲಿದೆ.