twitter
    For Quick Alerts
    ALLOW NOTIFICATIONS  
    For Daily Alerts

    ಯಶ್ ತಂಡ ಗೆದ್ರೆ ಎಲ್ಲ ಪಕ್ಕಾ, ಸೋತ್ರೆ ಎಲ್ಲ ಉಲ್ಟಾ ಪಲ್ಟಾ.!

    By Bharath Kumar
    |

    ಕನ್ನಡ ಚಲನಚಿತ್ರ ಕಪ್ ಟೂರ್ನಿ ಮೊದಲ ದಿನ ಯಶಸ್ವಿಯಾಗಿ ಮುಗಿದಿದೆ. ಆಡಿದ ಎರಡು ಪಂದ್ಯಗಳನ್ನ ಗೆದ್ದ ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದ 'ಒಡೆಯರ್ ಚಾರ್ಜರ್ಸ್' ತಂಡ ಈಗಾಗಲೇ ಫಿನಾಲೆ ತಲುಪಿದೆ.

    ಶಿವರಾಜ್ ಕುಮಾರ್ ಅವರ 'ವಿಜಯನಗರ ಪೆಟ್ರಿಯಾಟ್ಸ್' ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನ ಗೆದ್ದು ಉಳಿದವರ ಫಲಿತಾಂಶಕ್ಕಾಗಿ ಕಾಯುತ್ತಿದೆ. ಇನ್ನು ಉಪೇಂದ್ರ ಮತ್ತು ಪುನೀತ್ ತಂಡಗಳು ತಲಾ ಒಂದು ಪಂದ್ಯ ಸೋತಿದ್ದು, ಇಂದು ಎರಡನೇ ಪಂದ್ಯಗಳನ್ನ ಆಡಲಿದೆ.

    ಫೈನಲ್ ಹಂತ ತಲುಪಿದ ಮೊದಲ ತಂಡವಾದ ಗಣೇಶ್ ಟೀಂ ಫೈನಲ್ ಹಂತ ತಲುಪಿದ ಮೊದಲ ತಂಡವಾದ ಗಣೇಶ್ ಟೀಂ

    ಇಂದಿನ ಮೊದಲ ಪಂದ್ಯ ಪುನೀತ್ ರಾಜ್ ಕುಮಾರ್ ಅವರ 'ಗಂಗಾ ವಾರಿಯರ್ಸ್' ಮತ್ತು ಯಶ್ ಅವರ 'ರಾಷ್ಟ್ರಕೂಟ ಪ್ಯಾಂಥರ್ಸ್'. ಈ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ತಂಡ ಪಂದ್ಯ ಗೆದ್ದರೇ ಅಲ್ಲಿಗೆ ಫೈನಲ್ ಯಾರು ಎಂಬುದು ಅಲ್ಲೇ ನಿರ್ಣಯವಾಗಲಿದೆ. ಒಂದು ವೇಳೆ ಯಶ್ ತಂಡ ಸೋತರೆ ಉಳಿದ ತಂಡಗಳ ಫೈನಲ್ ಆಸೆ ಜೀವಂತವಾಗಲಿದೆ. ಪೂರ್ತಿ ವಿವರಣೆ ತಿಳಿಯಲು ಮುಂದೆ ಓದಿ....

    ಗಣೇಶ್ ಟೀಂ ಸೇಫ್

    ಗಣೇಶ್ ಟೀಂ ಸೇಫ್

    ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದ ಒಡೆಯರ್ ಚಾರ್ಜರ್ಸ್ ತಂಡ ಆಡಿದ ಎರಡರಲ್ಲಿ ಎರಡು ಗೆದ್ದಿದೆ. ಅಲ್ಲಿಗೆ ಗಣೇಶ್ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಾಗಿದೆ. ಉಳಿದ ಐದು ತಂಡಗಲ್ಲಿ ಫೈನಲ್ ಗೆ ಪ್ರವೇಶ ಪಡೆಯುವ ಮತ್ತೊಂದು ಟೀಂ ಯಾವುದು ಎಂಬುದು ಈಗ ಕುತೂಹಲ.

    ಲಾಸ್ಟ್ ಬಾಲ್ ನಲ್ಲಿ ಶಿವಣ್ಣನ ತಂಡವನ್ನು ಸೋಲಿಸಿದ ರಾಜಾಹುಲಿ ಯಶ್ಲಾಸ್ಟ್ ಬಾಲ್ ನಲ್ಲಿ ಶಿವಣ್ಣನ ತಂಡವನ್ನು ಸೋಲಿಸಿದ ರಾಜಾಹುಲಿ ಯಶ್

    ರಾಕಿಂಗ್ ಸ್ಟಾರ್ ಗೆ ಹೆಚ್ಚಿದ ಅವಕಾಶ

    ರಾಕಿಂಗ್ ಸ್ಟಾರ್ ಗೆ ಹೆಚ್ಚಿದ ಅವಕಾಶ

    ಸದ್ಯದ ಅಂಕಪಟ್ಟಿಯನ್ನ ಗಮನಿಸಿದ್ರೆ, ರಾಕಿಂಗ್ ಸ್ಟಾರ್ ಯಶ್ ಅವರ 'ರಾಷ್ಟ್ರಕೂಟ ಪ್ಯಾಂಥರ್ಸ್' ತಂಡಕ್ಕೆ ಫೈನಲ್ ಹೋಗುವ ಹೆಚ್ಚು ಅವಕಾಶವಿದೆ. ಯಾಕಂದ್ರೆ ಆಡಿದ ಒಂದು ಪಂದ್ಯದಲ್ಲಿ ಗೆದಿದ್ದಾರೆ. ಈಗ ಎರಡನೇ ಪಂದ್ಯ ಗೆದ್ದರೇ ಸುಲಭವಾಗಿ ಫೈನಲ್ ಗೆ ಲಗ್ಗೆಯಿಡ್ತಾರೆ. ಉಳಿದ ತಂಡಗಳೆಲ್ಲವೂ ಮನೆಗೆ ಹೋಗುತ್ತೆ.

    'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.!'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.!

    ಒಂದು ವೇಳೆ ಯಶ್ ಸೋತರೆ....

    ಒಂದು ವೇಳೆ ಯಶ್ ಸೋತರೆ....

    ಇಂದು ಮೊದಲ ಪಂದ್ಯ ಯಶ್ ಮತ್ತು ಪುನೀತ್ ರಾಜ್ ಕುಮಾರ್ ತಂಡಗಳ ನಡುವೆ ಇದೆ. ಯಶ್ ಗೆದ್ರೆ ಎಲ್ಲವೂ ಓಕೆ. ಒಂದು ವೇಳೆ ಯಶ್ ತಂಡ ಸೋತರೆ, ಉಳಿದ ತಂಡಗಳಿಗೆ ಫೈನಲ್ ಕನಸು ಜೀವಂತವಾಗುತ್ತೆ. ಎರಡನೇ ಪಂದ್ಯ ಸುದೀಪ್ ಮತ್ತು ಉಪೇಂದ್ರ ನಡುವೆ ನಡೆಯಲಿದೆ. ಇಲ್ಲಿ ಈ ಎರಡು ತಂಡಗಳು ಮೊದಲ ಪಂದ್ಯವನ್ನ ಸೋತಿವೆ. ಈ ಪಂದ್ಯದಲ್ಲಿ ಯಾರೇ ಗೆದ್ದರೂ ಅತಿ ಹೆಚ್ಚು ಸರಾಸರಿಯಲ್ಲಿ (ರನ್ ರೇಟ್) ಗೆಲ್ಲಬೇಕಾಗುತ್ತೆ. ಆಗ ಉಪ್ಪಿ ಅಥವಾ ಸುದೀಪ್ ತಂಡದಲ್ಲಿ ಅತಿ ಹೆಚ್ಚು ಸರಾಸರಿಯಲ್ಲಿ ಗೆದ್ದವರು ಫೈನಲ್ ಹೋಗ್ತಾರೆ.

    ರೋಚಕ ಪಂದ್ಯದ ಕೊನೆಯ ಬಾಲ್ ನಲ್ಲಿ ಗೆದ್ದ ಗಣೇಶ್ ತಂಡರೋಚಕ ಪಂದ್ಯದ ಕೊನೆಯ ಬಾಲ್ ನಲ್ಲಿ ಗೆದ್ದ ಗಣೇಶ್ ತಂಡ

    ಉಳಿದವರಿಗೂ ಒಂದು ಆಸೆ

    ಉಳಿದವರಿಗೂ ಒಂದು ಆಸೆ

    ಸುದೀಪ್ ಮತ್ತು ಉಪೇಂದ್ರ ಅವರ ನಡುವಿನ ಪಂದ್ಯದಲ್ಲಿ ಉತ್ತಮ ಸರಾಸರಿ ಆಟ ಪ್ರದರ್ಶನವಾಗಿಲ್ಲ ಅಂದ್ರೆ, ಅವಕಾಶ ಶಿವಣ್ಣ ಮತ್ತು ಯಶ್ ತಂಡಗಳ ಕಡೆ ಹೋಗುತ್ತೆ. (ಇದು ಅಪರೂಪ, ಬಹುತೇಕ ಅಸಾಧ್ಯ) ಆಡಿರುವ ಎರಡು ಪಂದ್ಯದಲ್ಲಿ ಒಂದು ಸೋತು, ಒಂದು ಗೆದ್ದಿರುವ ಶಿವಣ್ಣ ತಂಡಕ್ಕೂ ಒಂದು ಸಣ್ಣ ಅವಕಾಶ ಇದೆ ಎನ್ನುವುದು ಮರೆಯುವಂತಿಲ್ಲ. ಅಲ್ಲಿಗೆ ಯಶ್ ತಂಡ ಹಾಗೂ ಪುನೀತ್ ತಂಡವನ್ನ ಕಡೆಗಣಿಸುವಂತಿಲ್ಲ. ರನ್ ರೇಟ್ ಆಧಾರದ ಮೇಲೆ ಅವರಿಗೂ ಅವಕಾಶವಿರಬಹುದು.

    ಕೆಸಿಸಿ ಪಟ್ಟಿ : ಇಂದಿನಿಂದ ಶುರು ಸ್ಟಾರ್ ನಟರ ಕ್ರಿಕೆಟ್ ಹಣಾಹಣಿಕೆಸಿಸಿ ಪಟ್ಟಿ : ಇಂದಿನಿಂದ ಶುರು ಸ್ಟಾರ್ ನಟರ ಕ್ರಿಕೆಟ್ ಹಣಾಹಣಿ

    ಮೊದಲ ಪಂದ್ಯವೇ ನಿರ್ಣಾಯಕ

    ಮೊದಲ ಪಂದ್ಯವೇ ನಿರ್ಣಾಯಕ

    ಹೀಗಾಗಿ, ಇಂದು ಮಧ್ಯಾಹ್ನ ನಡೆಯಲಿರುವ ಮೊದಲ ಪಂದ್ಯವೇ ತುಂಬಾ ನಿರ್ಣಾಯಕ. ಪುನೀತ್ ರಾಜ್ ಕುಮಾರ್ (ಗಂಗಾ ವಾರಿಯರ್ಸ್) ಮತ್ತು ರಾಕಿಂಗ್ ಸ್ಟಾರ್ ಯಶ್ (ರಾಷ್ಟ್ರಕೂಟ ಪ್ಯಾಂಥರ್ಸ್) ನಡುವೆ 2 ಗಂಟೆಗೆ ಪಂದ್ಯ ನಡೆಯಲಿದೆ.

    English summary
    Kcc season 2 Day 2: today first match between Rashtrakuta panthers (Rocking star yash) vs Ganga warriors (Puneeth rajkumar) at 2 pm.
    Sunday, September 9, 2018, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X