Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಪ್ರಕರಣ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ತೀನಿ ಎಂದ ರಾಕಿಂಗ್ ಸ್ಟಾರ್
Recommended Video
''ನಿರ್ದೇಶಕರು ಕಥೆ ಮಾಡಿಕೊಂಡು ಬರಬೇಕು. ಆ ರೀತಿಯ ಅವಕಾಶ ಸಿಕ್ಕರೆ ಖಂಡಿತ ಅವರ ಜೊತೆಗೆ ಸಿನಿಮಾ ಮಾಡುತ್ತೇನೆ.'' ಎಂದು ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ನಿನ್ನೆ ನಟ ಯಶ್ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಸಿನಿಮಾವನ್ನು ನೋಡಿದರು. ಚಿತ್ರ ವೀಕ್ಷಿಸಿ ಸಿಕ್ಕಾಪಟ್ಟೆ ಖುಷಿಯಾದ ಯಶ್ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತನ್ನು ಆಡಿದರು. ತಮಗೆ ತುಂಬ ಇಷ್ಟ ಆದ ಅಂಶಗಳನ್ನು ವಿವರಿಸಿದರು.
ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'
ಈಗಾಗಲೇ ನಟ ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಅನೇಕರು ಸಿನಿಮಾ ಬಗ್ಗೆ ಮಾತನಾಡಿದ್ದು, ಈಗ ಯಶ್ ಕೂಡ ಶಾಲೆ ಮಕ್ಕಳನ್ನು ಹೊಗಳಿದ್ದಾರೆ. ಈ ವೇಳೆ ರಿಷಬ್ ಜೊತೆಗೆ ಸಿನಿಮಾ ಮಾಡುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಮುಂದೆ ಓದಿ...
ಮಾತೇ ಬರುತ್ತಿಲ್ಲ ಅಷ್ಟೊಂದು ಖುಷಿಯಾಗಿದೆ
''ಸಿನಿಮಾ ನೋಡಿ ನನಗೆ ಮಾತೇ ಬರುತ್ತಿಲ್ಲ ಅಷ್ಟೊಂದು ಖುಷಿಯಾಗಿದೆ. ಚಪ್ಪಾಳೆ, ಶಿಳ್ಳೆ ಹೊಡೆದುಕೊಂಡು, ಕುಣಿದಾಡುಕೊಂಡು ಈ ಸಿನಿಮಾ ನೋಡಿದ್ದೇನೆ. ಈ ರೀತಿಯ ಒಂದು ಸಿನಿಮಾ ಮಾಡಬೇಕು ಎಂದರೆ ಸಿನಿಮಾ ಮೇಲೆ ಹಾಗೂ ಭಾಷೆಯ ಮೇಲೆ ಅಭಿಮಾನ, ಪ್ರೀತಿ ಇರಬೇಕು. ಅವರ ಮೇಲೆ ನನಗೆ ಇನ್ನೂ ಗೌರವ ಬಂದಿದೆ. ಹ್ಯಾಟ್ಸ್ ಆಫ್.'' - ಯಶ್, ನಟ
ಅನಂತ್ ಸರ್ ಅದ್ಭುತವಾಗಿ ನಟಿಸಿದ್ದಾರೆ
''ಕಾಸರಗೋಡಿನ ಸಂಸೃತಿ, ಬಾಲ್ಯ ಎಲ್ಲವನ್ನು ಅವರು ತೋರಿಸಿರುವ ರೀತಿ ಇಷ್ಟ ಅಯ್ತು. ಬಾಲ್ಯದ ದೃಷ್ಟಿಕೋನದಿಂದ ಸಿನಿಮಾ ತೋರಿಸಿದ್ದಾರೆ. ಸಾಕಷ್ಟು ವಿಷಯಗಳು ಸಿನಿಮಾದಲ್ಲಿ ಇದೆ. ಅನಂತ್ ಸರ್ ಅದ್ಭುತವಾಗಿ ನಟಿಸಿದ್ದಾರೆ. ನಮ್ಮ ಭಾಷೆಯಲ್ಲಿ ಈ ರೀತಿಯ ಸಿನಿಮಾ ಬಂದಿದೆ ಎಂದು ಹೆಮ್ಮೆ ಪಡಬೇಕು''. - ಯಶ್, ನಟ
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಗೆ ಹೊರಟ 'ರಾಜಾಹುಲಿ'
ಕಥೆ ಹೇಳಲು ತುಂಬ ಚೆನ್ನಾಗಿ ಬರುತ್ತದೆ
''ಅವರು ನಿರ್ಧಾರ ಮಾಡಬೇಕು. ನಿರ್ದೇಶಕರು ಕಥೆ ಮಾಡಿಕೊಂಡು ಬರಬೇಕು. ಆ ರೀತಿಯ ಅವಕಾಶ ಸಿಕ್ಕರೆ ಖಂಡಿತ ಅವರ ಜೊತೆಗೆ ಸಿನಿಮಾ ಮಾಡುತ್ತೇನೆ. ಅವರಿಗೆ ಕಥೆ ಹೇಳಲು ತುಂಬ ಚೆನ್ನಾಗಿ ಬರುತ್ತದೆ. ಈ ರೀತಿ ಕಥೆ ಹೇಳಿ ಗೆದ್ದಿದ್ದಾರೆ ಎಂದರೆ, ಅವರು ಏನು ಬೇಕಾದರು ಮಾಡಬಹುದು'' - ಯಶ್, ನಟ
ದೇಶ ಮಟ್ಟದಲ್ಲಿ ಹೆಸರು ಮಾಡಲಿ
''ನನಗೆ ಸಿನಿಮಾ ನೋಡಿ ತುಂಬ ಖುಷಿಯಾಯ್ತು. ಇದು ಒಂದು ದೊಡ್ಡ ಪ್ರಯತ್ನ. ನಮ್ಮ ಸಿನಿಮಾವನ್ನು ಬೇರೆ ಭಾಷೆಯವರೂ ನೋಡುವಂತೆ ಮಾಡುವುದಕ್ಕೆ ಈ ರೀತಿಯ ಚಿತ್ರಗಳು ಕಾರಣ ಆಗುತ್ತದೆ. ಅವರು (ರಿಷಬ್ ಶೆಟ್ಟಿ) ಇನ್ನು ಒಳ್ಳೆಯ ಸಿನಿಮಾಗಳನ್ನ ಮಾಡಲಿ. ದೇಶ ಮಟ್ಟದಲ್ಲಿ ಹೆಸರು ಮಾಡಲಿ.'' - ಯಶ್, ನಟ