Don't Miss!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- News ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸೀರೆ' ಹಿಂದೆ ಹೊರಟ ಯೋಗರಾಜ್ ಭಟ್, ಶಶಾಂಕ್
ಸೀರೆಲಿ ಹುಡುಗೀರ ನೋಡಲೇಬಾರದು.. ನಿಲಲ್ಲ ಟೆಂಪ್ರೆಚರು.. ಎಂದು ಹಾಡು ಬರೆದಿದ್ದ ಯೋಗರಾಜ್ ಭಟ್ ಇದೀಗ 'ಸೀರೆ' ಹಿಂದೆ ಹೊರಟಿದ್ದಾರೆ. ಅವರೊಬ್ಬರೆ ಅಲ್ಲ ಕನ್ನಡದ ಇನ್ನೊಬ್ಬ ನಿರ್ದೇಶಕ ಶಶಾಂಕ್ ಕೂಡ ಅವರ ಜೊತೆಗೆ ಸೇರಿದ್ದಾರೆ.
ಅಂದಹಾಗೆ, ಶಶಾಂಕ್ ಹಾಗೂ ಯೋಗರಾಜ್ ಭಟ್ ಸೇರಿ ಒಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ, ಈ ಸಿನಿಮಾಗೆ ನಿರ್ಮಾಣ ಸಂಖ್ಯೆ 3 ಎಂದು ಕರೆಯಲಾಗಿತ್ತು. ಆದರೆ, ಈ ಸಿನಿಮಾಗೆ ಈಗ ಟೈಟಲ್ ಫಿಕ್ಸ್ ಆಗಿದೆ. ಸಿನಿಮಾಗೆ 'ಸೀರೆ' ಎಂದು ನಾಮಕರಣ ಮಾಡಲಾಗಿದೆ.
ಒಂದಾದ ಯೋಗರಾಜ್ ಭಟ್-ಶಶಾಂಕ್: ಇಬ್ಬರು ಡೈರೆಕ್ಟರ್ ಗಳ ಗರಡಿಯಲ್ಲಿ ರಿಷಿ.!
ಈ ಸಿನಿಮಾಗೆ ರಿಷಿ ನಾಯಕನಾಗಿದ್ದಾರೆ. ಕೈ ತುಂಬ ಸಿನಿಮಾ ಅವಕಾಶ ಹೊಂದಿರುವ ಈ ಪ್ರತಿಭಾವಂತ ನಟನ ಚಿತ್ರಕ್ಕೆ ಇಬ್ಬರು ನಿರ್ದೇಶಕರು ಬಂಡವಾಳ ಹಾಕಿದ್ದಾರೆ. ಯೋಗರಾಜ್ ಭಟ್ ಜೊತೆಗೆ 'ಗಾಳಿಪಟ 2' ಸಿನಿಮಾದಲ್ಲಿ ರಿಷಿ ನಟಿಸಬೇಕಾಗಿತ್ತು ಆದರೆ, ಕೊನೆಯ ಕ್ಷಣಗಳ ಬದಲಾವಣೆಯಿಂದ ರಿಷಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಯೋಗರಾಜ್ ಭಟ್ ಹಾಗೂ ಶಶಾಂಕ್ ನಿರ್ಮಾಣದ ಸಿನಿಮಾವನ್ನು ಮೋಹನ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ಯೋಗರಾಜ್ ಭಟ್ ಜೊತೆಗೆ ಕೆಲಸ ಮಾಡುತ್ತಿದ್ದರು. ಸಿನಿಮಾಗೆ 'ಸೀರೆ' ಎಂದು ಹೆಸರಿಟ್ಟಿದ್ದು, ಆದರೆ, ಸೀರೆ ಉಡುವ ನಟಿ ಯಾರು ಎನ್ನುವುದನ್ನು ಇನ್ನು ಬಹಿರಂಗ ಪಡಿಸಿಲ್ಲ.
ಯೋಗರಾಜ್ ಭಟ್ ಸರ್ ನೀವು ಹಾಕೋ 'ಗುಂಡು' ಯಾವುದು?
'ಮುಂಗಾರು ಮಳೆ' ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದು, 'ಮುಂಗಾರು ಮಳೆ 2' ಸಿನಿಮಾಗೆ ಶಶಾಂಕ್ ಡೈರೆಕ್ಷನ್ ಇತ್ತು. ಇದೀಗ 'ಸೀರೆ' ಚಿತ್ರ ಈ ಇಬ್ಬರು ನಿರ್ದೇಶಕರನ್ನು ಒಂದು ಮಾಡಿದೆ.