Don't Miss!
- News ನೇಹಾ ಹತ್ಯೆ: ಶೀಘ್ರವೇ ನ್ಯಾಯದಾನ ಎಂದ ಸಚಿವ: ವಿಶೇಷ ಕೋರ್ಟ್ಗೆ 'ನೇಹಾ' ಹೆಸರಿಡಲು ಮನವಿ
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸೀರೆ' ಹಿಂದೆ ಹೊರಟ ಯೋಗರಾಜ್ ಭಟ್, ಶಶಾಂಕ್
ಸೀರೆಲಿ ಹುಡುಗೀರ ನೋಡಲೇಬಾರದು.. ನಿಲಲ್ಲ ಟೆಂಪ್ರೆಚರು.. ಎಂದು ಹಾಡು ಬರೆದಿದ್ದ ಯೋಗರಾಜ್ ಭಟ್ ಇದೀಗ 'ಸೀರೆ' ಹಿಂದೆ ಹೊರಟಿದ್ದಾರೆ. ಅವರೊಬ್ಬರೆ ಅಲ್ಲ ಕನ್ನಡದ ಇನ್ನೊಬ್ಬ ನಿರ್ದೇಶಕ ಶಶಾಂಕ್ ಕೂಡ ಅವರ ಜೊತೆಗೆ ಸೇರಿದ್ದಾರೆ.
ಅಂದಹಾಗೆ, ಶಶಾಂಕ್ ಹಾಗೂ ಯೋಗರಾಜ್ ಭಟ್ ಸೇರಿ ಒಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ, ಈ ಸಿನಿಮಾಗೆ ನಿರ್ಮಾಣ ಸಂಖ್ಯೆ 3 ಎಂದು ಕರೆಯಲಾಗಿತ್ತು. ಆದರೆ, ಈ ಸಿನಿಮಾಗೆ ಈಗ ಟೈಟಲ್ ಫಿಕ್ಸ್ ಆಗಿದೆ. ಸಿನಿಮಾಗೆ 'ಸೀರೆ' ಎಂದು ನಾಮಕರಣ ಮಾಡಲಾಗಿದೆ.
ಒಂದಾದ ಯೋಗರಾಜ್ ಭಟ್-ಶಶಾಂಕ್: ಇಬ್ಬರು ಡೈರೆಕ್ಟರ್ ಗಳ ಗರಡಿಯಲ್ಲಿ ರಿಷಿ.!
ಈ ಸಿನಿಮಾಗೆ ರಿಷಿ ನಾಯಕನಾಗಿದ್ದಾರೆ. ಕೈ ತುಂಬ ಸಿನಿಮಾ ಅವಕಾಶ ಹೊಂದಿರುವ ಈ ಪ್ರತಿಭಾವಂತ ನಟನ ಚಿತ್ರಕ್ಕೆ ಇಬ್ಬರು ನಿರ್ದೇಶಕರು ಬಂಡವಾಳ ಹಾಕಿದ್ದಾರೆ. ಯೋಗರಾಜ್ ಭಟ್ ಜೊತೆಗೆ 'ಗಾಳಿಪಟ 2' ಸಿನಿಮಾದಲ್ಲಿ ರಿಷಿ ನಟಿಸಬೇಕಾಗಿತ್ತು ಆದರೆ, ಕೊನೆಯ ಕ್ಷಣಗಳ ಬದಲಾವಣೆಯಿಂದ ರಿಷಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಯೋಗರಾಜ್ ಭಟ್ ಹಾಗೂ ಶಶಾಂಕ್ ನಿರ್ಮಾಣದ ಸಿನಿಮಾವನ್ನು ಮೋಹನ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ಯೋಗರಾಜ್ ಭಟ್ ಜೊತೆಗೆ ಕೆಲಸ ಮಾಡುತ್ತಿದ್ದರು. ಸಿನಿಮಾಗೆ 'ಸೀರೆ' ಎಂದು ಹೆಸರಿಟ್ಟಿದ್ದು, ಆದರೆ, ಸೀರೆ ಉಡುವ ನಟಿ ಯಾರು ಎನ್ನುವುದನ್ನು ಇನ್ನು ಬಹಿರಂಗ ಪಡಿಸಿಲ್ಲ.
ಯೋಗರಾಜ್ ಭಟ್ ಸರ್ ನೀವು ಹಾಕೋ 'ಗುಂಡು' ಯಾವುದು?
'ಮುಂಗಾರು ಮಳೆ' ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದು, 'ಮುಂಗಾರು ಮಳೆ 2' ಸಿನಿಮಾಗೆ ಶಶಾಂಕ್ ಡೈರೆಕ್ಷನ್ ಇತ್ತು. ಇದೀಗ 'ಸೀರೆ' ಚಿತ್ರ ಈ ಇಬ್ಬರು ನಿರ್ದೇಶಕರನ್ನು ಒಂದು ಮಾಡಿದೆ.