Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯ ಪ್ರಕಾಶ್ ತಂದೆ ನಿಧನಕ್ಕೆ ಯೋಗರಾಜ್ ಭಟ್ ಸಂತಾಪ
ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ವಿಜಯ ಪ್ರಕಾಶ್ ತಂದೆ ಎಲ್.ರಾಮಶೇಷ (72) ನಿನ್ನೆ (ಭಾನುವಾರ) ವಿಧಿವಶರಾಗಿದ್ದಾರೆ.
ಅನಾರೋಗ್ಯ ದಿಂದ ಬಳಲುತ್ತಿದ್ದ ಅವರನ್ನು ರಾಮಶೇಷ ಅವರನ್ನು 5 ದಿನಗಳ ಹಿಂದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಭಾನುವಾರ ಬೆಳಗ್ಗೆ 5.30ಕ್ಕೆ ವಿಧಿವಶರಾದರು.
ಜನಪ್ರಿಯ ಗಾಯಕ ವಿಜಯ ಪ್ರಕಾಶ್ ತಂದೆ ರಾಮಶೇಷ ನಿಧನ
ವಿಜಯ ಪ್ರಕಾಶ್ ತಂದೆಯ ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ ಟ್ವಿಟ್ಟರ್ ಖಾತೆಯಲ್ಲಿ ಮೂಲಕ ಸಂತಾಪ ಸೂಚಿಸಿದ್ದಾರೆ. ''ಸಾವಲ್ಲ ಅದು ಅವರ ಹುಟ್ಟು, ಶಾಂತಿ ಶಾಂತಿ ಶಾಂತಿ ಹೀ, ಅಪ್ಪಾವ್ರು ಹೋಗಿ ಬರಲಿ ತುಂಬು ಜೀವನ ಅವ್ರದ್ದು, ಚಿರ ಶಾಂತಿ. ಶ್ರೀ ವಿಜಯ್ ಪ್ರಕಾಶ್ ಕುಟುಂಬಕ್ಕೆ ಹನಿ ಕಂಬನಿಯ ಸಾಂತ್ವನ'' ಎಂದು ಟ್ವೀಟ್ ಮಾಡಿದ್ದಾರೆ.
ಗಾಯಕ ವಿಜಯ ಪ್ರಕಾಶ್ ಅಮೇರಿಕಾಕ್ಕೆ ತೆರಳಿದ್ದು ಅಲ್ಲಿಂದ ಆಗಮಿಸಬೇಕಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗೆ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಡದ ತಪ್ಪಲಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವಿಜಯಪ್ರಕಾಶ್ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಸಾವಲ್ಲ ಅದು ಅವರ ಹುಟ್ಟು
— Yogaraj Bhat (@yogarajofficial) April 7, 2019
ಶಾಂತಿ ಶಾಂತಿ ಶಾಂತಿ ಹೀ
ಅಪ್ಪಾವ್ರು ಹೋಗಿ ಬರಲಿ
ತುಂಬು ಜೀವನ ಅವ್ರದ್ದು 🙏
ಚಿರ ಶಾಂತಿ 🙏
ಶ್ರೀ ವಿಜಯ್ ಪ್ರಕಾಶ್ ಕುಟುಂಬಕ್ಕೆ ಹನಿ ಕಂಬನಿಯ ಸಾಂತ್ವನ 😥@rvijayprakash pic.twitter.com/PRDx9cYWGh
ಯೋಗರಾಜ್ ಭಟ್ ಅವರ ಅನೇಕ ಸಿನಿಮಾಗಳ ಹಾಡಿಗೆ ವಿಜಯ ಪ್ರಕಾಶ್ ಧ್ವನಿ ನೀಡಿದ್ದಾರೆ.