Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆರೆಯಿಂದ ತಲೆಕೆಳಗಾದ 'ಗಾಳಿಪಟ' ಯೋಜನೆ: ಟೆನ್ಷನ್ ನಲ್ಲಿ ಯೋಗರಾಜ್ ಭಟ್
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಯೋಗಜಾರ್ ಭಟ್ ಸಾರಥ್ಯದಲ್ಲಿ ಗಾಳಿಪಟ-2 ಸಿನಿಮಾ ಸೆಟ್ಟೇರಿ ಅನೇಕ ದಿನಗಳೆ ಆಗಿದೆ. ಭಟ್ರು ಅಂದುಕೊಂಡ ಪ್ಲಾನ್ ಪ್ರಕಾರವೆ ಆಗಿದ್ರೆ ಈಗಾಗಲೆ ಚಿತ್ರೀಕರಣ ಭರ್ಜರಿಯಾಗಿ ನಡೆಯಬೇಕಿತ್ತು. ಆದ್ರೀಗ ಚಿತ್ರೀಕರಣ ತಡವಾದ ಕಾರಣ ಭಟ್ರು ಟೆನ್ಷನ್ ನಲ್ಲಿ ಇದ್ದಾರೆ..
ಗಾಳಿಪಟ-2 ಚಿತ್ರೀಕರಣ ಮಾಡಬೇಕೆಂದು ಕೊಂಡಿದ್ದ ಪ್ರದೇಶಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಹಾಗಾಗಿ ಚಿತ್ರತಂಡ ಹಾಕಿಕೊಂಡಿದ್ದ ವೇಳಪಟ್ಟಿ ಈಗ ತಲೆಕೆಳಗಾಗಿದೆ. ಇದರಿಂದ ಮಳೆಗಾಗಿಯೆ ಕಾದುಕುಳಿತು ಚಿತ್ರೀಕರಣಕ್ಕೆ ಸಿದ್ಧವಾಗಿದ್ದ ಭಟ್ಟರು ಚಿಂತೆಯಲ್ಲಿದ್ದಾರೆ. ತಿಂಗಳುಗಳಿಂದ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕ್ಕಿದ್ದ ಭಟ್ಟರ ಶ್ರಮ ನೀರಲ್ಲಿ ಹೋಮ ಮಾಡಿದ ಹಾಗಾಗಿದೆ. ಈಗ ಮತ್ತೆ ಹೊಸದಾಗಿ ವೇಳಪಟ್ಟಿ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ ಭಟ್ರು ಮತ್ತು ತಂಡ.
'ಗಾಳಿಪಟ 2' ನಾಯಕರ ಬದಲಾವಣೆ : ಯೋಗರಾಜ್ ಭಟ್ ಸ್ಪಷ್ಟನೆ
ಗಾಳಿಪಟ-2 ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಗಾಳಿಪಟ ಮೊದಲ ಭಾಗ ಕೂಡ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿತ್ತು. ಅದೇ ರೀತಿ ಗಾಳಿಪಟ-2 ಚಿತ್ರೀಕರಣ ಪ್ರಾರಂಭಕ್ಕೂ ಮೊದಲೆ ನಿರೀಕ್ಷೆ ಇಮ್ಮಡಿಗೊಳಿಸಿದೆ. ಮೊದಲ ಭಾಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದಿಗಂತ್ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿತ್ತು.
ಈಗ ಮತ್ತೆ ಗಾಳಿಪಟ-2 ಮೂಲಕ ಒಟ್ಟಿಗೆ ಬರುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಗಣೇಶ್ ಮತ್ತು ದಿಗಂತ್ ಜೋಡಿಗೆ ಬೇಡಿಕೆ ಹೆಚ್ಚಾದ ಕಾರಣ ಪಾರ್ಟ್-2ಗೂ ಹಿಟ್ ಜೋಡಿಯನ್ನೆ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ. ಈ ಜೋಡಿಯ ಜೊತೆ ಲೂಸಿಯ ಖ್ಯಾತಿಯ ಪವನ್ ಕುಮಾರ್ ಸೇರಿಕೊಂಡಿದ್ದಾರೆ. ಭಟ್ರು ಹೊಸ ಯೋಜನೆ ಸಿದ್ಧವಾಗುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲಿದೆ ಚಿತ್ರತಂಡ.