'ಗಾಳಿಪಟ 2' ನಾಯಕರ ಬದಲಾವಣೆ : ಯೋಗರಾಜ್ ಭಟ್ ಸ್ಪಷ್ಟನೆ
'ಗಾಳಿಪಟ 2' ಸಿನಿಮಾದ ನಾಯಕರು ಬದಲಾಗಿದ್ದಾರೆ. ಶರಣ್ ಹಾಗೂ ರಿಷಿ ಬದಲಿಗೆ ಗಣೇಶ್ ಹಾಗೂ ದಿಗಂತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ 'ಗಾಳಿಪಟ' ಚಿತ್ರದ ನಾಯಕರೇ ಇಲ್ಲಿಯೂ ಮುಂದುವರೆಯಲಿದ್ದಾರೆ.
ನಾಯಕರ ಬದಲಾವಣೆ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಸ್ಪಷ್ಟನೆ ನೀಡಿದ್ದಾರೆ. ಚಿತ್ರಕ್ಕೆ ನಟ ಗಣೇಶ್ ಪಾದಾರ್ಪಣೆ ಮಾಡಿದ್ದಾರೆ, ಅವರ ಜೊತೆಗೆ ದಿಗಂತ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಮೊದಲ 'ಗಾಳಿಪಟ' ಸಿನಿಮಾದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಗೌರವ ಪಾತ್ರದಲ್ಲಿ ನಟಿಸಲಿದ್ದಾರಂತೆ. ಉಳಿದಂತೆ, ರಂಗಾಯಣ ರಘು ಹಾಗೂ ಅನಂತ್ ನಾಗ್ ಚಿತ್ರದ ತಾರಬಳಗದಲ್ಲಿ ಇದ್ದಾರೆ.

'ಗಾಳಿಪಟ 2' ಸಿನಿಮಾದ ಬದಲಿಗೆ, ನಟ ಶರಣ್ ಗೆ ಒಂದು ಸಿನಿಮಾ ಹಾಗೂ ರಿಷಿಗೆ ಮತ್ತೊಂದು ಸಿನಿಮಾವನ್ನು ಯೋಗರಾಜ್ ಭಟ್ ಮಾಡುತ್ತಿದ್ದಾರೆ. ಅಲ್ಲದೆ, 'ಗಾಳಿಪಟ 2' ಸಿನಿಮಾವನ್ನು ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆಯಂತೆ.
ಈ ಹಿಂದೆ ಅದಿತಿ ಪ್ರಭುದೇವ, ಸೊನಾಲ್ ಹಾಗೂ ಶರ್ಮಿಳಾ ಮಾಂಡ್ರೆ ಚಿತ್ರದ ನಾಯಕಿಯರಾಗಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ, ಈಗ ನಾಯಕರ ಬದಲಾವಣೆಗೆ ತಕ್ಕ ಹಾಗೆ ನಾಯಕಿಯರೂ ಬದಲಾಗುತ್ತಾರೆಯೇ ಎನ್ನುವ ಪ್ರಶ್ನೆ ಇದೆ.


Click it and Unblock the Notifications











