Don't Miss!
- News ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಕೋಟಿ ಒಡೆಯ: ಒಟ್ಟು ಆಸ್ತಿ ಎಷ್ಟು ಗೊತ್ತಾ?
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಗಿಯದ 'ದನಕಾಯೋರ' ರಗಳೆ: ಕೋರ್ಟ್ ಮೆಟ್ಟಿಲೇರಿದ ಭಟ್ಟರು
ನಿರ್ದೇಶಕ ಯೋಗರಾಜ್ ಭಟ್ ಮತ್ತು 'ದನಕಾಯೋನು' ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಡುವಿನ ಸಂಭಾವನೆಯ ಕಿರಿಕ್ ಇನ್ನು ಮುಗಿದಿಲ್ಲ.
'ಭರ್ಜರಿ' ಚಿತ್ರದ ರಿಲೀಸ್ ವೇಳೆ ಶ್ರೀನಿವಾಸ್ ಅವರು ನೀಡಿದ್ದ ಚೆಕ್ ಗಳು ಬೌನ್ಸ್ ಆಗಿರುವ ಕಾರಣ ಭಟ್ಟರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಹಿಂದೆ ಯೋಗರಾಜ್ ಮತ್ತು ಶ್ರೀನಿವಾಸ್ ಅವರನ್ನ ಕರೆಯಿಸಿ ವಾಣಿಜ್ಯ ಮಂಡಳಿಯಲ್ಲಿ ಮಾತುಕತೆ ಮೂಲಕ ಸಂಭಾವನೆ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದ್ರೆ, ನಿರ್ಮಾಪಕರ ಸಂಭಾವನೆ ನೀಡದ ಕಾರಣ ಅಂತಿಮವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಘಟನೆಯ ಪೂರ್ತಿ ವಿವರ ಮುಂದೆ ಓದಿ....
'ದನ ಕಾಯೋನು' ಚಿತ್ರದ ಕಿರಿಕ್
ದುನಿಯಾ ವಿಜಯ್ ಅಭಿನಯಿಸಿ, ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದ 'ದನ ಕಾಯೋನು' ಚಿತ್ರಕ್ಕಾಗಿ ತಮಗೆ ಬರಬೇಕಿದ್ದ ಸಂಭಾವನೆಯನ್ನ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇನ್ನೂ ನೀಡದ ಕಾರಣ ಯೋಗರಾಜ್ ಭಟ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಂಭಾವನೆ ಕಿರಿಕ್: ಕೋರ್ಟ್ ಮೆಟ್ಟಿಲೇರಿದ ನಿರ್ದೇಶಕ ಯೋಗರಾಜ್ ಭಟ್
23 ಲಕ್ಷ ಹಣ ಕೊಡಬೇಕಂತೆ
ನಿರ್ಮಾಪಕರಿಂದ ತಮಗೆ ಬರಬೇಕಾಗಿರುವ 23 ಲಕ್ಷ ಹಣವನ್ನ ಕೊಡಿಸಿ ಎಂದು ಯೋಗರಾಜ್ ಭಟ್ ಅವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
'ಭರ್ಜರಿ'ಗಿದ್ದ ಭಯ ಮಾಯ: ಇನ್ನೇನಿದ್ರು 'ಘರ್ಜನೆ' ಮಾತ್ರ ಬಾಕಿ
ಚೆಕ್ ಬೌನ್ಸ್ ಆಗಿದೆ
ಈ ಹಿಂದೆ 'ಭರ್ಜರಿ' ಚಿತ್ರದ ವೇಳೆ ಶ್ರೀನಿವಾಸ ಅವರು ಭಟ್ ಅವರಿಗೆ ಮೂರು ಚೆಕ್ ನೀಡಿದ್ದರು. ಆದ್ರೆ, ಚೆಕ್ ಬೌನ್ಸ್ ಆಗಿರುವ ಹಿನ್ನೆಲೆ ಭಟ್ಟರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ವಿಚಾರಣೆ ನಡೆಯಲಿದೆ
ಯೋಗರಾಜ್ ಭಟ್ ಅವರು ದಾಖಲಿಸಿರುವ ದೂರಿನ ವಿಚಾರಣೆ ನವೆಂಬರ್ 22 ರಂದು ಮ್ಯಾಜಿಸ್ಟ್ರಿಟ್ ಕೋರ್ಟ್ ನಲ್ಲಿ ನಡೆಯಲಿದೆ. ವಿಚಾರಣೆ ಬಳಿಕ ಕೋರ್ಟ್ ಅದೇ ದಿನ ತೀರ್ಪು ನೀಡುವ ಸಾಧ್ಯತೆ ಇದೆ.