Don't Miss!
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಾರೋ ನೀನು ಮಾನವ, ಕೇಳುತಿಹುದು ಕೊರೊನಾ...': ಭಟ್ಟರ ಹಾಡಿನ ಮೋಡಿ
ಕೊರೊನಾ ವೈರಸ್ ಕುರಿತಂತೆ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ಬರೆದಿರುವ 'ಯಾರೋ ನೀನು ಮಾನವ' ಹಾಡು ಶನಿವಾರ ಸಂಜೆ ಬಿಡುಗಡೆಯಾಗಿದ್ದು, ಸಕತ್ ವೈರಲ್ ಆಗಿದೆ.
Recommended Video
ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ವಿಜಯ ಪ್ರಕಾಶ್ ಕಂಠದ ಹಾಡು ಭಾವ ಪೂರ್ಣವಾಗಿ ಮೂಡಿಬಂದಿದೆ. 'ಊರಿಗೂರೇ ಖಾಲಿ ದಾರಿ ತುಂಬಾ ಬೇಲಿ, ತಿಳಿದುಕೊಳ್ಳುವ ಬನ್ನಿ ಬಾನ ಬಣ್ಣ ನೀಲಿ' ಎಂಬ ಸುಂದರವಾದ ಪದಪುಂಜಗಳ ಹೆಣಿಗೆ ಹೊಂದಿರುವ ಸಾಹಿತ್ಯ, ಕೊರೊನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ವಿಷಾದದ ಸ್ಥಾಯಿಯಲ್ಲಿ ಕಟ್ಟಿಕೊಡುತ್ತದೆ.
ಹಾಡಿನುದ್ದಕ್ಕೂ ಇಂದಿನ ಸನ್ನಿವೇಶನದ ಚಿತ್ರಣ, ಮಕ್ಕಳ ಆಟಗಳು, ಜನಸಾಮಾನ್ಯರ ಬದುಕು, ಕೊರೊನಾ ವಾರಿಯರ್ಸ್ ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ. ಮುಂದೆ ಓದಿ...
ಸರ್ಕಾರದ ಸಹಭಾಗಿತ್ವದಲ್ಲಿ ಹಾಡು
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯನ್ನು ನೀಡುವ ಸಾಲುಗಳು ಕರ್ತವ್ಯ ಪ್ರಜ್ಞೆಯನ್ನು ನೆನಪಿಸುತ್ತವೆ. ಸರ್ಕಾರದ ಸಹಭಾಗಿತ್ವದಲ್ಲಿ ಈ ಹಾಡನ್ನು ಸಿದ್ಧಪಡಿಸಲಾಗಿದ್ದು, ಬೆಂಗಳೂರಿನ ವಿವಿಧೆಡೆ ಚಿತ್ರೀಕರಣವನ್ನೂ ಮಾಡಲಾಗಿದೆ. ಈ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಲಾಕ್ಡೌನ್ ನಡುವೆಯೂ ಶೂಟಿಂಗ್ ಮಾಡಿದ ಯೋಗರಾಜ್ ಭಟ್!
ಬಣ್ಣ ಧರ್ಮವ ಮಣ್ಣು ಕೇಳುವುದೇ...?
'ರೋಗ ಕೇಳುತಾ ಬರುವುದೇ ಮನುಜನ ಕುಲ ಗೋತ್ರವಾ? ಸಾವು ನೋಡುತ ನಗುತಿದೆ ಬ್ಯಾಂಕ್ ಅಕೌಂಟಿನ ಗಾತ್ರವ! ಬಣ್ಣ ಧರ್ಮವ ಮಣ್ಣು ಕೇಳುವುದೇ...? ಎಂಬ ತತ್ವಜ್ಞಾನದ ಸಾಲುಗಳು ಮನಮುಟ್ಟುತ್ತವೆ.
ಈ ಗೀತೆ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಭಟ್ಟರು ಬರೆದ ಸಾಲುಗಳನ್ನು ಹಂಚಿಕೊಂಡು ಅಭಿಮಾನಿಗಳು 'ಅದ್ಭುತ ಸಾಹಿತ್ಯ' ಎಂದು ಗುಣಗಾನ ಮಾಡುತ್ತಿದ್ದಾರೆ.
'ಈ ಬಾಲಕ ಇವತ್ತಿನವರೆಗೂ ಹಾಡುತ್ತಲೇ ಇದ್ದಾನೆ': ಸ್ಟಾರ್ ಗಾಯಕನ ಅಪರೂಪದ ವಿಡಿಯೋ ಹಂಚಿಕೊಂಡ ಭಟ್ರು
ಆಭಾರಿಯಾಗಿದ್ದೇವೆ
ಮಾನ್ಯ
ಮುಖ್ಯಮಂತ್ರಿಗಳಾದ
ಶ್ರೀ
ಯಡಿಯೂರಪ್ಪ
ಹಾಗು
ನಗರ
ಪೋಲಿಸ್
ಆಯುಕ್ತರಾದ
ಶ್ರೀ
ಭಾಸ್ಕರ್
ರಾವ್
ಅವರು
ತಮ್ಮ
ಅಮೃತ
ಹಸ್ತದಿಂದ
ಹಾಡನ್ನು
ಬಿಡುಗೊಳಿಸಿ
ಮನಃಪೂರ್ವಕವಾಗಿ
ಹಾಡನ್ನು
ಮೆಚ್ಚಿ
ತಂಡದ
ಬೆನ್ನುತಟ್ಟಿದ್ದಕ್ಕಾಗಿ
ಇಡೀ
ತಂಡ
ಅವರಿಗೆ
ಆಭಾರಿಯಾಗಿದ್ದೇವೆ
ಎಂದು
ಯೋಗರಾಜ್
ಭಟ್
ಹೇಳಿದ್ದಾರೆ.
ಸ್ಫೂರ್ತಿ ತುಂಬ ಪ್ರಯತ್ನ
ಅದಾಗಲೇ ಹಾಡನ್ನು ಸಾವಿರಾರು ಮಂದಿ ಮೆಚ್ಚಿ ತಮ್ಮ ಪ್ರತಿಕ್ರಿಯೆಗಳನ್ನು ಕಳುಹಿಸುತ್ತಿರುವುದಕ್ಕಾಗಿ ತಮಗೆಲ್ಲಾ ಅನಂತಾನಂತ ವಂದನೆಗಳು.
ಈ ಕೆಟ್ಟ ಪರಿಸ್ಥಿತಿಯಲ್ಲಿ ನಿಮಗೆಲ್ಲಾ ಸ್ಫೂರ್ತಿ ತುಂಬುವ ಪ್ರಯತ್ನ ತಂಡವಾಗಿ ನಾವು ಮಾಡಿದ್ದೇವೆ.. ಹಾಡನ್ನು ನಿಮ್ಮ ಪ್ರೀತಿ ಪಾತ್ರರಿಗೆ ತಲುಪಿಸುವ ಮೂಲಕ ನೀವೂ ಅವರಿಗೆ ಸ್ಫೂರ್ತಿ ತುಂಬಬೇಕೆನ್ನುವುದೇ ಈ ಹಾಡಿನ ಉದ್ದೇಶ ಮತ್ತು ಇಡೀ ತಂಡದ ಆಶಯ ಎಂದು ತಿಳಿಸಿದ್ದಾರೆ.