Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಂಚ ಅಂಶಗಳ ಜೊತೆಗೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ ಭಟ್ಟರು
'ಪಂಚತಂತ್ರ' ಸಿನಿಮಾದ ಹಾಡುಗಳು ಎಲ್ಲರಿಗೆ ಇಷ್ಟ ಆಗಿವೆ. 'ಶೃಂಗಾರ ಹೊಂಗೆಮರ..' ಎಂದು ಹಾಡು ಬರೆದಿದ್ದ ಭಟ್ಟರು ಈಗ ಪಂಚತಂತ್ರದ ದರ್ಶನ ಮಾಡಿಸಲು ಸಿದ್ಧರಾಗಿದ್ದಾರೆ.
'ಪಂಚತಂತ್ರ' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಸಿನಿಮಾ ಮಾರ್ಚ್ 29 ರಂದು ಗ್ರಾಂಡ್ ರಿಲೀಸ್ ಆಗುತ್ತಿದೆ. ಇಷ್ಟು ದಿನದಿಂದ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಬಿಡುಗಡೆಯ ದಿನಾಂಕ ಕೇಳಿ ಸಂತಸವಾಗಿದೆ. ಕೆ ಆರ್ ಜಿ ಸ್ಟೂಡಿಯೊ ಮೂಲಕ ಸಿನಿಮಾ ವಿತರಣೆ ಆಗುತ್ತಿದೆ.
ಅಂದಹಾಗೆ, 'ಪಂಚತಂತ್ರ' ಸಿನಿಮಾ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನದ ವಿಶೇಷವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು, ಹೀಗಾಗಿ ಮಾರ್ಚ್ ಕೊನೆಯಲ್ಲಿ ಬಿಡುಗಡೆಯಾಗುತ್ತಿದೆ.
ಬಿಡುಗಡೆಯ ಸನಿಹದಲ್ಲಿ 'ಪಂಚತಂತ್ರ'ವನ್ನು ವಿವರಿಸಿದ ಭಟ್ಟರು ಸ್ನೇಹ, ಸಂಬಂಧ, ಸ್ಪರ್ಧೆ, ಸಂಗೀತ ಹಾಗೂ ಮನರಂಜನೆ ಎಂದು ಹೇಳಿದ್ದಾರೆ. ಈ ಎಲ್ಲ ಅಂಶಗಳು ಸಿನಿಮಾದಲ್ಲಿ ಇವೆಯಂತೆ.
ಇನ್ನು ವಿಹಾನ್ ಗೌಡ ಸಿನಿಮಾದ ನಾಯಕನಾಗಿದ್ದು, ಸೊನಾಲ್ ಹಾಗೂ ಅಕ್ಷರ ಗೌಡ ನಾಯಕಿಯರಾಗಿದ್ದಾರೆ. ವಿ ಹರಿಕೃಷ್ಣ ಸಂಗೀತ ಈಗಾಗಲೇ ಹಿಟ್ ಆಗಿದೆ.