Don't Miss!
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- News Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿತ್ಯೋತ್ಸವ ಕವಿಗೆ ಭಾವುಕ ಸಾಲುಗಳ ವಿದಾಯ ಹೇಳಿದ ಯೋಗರಾಜ್ ಭಟ್
ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರು ಇಂದು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಕವಿಗಳು, ರಾಜಕಾರಣಿಗಳು, ಸಿನಿ ಮಂದಿ ಶೋಕ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ, ತಮ್ಮನ್ನು ತಾವು ಸಾಹಿತ್ಯ ವಿದ್ಯಾರ್ಥಿ ಎಂದು ಕರೆದುಕೊಳ್ಳುವ ಯೋಗರಾಜ್ ಭಟ್ ಅವರು ತಮ್ಮ ನೆಚ್ಚಿನ ಕವಿಗೆ ಕವಿತೆಯ ಮೂಲಕವೇ ವಿದಾಯ ಹೇಳಿದ್ದಾರೆ.
ಬರಹಗಾರರಾಗಿರುವ ಯೋಗರಾಜ್ ಭಟ್ ಅವರು ತಮ್ಮ ಭಾವಕೋಶವನ್ನು ಕಲಕುವ ಪ್ರತಿ ಸಂಗತಿಗೆ ಬರಹದ ಮೂಲಕವೇ ಪ್ರತಿಕ್ರಿಯಿಸುತ್ತಾರೆ. ಈಗಲೂ ತಮ್ಮ ಅಭಿಮಾನದ ಕವಿಯ ಅಗಲಿಕೆಗೆ ಬರಹದ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಯೋಗರಾಜ್ ಭಟ್ಟರು ನಿತ್ಯೋತ್ಸವ ಕವಿಯ ನೆನಪಲ್ಲಿ ಬರೆದಿರುವ ಗೀತೆಯ ಸಾಲುಗಳು ಇಲ್ಲಿವೆ...
ಹೃದಯವಾಗಿದೆ ಖಾಲಿ...
ನಿಧನ
ನಗುವನು
ಚೆಲ್ಲಿ
ಹೃದಯವಾಗಿದೆ
ಖಾಲಿ...
ಮರಳಿ
ಕೇಳುವ
ಬನ್ನಿ
ಕವಿ
ನಿಸಾರರ
ಲಾಲಿ...
ವಂದನೆ,
ಅಭಿನಂದನೆ...
ಉಸಿರು ನಿಂತರೆ ನೆನಪು ನಿಲ್ಲುವುದೇ?
ಜನಿಸಿ
ಬಂದರು
ಅವರು
ಎಂದು
ತಿಳಿಯಬೇಕಿದೆ
ನಾವು
ಇಂದು,
ಉಸಿರು
ನಿಂತರು
ನೆನಪು
ನಿಲ್ಲುವುದೇ??
ಹೋಗಿ ಬನ್ನಿ ಕವಿಗಳೇ
ಹೋಗಿ
ಬನ್ನಿ
ಕವಿಗಳೇ
ತಮಗೆ
ಮುಡಿಪಿದು
ಗಾಯನ...
ಮರೆಯಲಾರೆವು
ಎಂದಿಗು
ತಾವು
ಕಲಿಸಿದ
ಜೀವನ...
ಕೊರೊನಾ ಹಾಡು ಜನಪ್ರಿಯವಾಗಿದೆ
ಯೋಗರಾಜ್ ಭಟ್ ಅವರು ಇತ್ತೀಚೆಗಷ್ಟೆ ರಚಿಸಿ, ನಿರ್ದೇಶಿಸಿರುವ ಕೊರೊನಾ ಕುರಿತಾದ ಹಾಡು ಭಾರಿ ಜನಪ್ರಿಯವಾಗಿದೆ. ಭಟ್ಟರು ಬರೆದಿರುವ ಹಾಡನ್ನು ಸಿಎಂ ಯಡಿಯೂರಪ್ಪ ಬಿಡುಗಡೆ ಮಾಡಿದ್ದು, ಹಾಡಿನಲ್ಲಿ ಕಮೀಶನರ್ ಭಾಸ್ಕರ್ ರಾವ್ ಸೇರಿ ಹಲವಾರು ಪೊಲೀಸರು ಕಾಣಿಸಿಕೊಂಡಿದ್ದಾರೆ. ಹಾಡಿನ ಸಂಗೀತ ಸಂಯೋಜನೆ ಅರ್ಜುನ್ ಜನ್ಯ ಮಾಡಿದ್ದರೆ, ಹಾಡಿರುವುದು ವಿಜಯಪ್ರಕಾಶ್.