Don't Miss!
- News India Rain: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ, ಹಿಮಪಾತ ಸಾಧ್ಯತೆ: ಭಾರತದ ಈ ಭಾಗದಲ್ಲಿ ತಂಪೆರೆಯಲಿರುವ ವರುಣ
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿತ್ಯೋತ್ಸವ ಕವಿಗೆ ಭಾವುಕ ಸಾಲುಗಳ ವಿದಾಯ ಹೇಳಿದ ಯೋಗರಾಜ್ ಭಟ್
ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರು ಇಂದು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಕವಿಗಳು, ರಾಜಕಾರಣಿಗಳು, ಸಿನಿ ಮಂದಿ ಶೋಕ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ, ತಮ್ಮನ್ನು ತಾವು ಸಾಹಿತ್ಯ ವಿದ್ಯಾರ್ಥಿ ಎಂದು ಕರೆದುಕೊಳ್ಳುವ ಯೋಗರಾಜ್ ಭಟ್ ಅವರು ತಮ್ಮ ನೆಚ್ಚಿನ ಕವಿಗೆ ಕವಿತೆಯ ಮೂಲಕವೇ ವಿದಾಯ ಹೇಳಿದ್ದಾರೆ.
ಬರಹಗಾರರಾಗಿರುವ ಯೋಗರಾಜ್ ಭಟ್ ಅವರು ತಮ್ಮ ಭಾವಕೋಶವನ್ನು ಕಲಕುವ ಪ್ರತಿ ಸಂಗತಿಗೆ ಬರಹದ ಮೂಲಕವೇ ಪ್ರತಿಕ್ರಿಯಿಸುತ್ತಾರೆ. ಈಗಲೂ ತಮ್ಮ ಅಭಿಮಾನದ ಕವಿಯ ಅಗಲಿಕೆಗೆ ಬರಹದ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಯೋಗರಾಜ್ ಭಟ್ಟರು ನಿತ್ಯೋತ್ಸವ ಕವಿಯ ನೆನಪಲ್ಲಿ ಬರೆದಿರುವ ಗೀತೆಯ ಸಾಲುಗಳು ಇಲ್ಲಿವೆ...
ಹೃದಯವಾಗಿದೆ ಖಾಲಿ...
ನಿಧನ
ನಗುವನು
ಚೆಲ್ಲಿ
ಹೃದಯವಾಗಿದೆ
ಖಾಲಿ...
ಮರಳಿ
ಕೇಳುವ
ಬನ್ನಿ
ಕವಿ
ನಿಸಾರರ
ಲಾಲಿ...
ವಂದನೆ,
ಅಭಿನಂದನೆ...
ಉಸಿರು ನಿಂತರೆ ನೆನಪು ನಿಲ್ಲುವುದೇ?
ಜನಿಸಿ
ಬಂದರು
ಅವರು
ಎಂದು
ತಿಳಿಯಬೇಕಿದೆ
ನಾವು
ಇಂದು,
ಉಸಿರು
ನಿಂತರು
ನೆನಪು
ನಿಲ್ಲುವುದೇ??
ಹೋಗಿ ಬನ್ನಿ ಕವಿಗಳೇ
ಹೋಗಿ
ಬನ್ನಿ
ಕವಿಗಳೇ
ತಮಗೆ
ಮುಡಿಪಿದು
ಗಾಯನ...
ಮರೆಯಲಾರೆವು
ಎಂದಿಗು
ತಾವು
ಕಲಿಸಿದ
ಜೀವನ...
ಕೊರೊನಾ ಹಾಡು ಜನಪ್ರಿಯವಾಗಿದೆ
ಯೋಗರಾಜ್ ಭಟ್ ಅವರು ಇತ್ತೀಚೆಗಷ್ಟೆ ರಚಿಸಿ, ನಿರ್ದೇಶಿಸಿರುವ ಕೊರೊನಾ ಕುರಿತಾದ ಹಾಡು ಭಾರಿ ಜನಪ್ರಿಯವಾಗಿದೆ. ಭಟ್ಟರು ಬರೆದಿರುವ ಹಾಡನ್ನು ಸಿಎಂ ಯಡಿಯೂರಪ್ಪ ಬಿಡುಗಡೆ ಮಾಡಿದ್ದು, ಹಾಡಿನಲ್ಲಿ ಕಮೀಶನರ್ ಭಾಸ್ಕರ್ ರಾವ್ ಸೇರಿ ಹಲವಾರು ಪೊಲೀಸರು ಕಾಣಿಸಿಕೊಂಡಿದ್ದಾರೆ. ಹಾಡಿನ ಸಂಗೀತ ಸಂಯೋಜನೆ ಅರ್ಜುನ್ ಜನ್ಯ ಮಾಡಿದ್ದರೆ, ಹಾಡಿರುವುದು ವಿಜಯಪ್ರಕಾಶ್.