'GST' ಬಗ್ಗೆ ಹಾಡು ಬರೆದವ್ರೆ ಯೋಗರಾಜ್ ಭಟ್ರು
ಇಡೀ ಭಾರತದಲ್ಲಿ ಈಗ ಎಲ್ಲರೂ 'GST' ಅಂತ ತಲೆಕೆಡಿಸಿಕೊಂಡು ಬಿಟ್ಟಿದ್ದಾರೆ. ಎಲ್ಲಿ ಹೋದರೂ, ಎಲ್ಲಿ ಬಂದರೂ ಬರಿ 'GST' ಬಗ್ಗೆನೇ ಮಾತು-ಕಥೆ ಇದೆ. ಈಗ ಇದೇ ಗ್ಯಾಪ್ ನಲ್ಲಿ ನಿರ್ದೇಶಕ ಯೋಗರಾಜ್ ಭಟ್ 'GST' ಬಗ್ಗೆ ಒಂದು ಹಾಡನ್ನು ಬರೆದಿದ್ದಾರೆ.
ಯೋಗರಾಜ್ ಭಟ್ ಬರೆದಿರುವ ಆ ಹಾಡಿನ ಸಾಹಿತ್ಯದ ಎಕ್ಸ್ ಕ್ಲೂಸಿವ್ ಫೋಟೋಗಳು ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ದೊರೆತಿದೆ.

''ಊಟಕ್ಕೆ ಟ್ಯಾಕ್ಸು.. ವಾಂತಿಗೂ ಟ್ಯಾಕ್ಸು..'' ಅಂತ ಭಟ್ಟರು ತಮ್ಮದೇ ಸ್ಟೈಲ್ ನಲ್ಲಿ ಹಾಡನ್ನು ಗೀಚಿದ್ದಾರೆ. 'ಮಗುಳು ನಗೆ' ಸಿನಿಮಾದ 'ಹೊಡಿ ಒಂಬತ್ತ್..' ಎಂಬ ಹಾಡಿನ ದಾಟಿಗೆ ಈ ಹಾಡನ್ನು ಬರೆದಿದ್ದಾರೆ.

ಈ ಹಿಂದೆ 'ದನಕಾಯೋನು' ಸಿನಿಮಾದ ಸಮಯದಲ್ಲಿ ಕಾವೇರಿ ವಿಷಯವಾಗಿ ಯೋಗರಾಜ್ ಭಟ್ ಇದೇ ರೀತಿ ಹಾಡು ಬರೆದಿದ್ದರು. ಈಗ 'GST' ಬಗ್ಗೆ ಭಟ್ಟರು ಬಂದು ಹಾಡು ಬರೆದಿದ್ದಾರೆ.
More from Filmibeat
English summary
Kannada Director yogaraj bhat wrote a song on 'GST'


Click it and Unblock the Notifications











